ಹಸಿದು ಹೊಟ್ಟೆಗಿಲ್ಲವೆಂದು
ಕುಸಿದು ಬಾಯಿ ಬಿಡುವ ಜನರ
ಕರುಳು ಸುಡುವ ಒಡಲ ಬೆಂಕಿ
ಕೆರಳಿ, ಬಾನಿನುದ್ದ ಎದ್ದು,
ಉರಿಯುತಿರಲು, ಅವರ ಬಾಯಿ
ಯಿಂದ ಬೀಸಿ ಬರುವ ಬೆಚ್ಚ
ನುಸಿರು, ಕಿಡಿಗಳನ್ನುಗುಳಿತು.
ಇಂಥ ಕಿಡಿಯನೊಂದು ಎನ್ನ
ಒಡಲು ಒಳಗೆ ಧರಿಸಿತು.
ಬೀಜದಂತೆ ಬಿದ್ದಕಿಡಿಯ
ನಾಯ್ದುಕೊಂಡು ತನ್ನ ಮೈಯ
ನೀರನೆರದು ಬೆಳೆದು ಬರುವ
ಬಲವ ಒಲವನಿತ್ತು ಎನ್ನ
ಎದೆಯ ಹೊಲದ ನೆಲದಿ ಬಿತ್ತಿ
ಮರವನಾಗಿ ಮಮತೆ ಬೆಳೆಸಿತು.
ಇದುವೆ ಸುಖದ ವೃಕ್ಷವೆಂದು
ತಾನೆ ಹೆಸರಸಿಟ್ಟಿತು.
*****

















