Home / ಕಥೆ / ಕಿರು ಕಥೆ / ದುಂಬಿದಂಡು

ದುಂಬಿದಂಡು

ಝೆನ್ ಗುರುಗಳು ಧ್ಯಾನಕ್ಕೆ ಕುಳಿತಾಗ ದುಂಬಿಯ ದಂಡು ಒಂದು ಗುರುಗಳನ್ನು ಸತಾಯಿಸುತಿತ್ತು. ಗುರುಗಳ ಧ್ಯಾನ ಭಂಗವಾಗದಂತೆ ಶಿಷ್ಯ ಬಹಳ ಶ್ರಮವಹಿಸಿ ದುಂಬಿಗಳನ್ನು ಓಡಿಸುತ್ತಿದ್ದ. ದುಂಬಿಗಳು ಝೇಂಕಾರ ಮಾಡುತ್ತ ಕೆಲವೊಮ್ಮೆ ಗುರುಗಳನ್ನು ಕುಟುಕುತಿತ್ತು. ಕಿವಿಯ ಹತ್ತಿರ ಹೋಗಿ ಗುಂಯ್ ಗುಟ್ಟುತಿತ್ತು. ಅತೀವ ಕಳವಳದಿಂದ ಶಿಷ್ಯ ಗುರುಗಳಲ್ಲಿ ಹೇಳಿದ- “ನಿಮಗೆ ತೊಂದರೆ ಕೊಡುತ್ತಿರುವ ಈ ದುಂಬಿ ದುಂಡನ್ನು ನಾನು ಇಂದು ಜಾಲದಲ್ಲಿ ಸೆರೆಹಿಡಿಯುತ್ತೇನೆ” ಎಂದು. ಸರ್ವಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಮಾರನೆಯದಿನ ಶಿಷ್ಯ ದುಂಬಿ ದಂಡನ್ನು ಮರ್ದಿಸಲು ಖಡ್ಗ ಪ್ರಯೋಗ ಮಾಡಲು ಅನುವಾದ. ಇದನ್ನು ನೋಡಿದ ಗುರುಗಳು- “ಶಿಷ್ಯ ದುಡಕಬೇಡ, ಇದಕ್ಕೆ ಒಂದು ಸುಲಭೋಪಾಯವಿದೆ” ಎಂದರು. “ಗುರುಗಳೇ ಹೇಳಿ ನಾನು ಏನು ಮಾಡಬೇಕು?” ಎಂದ ಶಿಷ್ಯ.

ಸುಗಂಧಿತ ಪುಷ್ಪದ ಕುಂಡಗಳಿಂದ ನಮ್ಮ ಬೌದ್ಧ ವಿಹಾರವನ್ನು ಅಲಂಕರಿಸು. ಆಗ ದುಂಬಿದಂಡು ತಮ್ಮ ಧ್ಯಾನವನ್ನು, ಗಮನವನ್ನು ಹೂವಿನ ಹೃದಯದ ಕಡೆ ತಿರುಗಿಸುತ್ತವೆ. ನನ್ನ ಧ್ಯಾನಕ್ಕೆ ಏನು ಅಡ್ಡಿಯಾಗುವುದಿಲ್ಲ.” ಎಂದರು ಗುರುಗಳು.

ಶಿಷ್ಯನ ಕೈಯಲ್ಲಿದ್ದ ಖಡ್ಗದ ಬ್ರಹ್ಮಾಸ್ತ್ರನಾಚಿ ಮೂಲೆ ಸೇರಿತು. ಸ್ವರ್ಣ ಸಂಪಿಗೆ, ಮಲ್ಲಿಗೆ, ಜಾಜಿ, ಕಮಲಗಳು ವಿಹಾರದಲ್ಲಿ ಅರಳಿ ದುಂಬಿವಿಂಡಿಗೆ ಸ್ವಾಗತವಿತ್ತವು. ಸಮಸ್ಯೆಗೆ ಶಾಂತ ಪರಿಹಾರ ಸೂಚಿಸಿದ ಗುರುಗಳಿಗೆ ಶಿಷ್ಯ ನಮಿಸಿದ.
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...