Home / ಲೇಖನ / ಇತರೆ / ಕಪ್ಪು ಬಣ್ಣದವರು – ದೊಡ್ಡವರ ಮೇಲೆ ಪ್ರೀತಿ

ಕಪ್ಪು ಬಣ್ಣದವರು – ದೊಡ್ಡವರ ಮೇಲೆ ಪ್ರೀತಿ

ಬೇಸಿಗೆ ಬಂದ ಹಾಗೆಲ್ಲ ಜನರು ತಂಗಾಳಿಯ ಸಲುವಾಗಿ ಬಾಯಿ ತೆಗೆದುಕೊಂಡು ಕೂಡುವರು, ಬಿಸಿಲು ಬಲಿತಂತೆ ಮನೆಯೊಳಗಿಂದ ಹೊರಗೆ ಬಂದು ಬಂಕದಲ್ಲಿ ಕುಳಿತುಕೊಳ್ಳುವರು. ಹೊರಗೆ ಕುಳಿತವರು ಸಮೀಪದ ಗಿಡಕ್ಕೆ ಹೋಗುವರು. ಶ್ರೀಮಂತರು ಮಹಾಬಳೇಶ್ವರ, ಉಟಕಮಾಂಡ ಸಿಮ್ಲಾ ಮುಂತಾದವುಗಳಿಗೆ ಹೋಗುವರು. ಬಡವರು ವರ್ತಮಾನಪತ್ರದಲ್ಲಿ ತಂಗಾಳಿಯನ್ನು ಓದುವರು !
****
ಕಪ್ಪು ಬಣ್ಣದವರೆಲ್ಲ ಕುರೂಪಿಗಳಲ್ಲ, ಕೆಂಪು ಬಣ್ಣದವರೆಲ್ಲ ಸುರೂಪಿಗಳೂ ಅಲ್ಲ. ಹಾಗೆ ಇದ್ದದ್ದಾದರೆ ಶೀತ ಪ್ರದೇಶದಲ್ಲಿರುವ ಬಿಳಿಯ ಬಣ್ಣದವರ ಶಬ್ದಕೋಶದಲ್ಲಿ “ಕುರೂಪಿ” ಎಂಬ ಶಬ್ದವೇ ಇರಬಾರದಾಗಿತ್ತು. ಅದರಂತೆ ಉಷ್ಣ ಕಟಿಬಂಧದಲ್ಲಿ ಇರುವ ಕಪ್ಪು ಜನರ ಶಬ್ದ ಕೋಶದಲ್ಲಿ “ಸುಂದರ” ಎಂಬ ಶಬ್ದವೂ ಇರಬಾರದು.  ಬಣ್ಣದವರನ್ನು ಕಂಡರೆ ನಗುವರು. ಆದರೆ ಇದರಲ್ಲಿ ಬಣ್ಣದವರದು ಏನು ತಪ್ಪು ? ಕೆಂಪು ಬಣ್ಣದವರನ್ನು ಕಂಡರೆ ತಾವು ನಗದಿರುವದೇ ಅವರ ತಪ್ಪು ! ಸದಾ ಸರ್ವರಿಗೂ ಉಪಯೋಗ ಬೀಳುವ ಕಬ್ಬಿಣವು ಕಪ್ಪು; ನಿತ್ಯ ರೊಟ್ಟಿಯನ್ನು ಬೇಯಿಸಿ ಕೊಡುವ ಹಂಚು ಕಪ್ಪು; ಮಸಿಯು ಕಪ್ಪು; ಚಹಾ ಪುಡಿ ಕಪ್ಪು, ಚಹಾ ಕುಡಿಯುವ ಬಟ್ಟಲದ ಬಣ್ಣವು ಬಿಳಿಯದಾದರೂ ಹೆಸರು ಕಪ್ಪು, ಹೀಗೆ ಕಪ್ಪು ಅಭಿಮಾನಾಸ್ಪದವಾಗಿರುವದೇ ಹೊರತು ತಿರಸ್ಕರಣೀಯವಾಗಿರುವದಿಲ್ಲ.
