Home / ಕವನ / ಕವಿತೆ / ಸರಸ್ವತಿಗೆ

ಸರಸ್ವತಿಗೆ

ಜಗಭಾಂಡ ತುಂಬಿ ತುಳುಕುವ
ಸೊಗಸೆಂಬೀ ಸೋಮವನ್ನು ಸೊಗದಿಂ ಕುಡಿದು
ನಗೆ ನಗುತ ನುಡಿಯನಾಡುವ
ಬಗೆಯೇ ಬಗೆ, ನಿನ್ನ ‘ಕಾವ್ಯ ಸೇವೆ’ ಯ ಬಿರುದು!
ಕನ್ನಡ ಕಂದನು ನಾನೈ
ಉನ್ನತ ಉದಾತ್ತ ಭರತ ಬಾಲನು ನಾನೇ!
ಸನ್ನುತ ವಿಶ್ವಕುಮಾರನು,
ನನ್ನಿಯ ಜಗದಂತರಾತ್ಮಶಿಶುವೂ ತಾನೇ!
ಅನಿಸಲಿ ಅನಿಸಲಿ ಜಗವೆನ-
ಗನಿ- ಅನಿಸಲಿ ತಾಯೆ ಜನಿಸಲನಿಸಿಕೆಯಿಂದು!
ನನಗೆ ವರ ನೀಡು ರಸವತಿ
ಅನಿಸಿಕೆಯಾ ಜಗದ ಮಗನು ಆಗಲಿ ಎಂದು!
ಎರಕವು ಮರುಗಲು ಬರುವದೆ
ಇರುತಿಹುದದು ಅಂತರಂಗದಂಕುರಮೊಂದು!
ನರನಿದರ ನೆರವಿನಿಂದಲೆ
ನೆರೆಯೆಲ್ಲರನೆನ್ನ ಬಲ್ಲ ತನ್ನವರೆಂದು !
ಕನ್ನಡ ಕಂದನ ಮನದೊಳು
ನನ್ನಿಯು ನೀನಾಗಿ ಕವನ ನೆನಿಸುವ ಕನಸು
ಚಿನ್ನದ ರನ್ನದ ಮುಗಿಲಿನ
ಬಣ್ಣಂಗಳ ಬಗೆಯೊಳೀಗ ಬೀಳುತಲಿಹುದು!
ಮನಸಿನ ಕರುಳಿನ ಕನಸನು
ನನಸನು ಮಾಡವ್ವ! ಅಂತರಂಗದಿ ಮೂಡೌ!
ಇನಿದಾಗಿ ಹರಿವ ರಸಗಳು
ಜನಿಸಲಿ ನನಸಿನಲಿ! ನನಸು ಕನಸಿನ ಗೊನೆಯು!
‘ಸತ್ಯವು ಸೊಬಗೇ; ಸೊಬಗೂ
ಸತ್ಯವು’ ‘ಸೊಬಗುಳ್ಳ ಸುದ್ದಿ ಸೊಗಸಿನ ಸೂರಿ’!
ನಿತ್ಯದೊಳೀ ಮಂತ್ರವ ಜಪಿ-
ಸುತ್ತಿರಲೀ ಸತ್ಯ ಸೃಷ್ಟಿ ಸೊಬಗಿನ ಸೃಷ್ಟಿ !
*****
Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...