Home / ಲೇಖನ / ಇತರೆ / ೫೧ ಎರಿಡನಿ ಬಿ ಗ್ರಹ

೫೧ ಎರಿಡನಿ ಬಿ ಗ್ರಹ

ಮೊನ್ನೆ ಆಗಸ್ಟ್ ೨೦೧೫ ರ ಸೈನ್ಸ್ ಪತ್ರಿಕೆಯನ್ನು ಬಹಳ ಕುತೂಹಲದಿಂದ ಓದುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಸೈನ್ಸ್ ಬಗ್ಗೆನೂ ತೀವ್ರ ಆಸಕ್ತಿ.

ಭವ್ಯ ಭಾರತದ ಮೂಲ ಇಬ್ಬರು ಮಹಾ ವಿಜ್ಞಾನಿಗಳಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂಡವೊಂದು ಲಾಸ್ ಎಂಜಲಿಸ್‌ನಲ್ಲಿ ಭೂಮಿಯಿಂದ ೧೦೦ ಜ್ಯೋರ್ತಿವರ್ಷ ಸೆಕೆಂಡ್‌ಗೆ ೩.೮೬ ಲಕ್ಷ ಕಿಲೋಮೀಟರ್ ವೇಗದಲ್ಲಿ ಒಂದು ವರ್ಷ ಸವೆಸುವ ದೂರದೂರ ಬಹುದೂರದಲ್ಲಿ ಮಿಥೇನ್ ಭರಿತ ಗ್ರಹವೊಂದನ್ನು ಪತ್ತೆ ಮಾಡಿರುವರು.

ಓದುತ್ತಾ ಓದುತ್ತಾ ಅಬ್ಬಾ! ಎಂದೆ. ವಿಜ್ಞಾನಿಗಳೆ ಹೀಗೆ ಯಾರೂ ಪತ್ತೆ ಹಚ್ಚದ್ದನ್ನು ಪತ್ತೆ ಹಚ್ಚಿ ಸಂಭ್ರಮಿಸುವರು.

ಈ ಗ್ರಹ ಸಂಪೂರ್ಣವಾಗಿ ಮಿಥೇನ್‌ನಿಂದ ಕೂಡಿದೆ. ಇದನ್ನು “೫೧ ಎರಿಡನಿ ಬಿ ಗ್ರಹ” ಎಂದು (ಕೂಸು) ಕರೆದಿರುವರು. ಇದು ಗುರು ಗ್ರಹದಂತಿರುವುದರಿಂದ ಇದನ್ನು ಗುರು ಗ್ರಹದ “ತಮ್ಮ” ಎಂದಿರುವರು.

ಭಲೇ ಭಲೇ ವಿಜ್ಞಾನಿಗಳೂ ಕೂಡಾ ಒತ್ತಡವನ್ನು ನಿವಾರಿಸಿಕೊಳ್ಳಲು ಏನೆಲ್ಲ ಪರಿಭಾಷೆಯಲ್ಲಿ ಕರೆದು ನಗುವರಲ್ಲದೆ, ಈ ಗ್ರಹದಲ್ಲಿ ನೀರಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿರುವರು.

ಈ ಗ್ರಹ ಸುಮಾರು ೨ ಕೋಟಿ ವರ್ಷಗಳಷ್ಟು ಹಳೆಯದೆಂದು ಅಭಿಪ್ರಾಯ ಪಟ್ಟಿರುವರು.

ನಕ್ಷತ್ರಗಳ ಸುತ್ತ ದೈತ್ಯ ಅನಿಲ ಗ್ರಹಗಳು ರೂಪುಗೊಳ್ಳುವ ಪ್ರಕ್ರಿಯೆಯನ್ನು ಈ ಗ್ರಹದ ಸ್ಥಿತಿಯನ್ನು ಆಧರಿಸಿ ಅರಿಯಬಹುದೆಂದು ಹತ್ತಿರದ ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆ ಮಾಡುವ ಘನ ಉದ್ದೇಶದಿಂದ ರೂಪಿಸಿರುವ “ಜೆಮಿನಿ ಪ್ಲಾನೆಟ್ ಇಮೇಜರ್” ನಿಂದ ಪತ್ತೆ ಮಾಡಿರುವ ಮೊತ್ತ ಮೊದಲ ಗ್ರಹವಿದೆಂದು ವಿಜ್ಞಾನಿಗಳ ತಂಡ ತಮ್ಮ ಸಂಶೋಧನೆಯ ವಿವರಗಳನ್ನು ಹಂಚಿಕೊಂಡಿದೆ.

ಜೆಪಿ‌ಐನಲ್ಲಿರುವ ಅತ್ಯಾಧುನಿಕ ಸ್ಪೆಕ್ಟ್ರೊ ಮೀಟರ್‌ನ ಸಹಾಯದಿಂದ ಈ ಗ್ರಹದಲ್ಲಿ ಮಿಥೇನ್ ಅಂಶವಿರುವುದನ್ನು ಪತ್ತೆ ಮಾಡಲಾಗಿದೆಯೆಂದು ವಿಜ್ಞಾನಿಗಳ ತಂಡ ಹೇಳಿದೆಯಲ್ಲದೆ, ಈತನಕ ನಮ್ಮ ಹಾಲು ಹಾದಿಯ ಹೊರಗಿನ ಆಕಾಶ ಗಂಗೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹೆಚ್ಚಿನ ಮಿಥೇನ್ ಸಾಂದ್ರತೆಯಿರುವ ಗ್ರಹವಾಗಿದೆ ಎಂದಿರುವರು!

ಈ ಗ್ರಹದಲ್ಲಿ ನೀರಿದೆ ಮಿಥೇನ್ ಇದೆ. ಹೀಗಾಗಿ ಇತರೆ ನಮ್ಮ ಸೌರವ್ಯೂಹದ ಗ್ರಹಗಳಲ್ಲಿರುವಂತೆ ತಂಪಿದೆ. ಇಲ್ಲಿ ೪೨೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇತರೆ ಗ್ರಹಗಳಲ್ಲಿ ೫೩೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆಯೆಂದು ಭವ್ಯ ಭಾರತದ ಮೂಲ ವಿಜ್ಞಾನಿಗಳಾದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ರಾಹುಲ್ ಪಟೇಲ್ ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸಸ್ ಇನ್ಸ್‌ಟಿಟ್ಯೂಟ್‌ನ ಅಭಿಜಿತ್‌ ರಾಜನ್‌ ಅವರೆಲ್ಲ ಸೇರಿ ಈ ಸಂಶೋಧನೆ ಕೈಗೊಂಡು ಸಫಲರಾಗಿರುವರು.

ಈ ತಂಡದಲ್ಲಿ ಭವ್ಯ ಭಾರತದ ವಿಜ್ಞಾನಿಗಳಿದ್ದಾರೆಂಬುದೇ ಹೆಮ್ಮೆಯ ಸಂಗತಿಯಲ್ಲವೇ?

ಈಗೀಗ ಭಾರತ ದೇಶ ಯಾವುದರಲ್ಲಿ ಕಮ್ಮಿಯಿಲ್ಲ ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...