Home / ಲೇಖನ / ಇತರೆ / ಇಲೆಕ್ಶನ್

ಇಲೆಕ್ಶನ್

“ಇಲೆಕ್ಶನ್” ಎಂದಾಕ್ಷಣ ಶಾಲೆಯ ಹುಡುಗರಿಗೆ ಡ್ರಿಲ್ ಮಾಸ್ತರರು “ಅಟೆನ್ಶನ್ ” ಅಂದಂತೆ ಆಗುತ್ತದೆ. ಅಂಗಾಂಗದಲ್ಲಿ ವಿದ್ಯುತ್ ಪ್ರವೇಶವಾದಂತೆ ಆಗುತ್ತದೆ. ಕಿವಿಗಳು ನೀಟಾಗುತ್ತವೆ. (ಅಂದರೆ ಉದ್ದವಾಗುತ್ತವೆಂದಲ್ಲ!) ಅಂಗಾಂಗದಲ್ಲಿ ರೋಮಾಂಚನವಾಗುತ್ತದೆ. ಕಣ್ಣುಗಳು ತೆರೆಯುತ್ತವೆ. ಬಾಯಿಯು ಮುಚ್ಚುತ್ತದೆ. ಮೂಗು ಹಿಡಿದರೆ ಬಾಯಿ ತಾನೇ ತೆರೆಯುತ್ತದೆಂದು ಇಲ್ಲಿ ಬರೆಯುವ ಆವಶ್ಯಕತೆ ಇಲ್ಲ !
****
ಇಲೆಕ್ಶನ್ದ ಸುದ್ದಿ ಹೊರಟರೆ ಮರಾಠಿ ಭಾಷೆಯಲ್ಲಿ ಬರೆದ “ಸ್ಥಾನಿಕ ಸ್ವರಾಜ್ಯ” ಎಂಬ ನಾಟಕವು ತನ್ನಿಂದ ತಾನೇ ನೆನಪಾಗುತ್ತದೆ. ಸಿರಿಗನ್ನಡಂ ಗೆಲ್ಗೆ ! ಕನ್ನಡದಲ್ಲಿ ಅಂಥ ನಾಟಕವಿರದಿದ್ದರೆ ಸುಮ್ಮನೆ ಕೂಡ್ರುವಾ, ಮರಾಠಿ ನಾಟಕದ ಉಲ್ಲೇಖವಿಲ್ಲೇಕೆ ?
ಇಲೆಕ್ಶನ ಬಂತೆಂದರೆ ಉಮೇದವಾರರಿಗೆ ಬಲು ಹುರುಪು, ಉಮೇದವಾರರ ಏಜಂಟರಿಗಂತೂ ಹೆಚ್ಚಿನ ಹುರುಪು. ಮತದಾರರ ಗೋಳಂತೂ ನಾಟಕ ಬರೆಯುವ ಹಾಗೆ ಆಗುತ್ತದೆ. ಅಂದರೆ ಮೋಜಿನದಾಗುತ್ತದೆಂದಲ್ಲ. “ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ !”
ಪಾಶ್ಚಾತ್ಯ ದೇಶಗಳಲ್ಲಿ ಇಲೆಕ್ಶನ್ ಬಂತೆಂದರೆ ಎತ್ತ ನೋಡಿದತ್ತ ಸಭೆಗಳು ಕೂಡುತ್ತವೆ. ಭಿನ್ನ ಭಿನ್ನ ಪಕ್ಷದ ಉಮೇದವಾರರು ತಾವು ಮಾಡಿದ ಕಾರ್ಯಕಲಾಪಗಳನ್ನು ವಿಸ್ತರಿಸಿ ಬೆಳಿಸಿ ಹೇಳೆ, ಮುಂದೆ ಮಾಡಬಹುದಾದ  ಕಾರ್ಯಕ್ರಮವನ್ನು ಮತದಾರರ ಎದುರಿಗೆ ಇಟ್ಟು, ಅವರ ಬೆಂಬಲವನ್ನು ಅಪೇಕ್ಷಿಸುತ್ತಾರೆ. ನಮ್ಮ ದೇಶದಲ್ಲಿ ಮೋಟರಿನ ಅನುಕೂಲತೆಯನ್ನು ಮಾಡಿ (ಅಂದರೆ ಮೋಟಾರಿನಲ್ಲಿ ಮತದಾರರನ್ನು ಹೊತ್ತು ತಂದು!) ತರ ತರದ ಪಕ್ವಾನ್ನಗಳನ್ನು ತಿನ್ನಿಸಿ ಹೋಟು ತೆಗೆದುಕೊಳ್ಳುತ್ತಾರೆ.
