Home / ಲೇಖನ / ವಿಜ್ಞಾನ / ಕ್ಷಣಗಣನೆಯ ಕಾರು!?

ಕ್ಷಣಗಣನೆಯ ಕಾರು!?

ಶಬ್ದದ ವೇಗ ಒಂದು ಸೆಕೆಂಡಿಗೆ …….. ಆದರೆ (ಬೆಳಕಿನ ವೇಗ-ಒಂದು ಸೆಕೆಂಡಿಗೆ……..) ವಿಜ್ಞಾನಿಗಳು ಜೀವಸೃಷ್ಟಿಯ ಹೊರತು ಪ್ರಪಂಚದ ಅಣುರೇಣುಗಳಲ್ಲಿಯೂ ಹೊಸ ಅವಿಷ್ಕಾರಗಳಿಂದ ಏನೆಲ್ಲ ಚಮತ್ಕಾರಗಳನ್ನು ಇತ್ತೀಚೆಗೆ ಮಾಡುತ್ತಿದ್ದಾರೆ !! ಇದರ ಫಲವಾಗಿ ಇದೀಗ ಗಂಟೆಗೆ ೭೬೩ ಮೈಲಿ ಚಲಿಸುವ ಥ್ರಸ್ಟ್ S.S.C. ಎಂಬ ಕಾರು ಶಬ್ದದ ವೇಗಕ್ಕಿಂತಲೂ ವೇಗವಾಗಿ ಚಲಿಸಬಲ್ಲದು ಎಂಬ ಸತ್ಯವನ್ನು ದಾಖಲಿಸಿದೆ. ಇದನ್ನು ರಿಚರ್ಡ್ ನೋಬಲ್ ಅವರು ಶ್ರಮದ ಸಾಧನೆಯಿಂದ ಸಿದ್ಧಪಡಿಸಿದ್ದಾರೆ. ಶ್ರವಣಾತೀತ ವೇಗದಲ್ಲಿ ಚಲಿಸುವ
ಕಾರಣಕ್ಕಾಗಿ ಈ ಕಾರಿಗೆ “ನೂವರ್ ಸಾನಿಕ್‌” ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಎರಡು ಜೆಟ್ ಯಂತ್ರಗಳಿಂದ ಶಕ್ತಿಪಡೆಯುವ ಈ ಕಾರಿನ ವಿನ್ಯಾಸವನ್ನು ಗಣಕೀಯ ದ್ರವಗತಿಶಾಸ್ತ್ರ (Computationed Fluid Mechanics) ದ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. ಶಬ್ದದ ವೇಗದಲ್ಲಿ ಚಲಿಸುವ ಯಾವುದೇ ವಸ್ತುವಿನ ಸುತ್ತ‌ಉಂಟಾಗುವ ಶಾಕಿನ ಅಲೆಗಳ ಆ ವಸ್ತುವಿನ ಚಲನೆಯಲ್ಲಿ ಆಸ್ತಿರತೆಯನ್ನುಂಟು ಮಾಡುತ್ತವೆ. ಆದರೆ ಸೂಕ್ಷ್ಮಲೆಕ್ಕಚಾರಗಳ ವಿನ್ಯಾಸದಿಂದ ಈ ಅಸ್ಥಿರತೆಯನ್ನು ಇದರಲ್ಲಿ ದುರ್ಬಲಗೊಳಿಸಲಾಗಿದೆ. ೫೪ ಅಡಿಗಳಷ್ಟು
ಉದ್ಧವಿರುವ ಈ ಕಾರು ಪ್ರತಿ ಸೆಕೆಂಡುಗಳಲ್ಲಿ ಒಂದು ಮೈಲಿ ದೂರ ಚಲಿಸುತ್ತಿದೆ ಎಂದಾಗ ಊಹೆಗೂ ನಿಲುಕದಂತಾಗುತ್ತದೆ. ರಾಮಾಯಣ ಕಾಲದಲ್ಲಿ ಪುಷ್ಪಕ ವಿಮಾನಗಳು ಕ್ಷಣಗಣನೆಯಲ್ಲಿ ಮಾಯವಾಗಿ ದೂರವನ್ನು ತಲುಪುತಿದಾವೆಂದು ಓದಿದ್ದೇವೆ. ಈ ಕಾರೂ ಕೂಡ ಇದೇ ಗತಿಯಲ್ಲಿ ಚಲಿಸಿ ಹೊಸ ಲೋಕಕ್ಕೊಂದು ಸವಾಲಾಗಿ ನಿಂತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...