Home / ಕವನ / ಕವಿತೆ / ‘ನರಸಿಂಗ’ ನಿಗೆ ಮರುಳಾದ ಮಗಳು

‘ನರಸಿಂಗ’ ನಿಗೆ ಮರುಳಾದ ಮಗಳು

(ಭಗವನ್ಮೋಹಾವಿಷ್ಟಳಾದ ಮಗಳನ್ನು ನೋಡಿ ತಾಯಿಯ ಮಾತು)
(ನಮ್ಮಾಳ್ವರ್ರವರ ಸಿರಿಬಾಯಿನುಡಿಯ ಎರಡನೆಯ ಶತಕದ ನಾಲ್ಕನೆಯ ದಶಕ)
ಆಡಿಯಾಡಿ ಮನಕರಗಿ ಹಾಡನು
ಹಾಡಿ ಹಾಡಿ ಕಂಬನಿಕರೆದೆಲ್ಲೆಡೆ
ನೋಡಿ ನೋಡಿ ನರಸಿಂಗಾ ಎನ್ನುತ
ಬಾಡಿ ಹೋದಳೀ ಕಳೆಮೊಗದವಳು
ಏನನರಿಯದೀ ಚೆಲುಮಗು ನಿಮ್ಮನು
ಕಾಣುವಾಸೆಯೊಳು ಸೊರಗಿರೆ, ಬಲ್ಮೆಯ
ಬಾಣನ ಸಾಸಿರ ತೋಳ್‌ತರಿದ ನೀವು
ಕಾಣಿಸಿಕೊಳ್ಳಲು ದಯೆತೊರಿದಿಹಿರೇ!
ಕೊರಗುವ ಮನದೊಳು ಬೆಂಕಿಯ ಬಳಿಯೊಳು
ಅರಗು ಮೇಣದೊಲು ಕರಗುವಳಿವಳು
ಮರುಕವಿಲ್ಲ ನಿಮಗಿದಕೇಗೈಯಲಿ
ದುರುಳನ ಲಂಕೆಯನಳಿಸಿದ ನಿಮಗೆ
ಎಂಬಳು ಲಂಕಾಹರನೇ, ಮತ್ತೆಯು
ಎಂಬಳು ಗರುಡಧ್ವಜನೆ, ಎನ್ನುತ
ಹಂಬಲದೊಳು ಬಿಸುಸುಯ್ವಳು ಕಂಬನಿ
ತುಂಬುತ ಕೈಮುಗಿವಳು ಭ್ರಮಿಸೆದ್ದು.
ಇರುಳೂ ಹಗಲೂ ನೆನೆನೆನೆದೊರಲುತ
ತರುವಳು ನೈದಿಲೆ ಕಣ್ಣಿಗೆ ಹನಿಯ
ತೆರುವುದಿಲ್ಲ ನೀವಳಿಗಳು ಮುತ್ತುವ
ವರ ತುಳಸಿಯನಹ ಶುದ್ಧರ ಕೃಪೆಯೇ!
ಮರುಕವುಳ್ಳವನೆ ಎಂಬಳು ಮತ್ತೆಯು
ಹಿರಿಯಾಸೆಯ ಹೊರೆವವನೇ ಎಂಬಳು
ಇರವು ನನ್ನದಿದರಮೃತವೆ ಎಂಬಳು
ಕರಗಿಸಿ ಮನವನು ತನ್ನೊಳೆ ನಿಂದು.
ತಾ ಪಡುತಿಹ ಮೋಸವ ಮರೆಮಾಚುತ
ತಾಪದಿ ತಾರಿರೆ ತನ್ನೊಳಗಿವಳೆ-
ನ್ನಾಪದ್ಭಂಧುವೆ ಕೃಷ್ಣಾ ಎಂಬಳು
ಆಪೂರ್ಣಾಂಬುಧಿ ಶಯನಾ ಎಂಬಳು
ಎಲೆ ವಂಚಕ ಎನುವಳು ಕೈಮುಗಿವಳು
ಬಲು ಬೆಂದಿರುವೆದೆಯೊಳು ನಿಡುಸುಯ್ವಳು
ಬಲಿ ಕಂಸನ ವಂಚನೆಗೈದವರೇ
ಅಳಲೇನೆಂಬೆನು ನಿಮಗೊಲಿದಿವಳ.
ಇರುಳಾದುದ ಹಗಳಾದುದನರಿಯಳು
ಅರಳಿ ಜೇನ್‌ಸುರಿವ ತುಳಸಿಯನೆರೆವಳು
ಉರಿವ ಮೊನೆಬಾಯ ಚಕ್ರಧರರೆ, ನಿ-
ಮ್ಮರಿವೆಂತಿಹುದೀ ಚಪಲೆಯ ಕುರಿತು.
೧೦
ಮಿಗಿಲಿಲ್ಲದ ಚೆಲುಕಣ್ಣಿಗೆ ಚಂಚಲೆ
ಹಗಲಿರುಳೂ ನೀರ್‌ ತರುವಳು ದೀನೆ
ಮಿಗು ಬಾಳುರಿವೊಲು ಲಂಕೆಯಳಿಸಿದರೆ
ಮೃಗಲೋಚನಗಳನೀಕೆಯವುಳಿಸಿ.
೧೧
ಬಾಡದ ವರಗುಣಗಳ ವಾಮನನ
ಹಾಡೊಳು ಸಿರಿಶಡಗೋಪನುಸಿರಿದ
ಹಾಡಿನ ಸಿರಿ ಸಾಸಿರದೊಳು ಹತ್ತಿವು
ಸೂಡಲಡಿಗೆ ಚೆಲುವಾದುದು ಮಾಲೆ
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...