ತಾರತಮ್ಯವು ಇಲ್ಲಿಗೆ ಮುಗಿಯಲಿಲ್ಲ. ಪಶ್ಚಿಮದಲ್ಲಿ ಒಬ್ಬ ಉಮೇದವಾರನು ಆರಿಸಿ ಬಂದ ಮೇಲೆ ಮತದಾರಸಂಘಕ್ಕೆ ಇಲೆಕ್ಶನದ ವೇಳೆಯಲ್ಲಿ ಕೊಟ್ಟ ಕಾರ್ಯಕ್ರಮದ ವಚನವನ್ನು ಪಾಲಿಸಲು ಪ್ರಯತ್ನಿಸುತ್ತಾನೆ. ನಮ್ಮ ದೇಶದಲ್ಲಿ ಅದರ ವಿಪರೀತ. ಹೋಟು ಹಾಕಿ ಮತದಾರನು ಹೊರಗೆ ಬಂದ ಕೂಡಲೆ ಅವನನ್ನು ಕೇಳುವವರೇ ಇಲ್ಲ. ಮಾತನಾಡಿಸುವವರಿಲ್ಲ. ತಿರುಗಿ ಮನೆಗೆ ಒಯ್ಯಲು ಮೋಟಾರಿಲ್ಲ. ಪಕ್ವಾನ್ನದ ಮಾತಂತು ಇಲ್ಲೇ ಇಲ್ಲ. ಪಕ್ವಾನ್ನವು ಇನ್ನೂ ಹೋಟು ಹಾಕದ ಮತದಾರರ ಸಲುವಾಗಿ ಇರುತ್ತದಷ್ಟೇ. ಹೋಟು ಹಾಕಿ ಹೊರಗೆ ಬಂದವರ ಸಲುವಾಗಿ ಇರುವದಿಲ್ಲ. ಆದುದರಿಂದ ಮುಂದಿನ ಇಲೆಕ್ಶನದಲ್ಲಿ ಒಮ್ಮೆ ಬಿಟ್ಟು ಎರಡು ಸಾರೆ ಪಕ್ವಾನ್ನ ಭುಂಜಿಸಬೇಕೆನ್ನುವವರು ಸಂಜೆಯ ತನಕ ಹೋಟು ಹಾಕುವದನ್ನು ತಡೆದು ಚೈನಿ ಹೊಡೆಯಬೇಕೆಂದು ನಮ್ಮ ಪ್ರೇಮ ಪೂರ್ವಕ ಸಲಹೆ!
  * * * *
ಒಮ್ಮೆ ಇಂಗ್ಲೆಂಡಿನಲ್ಲಿ ಸಭೆಯು ಕೂಡಿತು ಇಲೆಕ್ಶನ ಸಭೆಯು. ಉಮೇದನಾರನೊಬ್ಬನು ಆವೇಶ ಪೂರ್ವಕವಾಗಿ ಭಾಷಣ ಮಾಡುತ್ತಿದ್ದನು. ಸಭಿಕರಲ್ಲಿ ವಿರೋಧ ಪಕ್ಷದ ಮತದಾರರೂ ಇದ್ದರು. ಅವರಲ್ಲೊಬ್ಬನು ಎದ್ದು ನಿಂತು ಉಮೇದವಾರನಿಗೆ ಅಂದ: “ನೀವು ಬೇಕಾದ್ದನ್ನು ಹೇಳಿರಿ, ಅದು ನನ್ನ ಒಂದು ಕಿವಿಯಿಯಿಂದ ಒಳಹೊಕ್ಕು ಎರಡನೆಯ ಕಿವಿಯಿಂದ ಹೊರಬೀಳುತ್ತದೆ.” ತಟ್ಟನೆ ಉಮದನಾರನು ನುಡಿದ: ಓಹೋ ! ನಿಮ್ಮ ಎರಡೂ ಕಿವಿಗಳ ನಡುವೆ ಆರಪಾರ ದಾರಿ ಇರಲಿಕ್ಕೆ ಬೇಕು!”
