Home / ಕಥೆ / ಕಿರು ಕಥೆ / ಕಲ್ಲಿನಲ್ಲಿ ಸಾಲಿಗ್ರಾಮ

ಕಲ್ಲಿನಲ್ಲಿ ಸಾಲಿಗ್ರಾಮ

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿಸುತ್ತಾ ತನ್ನ ನಿತ್ಯ ಕೆಲಸಗಳನ್ನು ಮುಗಿಸುತ್ತಿದ್ದ.

“ಲೋ? ಮುದುಕ ಏನು ತಂಬಾಕು ಮಲ್ಲುತ್ತಿರುವೆಯಾ?” ಎಂದು ಹಳ್ಳಿ ಜನರು ಕೇಳುತ್ತಿದ್ದರು.

ಮುದುಕ ಮಾತನಾಡದೆ ಸುಮ್ಮನಿರುತ್ತಿದ್ದ.

“ಯಾಕಪ್ಪ ಮಾತಾಡೋಲ್ಲ? ಏನು ಅಂತ ಸವಿ ತಿಂಡಿ ಬಾಯಲ್ಲಿ” ಎಂದು ಕೇಳುತ್ತಿದ್ದರು.

ಒಮೊಮ್ಮೆ ಮುದುಕ ಗಂಟೆಗಟ್ಟಲೆ ವೃಕ್ಷದ ಕೆಳಗೆ ತಪಸ್ವಿಯಂತೆ ಕುಳಿತು ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಧ್ಯಾನ ಮಾಡುತ್ತಿದ್ದ.

ಒಬ್ಬ ಹಳ್ಳಿಯ ಯುವಕನಿಗೆ ಅತ್ಯಂತ ಕುತೂಹಲವಾಯಿತು. ಅವನು ಸ್ನೇಹದಿಂದ ಮೆಲ್ಲಗೆ ಮುದುಕನ ಹತ್ತಿರಬಂದು ಕುಶಲೋಪರಿ ಮಾತನಾಡಿ ಅವನ ಮನ ಒಲಿಸಿಕೊಂಡು ನಂತರ ಮುದುಕ ಸ್ವಲ್ಪ ಸಲಿಗೆಯಿಂದ ಮಾತನಾಡತೊಡಗಿದ.

ಮುದುಕನು ಮನ ಬಿಚ್ಚಿ ಮಾತನಾಡಲು “ನೀನು ಬೆಣಚು ಕಲ್ಲನ್ನು ಬಾಯಲ್ಲಿ ಇಟ್ಟುಕೊಂಡಿರುವ ಗುಟ್ಟೇನು?” ಎಂದು ಕೇಳಿದ ಹಳ್ಳಿಗ.

“ಗುಟ್ಟೇನು ಬಂತು?-ಅದು ನನ್ನ ಸಹಜ ಪೂಜೆ” ಎಂದ.

“ಇದೇನು ಬಾಯಲ್ಲಿ ಮಂತ್ರ ಹೇಳುತ್ತಾರೆ. ಕೇಳಿದ್ದೇನೆ. ಆದರೆ ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಪೂಜಿಸುವವರನ್ನು ನೋಡಿಲ್ಲ” ಎಂದ.

ಪೂಜೆ ವ್ಯಕ್ತಿಗತ, ಒಬ್ಬರೊಬ್ಬರದು ಒಂದೊಂದು ವಿಧಾನ. ನೀನು ಕೈಯಲ್ಲಿ ಪೂಜೆ ಮಾಡಿದರೆ, ನಾನು ಬಾಯಲ್ಲಿ ಪೂಜೆ ಮಾಡುತ್ತೇನೆ, ಕೆಲವರು ಹೊಟ್ಟೆಯಿಂದ-ಹೀಗೆ ಹಲವು ಹತ್ತಾರು ವಿಧಾನ ಇರುತ್ತೆ.” ಎಂದ ಮುದುಕ.

“ಅದು ಸರಿ ಇದು ಯಾವ ರೀತಿಯ ಪೂಜೆ? ಯಾವ ದೇವರಿಗಾಗಿ?”

“ಇದು ನನ್ನ ಸ್ವಂತ ದೈವ. ನನ್ನ ಕೈಯಲ್ಲಿ ಕೆತ್ತಲಾಗದ ದೈವಮೂರ್ತಿಯನ್ನು ನನ್ನ ಹಲ್ಲು ದವಡೆ ಕೆತ್ತುತ್ತಿದೆ”

“ಇದೇನು ಎಂಜಲು, ಉಗುಳು, ಬಾಯಿಯ ದುರ್ನಾತ, ಹಲ್ಲಿನ ಕಡೆತ ಇದೆಲಲ್ಲಾ ಪೂಜೆಯಾಗುತ್ತದೆಯೇ? ದೈವ ಒಪ್ಪುತ್ತಾನೆಯೇ?”

