ಕವಿ

ನನಗೆ ಕವಿಯಾಗಬೇಕೆಂಬ ಇಚ್ಛೆ ಬಹಳ ಕಡೆಗೆ ನನ್ನನ್ನು ‘ಕವಿ’ ಎಂದು ಕರೆದರೆ ಸಾಕು; ಅಷ್ಟೇ ಸಂತೋಷ, ಆದರೆ ಕವಿತೆ ಬರೆಯದಿದ್ದರೆ, ಕವಿಯೆಂದು ಯಾರು ಕರೆಯುವರು ? ಅಂತೆಯೇ ಕವಿತೆ ಬರೆಯಲಿಕ್ಕೆ ಪ್ರಾರಂಭಿಸಿದೆ. ಅಂದರೆ, ಪ್ರಾರಂಭಿಸಲು ಪ್ರಯತ್ನಿಸಿದೆ. ಕೆಳಗೆ ಕೊಟ್ಟ ಕೆಲವು ಮಾದರಿಯ ಪದ್ಯಗಳು ನನ್ನ ಪ್ರಯತ್ನದ ಪುಷ್ಪ ಫಲಗಳು. ನನ್ನ ಪ್ರಯತ್ನವು ಸಫಲವಾಯಿತೋ ನಿಷ್ಪಲವಾಯಿತೋ ವಾಚಕ ವೃಂದವೇ ಹೇಳಬೇಕು.
ಆದರೆ “ನರಕವಿಗಳಿದ್ದಲ್ಲಿ ವರಕವಿಗಳು ವಿದ್ಯೆ ತೋರಬಾರದು (!?)” ಎಂದು ಕವಿಯು ಹೇಳಿದಂತೆ ಕವಿಗಳು ಮಾತ್ರ ಇವುಗಳ ಕಡೆಗೆ ಲಕ್ಷ್ಯ ಕೊಡಬಾರದು. ನನ್ನ ಕವಿತೆಗಳು ಜನಸಾಮಾನ್ಯರಿಗಾಗಿ ಇವೆ; ಕವಿಗಳಿಗಲ್ಲ. ಗುಡ್ಡಕ್ಕೆ ಕಲ್ಲು ಹೊರುವಷ್ಟು ಹುಚ್ಚ ನಾನಲ್ಲ. ಸಮುದ್ರಕ್ಕೆ ನೀರಿನ ಕೊಡ ಹೊರುವಷ್ಟು ವಿಚಾರಶೂನ್ಯನಲ್ಲ. ಇಲೆಕ್ಟ್ರಿಕ್ ಪಾವರ ಹೌಸಿಗೆ ಕೈ ದೀಪ ಹಿಡಿದುಕೊಂಡು ಹೋಗುವಷ್ಟು ಮೂರ್ಖನಲ್ಲ. ‘ಆತ್ಮಸಂತೋಷದಿಂದ ಮತ್ತು ಅಕ್ಕಲ ಹುಷಾರಿಯಿಂದ’ ಬರೆಯುತ್ತಿರುವ ನಾನು ಜಾಣನಿದ್ದೇನೆ! ನನಗೆ ತಿಳುವಳಿಕೆ ಇದೆ !!
  * * *
ಕವಿಯು ತನ್ನ ಸ್ಫೂರ್ತಿಯ ಬಲದಿಂದ ಅರ್ವಾಚೀನ ಶಾಸ್ತ್ರೀಯ ಕೌತುಕಗಳಿಗಿಂತ ಹೆಚ್ಚು ಅಗಾಧವಾದ ಕೃತಿಗಳನ್ನು ಮಾಡಬಲ್ಲನು; ವಸ್ತುಗಳನ್ನು ರಚಿಸಬಲ್ಲನು. ನಾನೇ ಒಂದು ಕಡೆಯಲ್ಲಿ ಹೀಗೆ ಬರೆದಿಲ್ಲವೆ ?
