Home / ಕವನ / ಕವಿತೆ / ಕುಟೀರವಾಸಿ

ಕುಟೀರವಾಸಿ

ಕುಟೀರವಾಸಿ, ಬಂಧುನಿವಾಸಿ!
ಸೇರಿದ ದೇಗುಲ ಹೊತ್ತಿನಲಿ-
ಮಿನಿಗಿತು ಭಾನು, ಹೊಳೆಸಿತು ವಿದ್ಯುತ್;
ತಿಮಿರದ ತೀರದ ಕುಟೀರದಲಿ
ಗಗನದ ನೋಟದ ಮಲೆಶಿಖರ
ಥಳಥಳಿಸಿತು ವಿದ್ಯುತ್-ಮುಖರ.

ಕುಟೀರವಾಸಿ, ಬ೦ಧುನಿವಾಸಿ!
ಮೆರೆದನು ಭವನದ ಸನಿಹದಲಿ-
ಉದರಿತು ಹನಿಹನಿ, ಪ್ರಾಂಗಣದಿ;
ತಟನೀತೀರದ ಪ್ರಕೃತಿಯಲಿ;
ಜ್ವಲಿಸಿತು ಹಣತೆಯ ಕಿರುದೀಪ,
ಛಾಯಾರೂಪದ ಮಂಡಿತಭೂಪ.

ಕುಟೀರವಾಸಿ, ಬಂಧುನಿವಾಸಿ!
ನಡೆದನು ಭವನದ ಮಂಡಪದೆಡೆಗೆ-
ಕಿರುದೀವಿಗೆ, ಬೆಳೆಗಿತು ಪದತಲವ,
ದೇಗುಲ ಜ್ಯೋತಿಯ ಪ್ರಭೆಹೊಳೆಸಿ;
ಮೊಗದಲಿ ಪ್ರೌಢಿಮೆ, ಹಿರಿದಾಗಿತ್ತು;
ವಿಲಾಸ ವೈಭವ ತಲೆದೋರಿತ್ತು.

ಕುಟೀರವಾಸಿ, ಬಂಧುನಿವಾಸಿ!
ಮಣಿದನು ಮೂರ್ತಿಯಗೆದುರಾಗಿ-
ಭಕ್ತಿಪ್ರಭಾವದ, ಹೊಳೆಹರಿಸಿ;
ಸೌಮ್ಯದಮೂರ್ತಿ-ಶೈಲಕೀರ್ತಿ
ತೋರಿದ ಮೆಲುನಗೆ ವದನದಲಿ,
ವರ್ಧಿಸಿ ತಟನಿಯ ಸದನದಲಿ.

ಕುಟೀರವಾಸಿ, ಬಂಧುನಿವಾಸಿ!
ಎಣಿಸಿದ ಹೊರಡಲು ಅನುವಾಗಿ-
ಮೂಡಲ ಶಿಖರ ತೋರಿತು ವರ್ಣ;
ಉದಯದ ಸೊಬಗಿನ ಸ್ವರ್ಣವತೋರಿ,
ಶೈಲಮಿಂಚಿತು ಪ್ರಭಾತದ ನಡುವೆ;
ಹೊರಟನು ಗಾಮಿಯು ಭೂಷಣತಡುವೆ.
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...