     *      *     *      *
ಮಿ. ಲಾಯಿಡ ಜಾರ್ಜರು ಜಗತ್ತಿನ ರಾಜಕಾರಣ ಚತುರರಲ್ಲಿ ಶ್ರೇಷ್ಠರೆಂದು ಎಣಿಸಲ್ಪಡುತ್ತಾರೆ. ಇವರು ೧೯೧೨ನೆಯ ಇಸ್ವಿಯಲ್ಲಿ ಇಂಗ್ಲೆಂಡಿನ ಹಣಕಾಸಿನ ಮಂತ್ರಿಗಳಾಗಿದ್ದಾಗ ಇವರ ಹತ್ತರ ಒಬ್ಬ ತರುಣನು ಬಂದನು. ಬರ್ಫದಿಂದ ಬಿಗಿದ ಹಿಮಸಾಗರದ ಮಧ್ಯದಲ್ಲಿ ಉತ್ತರ ಧ್ರುವಬಿಂದುವಿನ ಮೇಲೆ ಇಂಗ್ಲಂಡದ ನಿಶಾನಿಯನ್ನು ಹಚ್ಚ ಬೇಕೆಂಬುದು ಇವನ ಸಾಹಸದ ಮಹತ್ವಾಕಾಂಕ್ಷೆ. ಇದಕ್ಕಾಗಿ ಲಾಯಿಡ ಜಾರ್ಜದಿಂದ ಧನಸಹಾಯ ಕೇಳಿದನು. ಆಗ ಲಾಯಿಡ ಜಾರ್ಜರು ಒಂದು ಪತ್ರವನ್ನು ಬರೆದು ಕೊಟ್ಟು ಆ ತರುಣನನ್ನು ತನ್ನೊಬ್ಬ ಶ್ರೀಮಂತ ಮಿತ್ರನ ಕಡೆಗೆ ಕಳಿಸಿದರು. ಆ ಶ್ರೀಮಂತನು ತರುಣನಿಗೆ ಅಂದದ್ದು, “ತಮ್ಮಾ, ನೀನು ಒಬ್ಬನೇ ಉತ್ತರ ಧ್ರುವಬಿಂದುವಿಗೆ ಹೋಗುವಿಯಾದರೆ ನಿನಗೆ ೧೦ ಸಾವಿರ ಪೌಂಡು ಕೊಡುವೆನು. ಲಾಯಿಡ ಚಾರ್ಜರನ್ನೂ ನಿನ್ನ ಸಂಗಡ ಒಯ್ಯುವಿ ಯಾದರೆ ನಿನಗೆ ೫೦ ಸಾವಿರ ಪೌಂಡು ಕೊಡುವೆನು. ಲಾಯಿಡ ಜಾರ್ಜರನ್ನು ಬರ್ಫದಲ್ಲಿ ಬಿಟ್ಟು ಒಬ್ಬನೇ ತಿರುಗಿ ಬರುವಿಯಾದರೆ ಒಂದು ಲಕ್ಷ ಪೌಂಡು ಕೊಡುವೆನು ! “
****
ಜರ್ಮನಿಯ ನಾಜಿ ಸರ್ವಾಧಿಕಾರಿಯಾಗಿದ್ದ ಹಿಟ್ಲರನು ಯಹೂದಿ ಜನರನ್ನು ಜರ್ಮನಿಯಿಂದ ಹೊರಗೆ ಹಾಕಲು ಪ್ರಾರಂಭಿಸಿದಂದಿನಿಂದ ಯಹೂದಿ ಜನರು ಅವನ ವೈರಿಗಳಾದರು. ಒಮ್ಮೆ ಎರಡು ರಾಜಮಾರ್ಗಗಳು ಕೂಡಿದ ಚೌಕಿನ ಕಡೆಗೆ ಒಂದೊಂದು ಮಾರ್ಗದಿಂದ ಒಂದೊಂದು ಮೋಟರ ಕಾರು ಅತಿ ವೇಗದಿಂದ ಬರುತ್ತಿದ್ದವು. ಹಾಗೆಯೇ ಬಂದಿದ್ದರೆ ದುರ್ಘಟನೆ ಯಾಗಿ ಅನಾಹುತವಾಗುವ ಸಂಭವವಿತ್ತು. ಅಲ್ಲಿಯೇ ನಿಂತಿದ್ದ ಯಹೂದಿ ಹುಡುಗನೊಬ್ಬನು ತಟ್ಟನೆ ಚೌಕಿನ ಮಧ್ಯದಲ್ಲಿ ಪೋಲಿಸ ಸಿಪಾಯಿಯಂತೆ ನಿಂತು, ಓಂದು ಮೋಟರಿಗೆ ಹೋಗಲಿಕ್ಕೂ ಮತ್ತೊಂದು ಮೋಟರಿಗೆ ನಿಲ್ಲಲಿಕ್ಕೂ ಸನ್ನೆ ಮಾಡಿದನು. ನಿಂತ ಗಾಡಿಯಲ್ಲಿದ್ದ ಹಿಟ್ಲರನು ಬಹಳ ಸಂತುಷ್ಟನಾದನು. ಆ ಹುಡುಗನನ್ನು ಕರೆದು ಹಿಟ್ಲರನು ಎಂದ: ” ನೀನು ಇಂದು ಜರ್ಮನಿಯ ಸರ್ವಾಧಿಕಾರಿಯಾದ ಹಿಟ್ಲರನನ್ನು ಉಳಿಸಿರುವಿ. ಏನು ಬೇಡುವಿ ಬೇಡು” ಒಂದು ಕ್ಷಣಹೊತ್ತು ವಿಚಾರಿಸಿ ತಲೆ ತುರಿಸುತ್ತ ಆ ಯಹೂದಿ ಹುಡುಗನು ಹೀಗೆ ಅಂದನು : “ನಾನು ನಿಮ್ಮನ್ನು ಉಳಿಸಿದ ಸಂಗತಿಯನ್ನು ಅಪ್ಪನಿಗೆ ಹೇಳಬೇಡಿರಿ. ಇಷ್ಟೇ ಸಾಕು!?”
*****
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...