Home / ಕಥೆ / ಕಿರು ಕಥೆ / ಸಂಸಾರಿ

ಸಂಸಾರಿ

ಒಬ್ಬ ಸಂಸಾರಿ, ತಾಪತ್ರಯಗಳಲ್ಲಿ ಸಿಲುಕಿ, ನಾಲಿಗೆ ತುದಿಯಲ್ಲಿ “ಈಶ್ವರ! ಈಶ್ವರ! ಎನ್ನುತ್ತಿದ್ದ. ಇಪ್ಪತ್ತು ನಾಲ್ಕು ಘಂಟೆ ಅವನಿಗೆ ಸಂಸಾರದ ಗೋಳು. ಹೆಂಡತಿ ಮಕ್ಕಳ ಕಾಟ, ಭವದ ಬವಣೆ, ಬಾಯಲಿ ಮಾತ್ರ ಈಶ್ವರ ಭಕ್ತಿ, ಕರ್ಮಗಳನ್ನು ಮಾಡುತ್ತ ಫಲಾಪೇಕ್ಷೆಗಾಗಿ ಪರಿತಪಿಸುತ್ತಿದ್ದ. ಕರ್ಮಮಾಡುವಾಗ ಗೋಳಿಡುತ್ತಿದ್ದ. ಇದರೊಡನೆ ಈಶ್ವರ ಧ್ಯಾನ ಮಾಡಿದ್ದರು ಅವನ ಮನವು ಕರ್ಮಗಳ ಬಂಧನದಲ್ಲಿ ಸುತ್ತಿಕೊಂಡಿತ್ತು. ಅವನಿಗೆ ಯಾವ ರೀತಿಯ ನೆಮ್ಮದಿ, ಶಾಂತಿ ದೊರೆಯಲಿಲ್ಲ. ಸದಾ ಭವಸಾಗರದಿಂದ ಪಾರುಮಾಡು ಈಶ್ವರ ಎನ್ನುತ್ತಿದ್ದ. ಆದರೆ ಸಂಸಾರ ಕೂಪದಿಂದ ಮೇಲೆ ಏಳಲಾಗುತ್ತಿರಲಿಲ್ಲ.

ಅವನು ತನ್ನ ಮಿತ್ರನನ್ನು ನೋಡಿ ಯಾವಾಗಲೂ ಅಸೂಯೆ ಪಡುತ್ತಿದ್ದ. ಮಿತ್ರನಿಗೆ ಧ್ಯಾನ, ಧಾರಣ, ಸಮಾಧಿ ಯಾವುದೆಂದು ತಿಳಿಯದಿದ್ದರು ಅವನು ಝೆನ್ ಹೆಜ್ಜೆಯಿಟ್ಟು ನಡೆದಿದ್ದ. ಅತ್ಯಂತ ಸರಳ ಸಹಜತೆಯಲ್ಲಿ ದೈವಾರ್ಪಣದಲ್ಲಿ ಫಲಾಪೇಕ್ಷೆ ತೊರದಿದ್ದ. ಕರ್ಮ ವಿಮುಕ್ತನಾಗಿದ್ದ. ಈಶ್ವರ ಪ್ರಣಿಧಾನದಲ್ಲಿ ಶಾಂತಿ ಪಡೆದಿದ್ದ. ಸೂರ್ಯನ ಬೆಳಕಿನಲ್ಲಿ ಅರಳುವ ಹೂವಿನಂತೆ ಅವನ ಮನವು ಸಹಜತೆಗೆ ತೆರೆದುಕೊಂಡಿತ್ತು.

ಸಂಸಾರಿಗೆ ಮಿತ್ರನ ಬಾಳು, ದಾರಿ ತೋರಿತು. ಕೆಸರಿನಿಂದ ಕಮಲದಂತೆ ಮೇಲೆದ್ದಿತು. ಅವನ ಹೃದಯಿ, ಸಹಜತೆಯ ಗುಟ್ಟು ಸತ್ಯಕ್ಕೆ ದರ್ಶನ ಮಾಡಿಸಿತು.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...