  * * * *
ಇಂಗ್ಲಂಡದಿಂದ ಪರದೇಶಗಳಿಗೆ ಹೋಗುವ ಮತ್ತು ಪರದೇಶದಿಂದ ಇಂಗ್ಲಂಡಕ್ಕೆ ಬರುವ ಸರಕುಗಳ ಮೇಲೆ ಬಹಳ ದಿವಸಗಳಿಂದ ಕರವಿದ್ದಿಲ್ಲ. ಕರವಿರಬಾರದೆಂದೇ ಪ್ರಸಿದ್ದ ಮುತ್ಸದ್ದಿಗಳ ಮತ್ತು ಅರ್ಥಶಾಸ್ತ್ರ ವಿಶಾರದರ ಅಭಿಪ್ರಾಯವಿತ್ತು. ಈಗಾದರೂ ರಾಜಕಾರಣ ಚತುರರಾದ ಲಾಯಿಡ ಜಾರ್ಜರ ಅಭಿಪ್ರಾಯವು ಹೀಗೇ ಇರುತ್ತದೆ. ಆದರೆ ೧೯೩೧ನೇ ಇಸ್ವಿಯಲ್ಲಿ ನಡೆದ ಇಲೆಕ್ಶನದ ಕಾಲಕ್ಕೆ ಮಂದ ಪಕ್ಷದವರು ಕರ ಹೇರಬೇಕೆಂದು ತಮ್ಮ ಕಾರ್ಯಕ್ರಮವನ್ನು ನಿಶ್ಚಯಿಸಿದರು. ಆಗ ಒಂದು ಇಲೆಕ್ಶನ ಸಭೆಯಾದ ನಂತರ ಇಬ್ಬರು ಪ್ರತಿಸ್ಪರ್ಧಿಗಳಲ್ಲಿ ಕೆಳಗಿನಂತೆ ಸಂಭಾಷಣೆಯಾಯಿತು:-
ಕರಕ್ಕೆ ಪ್ರತಿಕೂಲನು: “ಏನಯ್ಯ, ಸ್ವರ್ಗವಾಸಿ ಆಂಗ್ಲ ಮುತ್ಸದ್ದಿಗಳೆಲ್ಲ ಆಯಾತ-ನಿರ್ಯಾತವಾಗುವ ಸರಕುಗಳ ಮೇಲೆ ಕರ ಹೇರಬಾರದೆಂದು ಅನ್ನುತ್ತಿದ್ದರು. ನೀವು ಕರ ಹೇರಹತ್ತಿದಿರಿ. ಈ ವಿಷಯ ಅವರ ಆತ್ಮಕ್ಕೆ ಗೊತ್ತಾದರೆ ಕಳವಳ ಪಡದೆ ಇರರು.”
ಕರಕ್ಕೆ ಅನುಕೂಲನು:- ನಾನು ಸ್ವರ್ಗಕ್ಕೆ ಹೋದ ಮೇಲೆ ಅವರಿಗೆ ತಿಳಿಸಿ ಹೇಳುವೆನು.
ಕರಕ್ಕೆ ಪ್ರತಿಕೂಲನು:- ಒಂದು ವೇಳೆ ಅವರು ಸ್ವರ್ಗದಲ್ಲಿರದಿದ್ದರೆ ?
ಕರಕ್ಕೆ ಅನುಕೂಲನು; ನೀನು ಅವರಿಗೆ ತಿಳಿಸಿ ಹೇಳು !!
*****
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...