“ಉಳಿಯಿಂದ ಹೊಡಿಸಿಕೊಂಡು ಮೂರ್ತಿಮತ್ತಾಗುವ ದೈವಕ್ಕೆ ನಾನು ಬಾಯಲ್ಲಿಟ್ಟು ಚಪ್ಪರಿಸಿದಾಗಲೆಲ್ಲಾ ಮುತ್ತನಿತ್ತಂತೆ, ಅದು ನನ್ನ ಪ್ರೇಮ ಅಭಿವ್ಯಕ್ತಿ” ಎಂದ ಮುದುಕ.

“ನೀನು ಈ ರೀತಿಯ ಪೂಜೆಯಿಂದ ಏನನ್ನು ಸಾಧಿಸ ಹೊರಟಿರುವೆ?”

“ನನ್ನ ಬೆಣಚು ಕಲ್ಲು, ಹಲ್ಲುಗಳ ಮಧ್ಯೆ ಸಾಲಿಗ್ರಾಮದ ಸುಂದರ ಪರಿವರ್ತನೆಯಲ್ಲಿ ತೊಡಗಿದೆ. ಅಲ್ಲಿ ದೈವದ ಪ್ರತಿಬಿಂಬ ಮೂಡುತ್ತಿದೆ. ಇನ್ನೇನು ಸಾಧಿಸಲು ಇದೆ?” ಎಂದ ಮುದುಕ.

“ಏನೂ ಹಲ್ಲಿನ ಕೆಳಗೆ-ಬೆಣಚುಕಲ್ಲು ಸಾಲಿಗ್ರಾಮವಾಗುತ್ತಿದೆಯೆ?”

“ಹೌದು, ನದಿಯಲ್ಲಿ ನೀರು ಹರಿದು ಬೆಣಚುಕಲ್ಲಿನಲ್ಲಿ, ಚಿಪ್ಪಿನಲ್ಲಿ ಆಕಾರ ಮೂಡಿ ಸಾಲಿಗ್ರಾಮವಾಗುವುದಿಲ್ಲವೇ? ಹಾಗೆ ನನ್ನ ಬಾಯಲ್ಲಿ ಊರುವ ನನ್ನ ಲಾಲಾರಸೋಸ್ವಾದನೆಯಲ್ಲಿ ಸಾಲಿಗ್ರಾಮ ರೂಪುಗೊಳ್ಳುತ್ತಿದೆ. ಇದು ನನ್ನ ಪೂಜೆ. ಮಂತ್ರವಿಲ್ಲದೆ, ಮಾತಿಲ್ಲದೆ ದಿವ್ಯ ಮೌನ ಪೂಜೆ”- ಎಂದ ಮುದುಕ.

ಹಳ್ಳಿಯ ಯುವಕ ಬೆಚ್ಚಿದಂಗಾದ. ಝೆನ್ ಧ್ಯಾನದಲ್ಲಿರುವ ಮುದುಕನ ಅತಿವಿಚಿತ್ರದ ಪೂಜೆ ಅವನ ಒಳಕಣ್ಣನ್ನು ತೆರೆಯಿತು. ಝೆನ್‌ನನ್ನು ನಮ್ಮದಾಗಿಸಿ ಕೊಂಡಾಗ ಅದು ಕೊಡುವ ಸ್ವಾತಂತ್ರ್ಯ, ಯಾವ ರೀತಿಯ, ನೀತಿಯ, ಪಂಥ, ಪ್ರಕಾರಕ್ಕೆ ಶರಣಾಗದೆ ಬಾಯಿಯಷ್ಟು ಅಗಲ ಆಳದಲ್ಲೂ ದೈವ ಸೃಷ್ಟಿಯ ಯತ್ನ ಯುವಕನಿಗೆ ವಿಸ್ಮಯವ ತಂದಿತು. ವಿಸ್ಮಯೇ ಯೋಗ ಭೂಮಿಕಾ! ಎಂದು ತಿಳಿದ, ಝೆನ್‌ನಲ್ಲಿ ಅದೆಂತಹ ಮುಕ್ತತೆಯಿದೆ. ಜ್ಞಾನದ ಬಾಗಿಲಿಗೆ ಝೆನ್ ಅದೆಂತಹ ಅರಿವಿನ ಕೀಲಿಕೈ. ಯಾವುದೇ ಕಟ್ಟುಪಾಡು, ಕಂದಾಚಾರ, ಸಿದ್ದಾಂತ ಇಲ್ಲದೆ ಅನಂತಕ್ಕೆ ಕೊಂಡೊಯ್ಯುವ ಇದೆಂತಹ ಸಾಧನ” ಎಂದು ಯುವಕ ಮನದಟ್ಟು ಮಾಡಿಕೊಂಡ.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...