ಹಕ್ಕಿಯಾಗಿ ಹಾರುವೆನು
ಚಿಕ್ಕಿಯಾಗಿ ಬೆಳಗುವೆನು
ಬೆಕ್ಕಿನಂತೆ ಜಿಗಿಯುವೆನು
ಸೊಕ್ಕಿನಿಂದ ಸಂದಿಗೊಂದಿಗಳಲಿ ||
***
ಸುಗ್ರಾಸ ಭೋಜನವಿಲ್ಲದೆ ಯಾರೂ ಕವಿಯಾಗಲಾರರೆಂದು ಅನ್ನುವ ವಾಡಿಕೆ. ಆದರೆ ಇದು ತಪ್ಪು. ವಾಕ್ಪಟದಲ್ಲಿ ನಟನು ಘೋರವಾದ ಅರಣ್ಯದಲ್ಲಿ ಹಸಿವೆ ನೀರಡಿಕೆಗಳಿಂದ ಬಳಲುತ್ತಿದ್ದರೂ, ಜಿಗಿಜಿಗಿದು ಹಾಡುವದನ್ನು ಕಣ್ಣಾರೆ ಕಾಣುತ್ತೇವೆ. ನಾನು ಕವಿ ಇದ್ದರೇನಾಯಿತು ? ನೀವು ಕವಿ ಇರದಿದ್ದರೇನಾಯಿತು ? ಕಂಡದ್ದನ್ನೂ ಕೇಳಿದ್ದನ್ನೂ ನಂಬಲೇಬೇಕು. ನಂಬುಗೆಯ ವಿಷಯವಾಗಿ ನನ್ನ ಬೇರೊಂದು ಕವಿತೆಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ:
ಕಂಡದ್ದನ್ನು ನಂಬದವರಾರು
ಕಾಣದ್ದನ್ನು ನಂಬುವವರಾರು
ಕಣ್ಣು ಕೊಟ್ಟ ಪರಮಾತ್ಮನು
ಮುಕ್ಕಣ್ಣನಲ್ಲವೇ ಮರುಳೇ ?
* * *
ಕಡೆಗೊಮ್ಮೆ ಕವಿಯಾದೆ! ನೀವೂ ದಯವಿಟ್ಟು ನನ್ನನ್ನು ಕವಿಯೆಂದು ಕರೆಯಿರಿ. ದೈವದ ಬಾಯಿಯಲ್ಲಿ ದೇವರಿದ್ದಾನೆ. ನೀವೆಲ್ಲ ಹಾರೈಸಿದರೆ, ಕವಿಯಾಗಿಯೇ ತೀರುವೆನು, ಯಾವನೊಬ್ಬನನ್ನು “ಹುಚ್ಚ” “ಹುಚ್ಚ” ಎಂದು ಹುಡುಗರು ಬೆನ್ನು ಹತ್ತಿದರೆ ಜಾಣನೂ ಹುಚ್ಚನಾಗುವದು ಸ್ವಾಭಾವಿಕ. ಹಾಗೆಯೇ ನೀವೆಲ್ಲರೂ ‘ಕವಿ’ ಎಂದು ಕರೆದರೆ ನಾನೂ ಕವಿಯಾಗುವದು ನಿಶ್ಚಯ. ಆ ಮೇಲೆ ಇದರಂತೆಯೇ ನೂರಾರು ಕವಿತೆಗಳನ್ನು ಬರೆದು ನಿಮ್ಮೆದುರಿಗೆ ಇಡುವೆ!
  * * * *
ಇಷ್ಟರಲ್ಲಿ ಒಂದು ಹಳೆಯ ಮಾತು ನೆನಪಾಯಿತು:
ಧಾರವಾಡದಿಂದ ಹೊರಡುವ ಕನ್ನಡ ಮಾಸಿಕಕ್ಕೆ ಓರ್ವ “ಕವಿ”ಯು ಒಂದು “ಕವಿತೆ” ಯನ್ನು ಕಳಿಸಿದನು, ಪಾಪ! ಕವಿಗೆ ಪದವಿ ಬಿರುದಾವಳಿಗಳಿದ್ದಿಲ್ಲ. ಮಾಸಿಕವು ಮೇಲ್ತರಗತಿಯದು. ಅದರ ಸಂಪಾದಕರು ನಾಮಾಂಕಿತ ವಾಂಙ್ಮಯ ವಿಶಾರದರು ! ಆದ್ದರಿಂದ ” ಕವಿ ”ಯು ಭೀತಿಗೊಂಡು, “ನನ್ನ ಕವಿತೆಯನ್ನು ತಿದ್ದಿ ನಿಮ್ಮ ಮಾಸಿಕದಲ್ಲಿ ಸೇರಿಸಿರಿ. ಇದರಂತೆ ಮುಂದೆಯೂ ಕವಿತೆ ಕಳಿಸುವೆ ” ಎಂದು ಮುಂತಾಗಿ ಬರೆದಿದ್ದನು. ಅದಕ್ಕೆ ಪ್ರತ್ಯುತ್ತರವಾಗಿ ಸಂಪಾದಕ ಮಹಾಶಯರು ಹೀಗೆ ಬರೆದರು: “ನಾವು ನಿಮ್ಮ ಕವಿತೆಯನ್ನು ತಿದ್ದಿ ಹಾಕುವವರಿದ್ದೆವು. ಆದರೆ ಮುಂದೆ ಪುನಃ ಕವಿತೆಗಳನ್ನು ಕಳಿಸುವ ಬೆದರಿಕೆಯನ್ನು ನೋಡಿ ಈಗ ಕಳಿಸಿದ ಕವಿತೆಯನ್ನು ಈ ಪತ್ರದ ಜೊತೆಗೆ ತಿರುಗಿ ಕಳಿಸಿದ್ದೇವೆ!!”
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...