Home / ಕವನ / ಕವಿತೆ / ಗೀತಮ್ಮ

ಗೀತಮ್ಮ

ಗೀತೆಯನು ಬರೆವಾಗ ಜನಸಿದೆಯೆ ನೀನಮ್ಮಾ |
ಗೀತೆಯೆಂಬಭಿಧಾನ ಪಡೆದೆನೀನಮ್ಮಾ ||
ಗೀತೆತಾಪ್ರಿಯಕರವು ತಾತಪರಮಾತ್ಮಂಗೇ |
ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ ||

ಗೀತಮ್ಮ ಕೇಳೀಗ ಕೂಸುನಿನಾಗಿಹೆಯೆಂದೂ |
ಓತು ನಿನಗಾಗಿ ತಂದಿಹನು ನಿಮ್ಮಣ್ಣಾ ||
ಗೀತೆತಿನ್ನಲಿಯೆಂದು ಸವಿಯಾದ ಹಣ್ಣುಗಳಾ ||
ಕೂತು ತಿನ್ನಮ್ಮ ನೀ ಪಕ್ವ ಹಣ್ಣಾ || ೨ ||

ಕೂತು ಕೇಳ್ಪೇಳುವೆನು ಫಲಗಳ ಮಹಿಮೆಯನೂ |
ಗೀತೆತಿನ್ನಲು ಅವಳ ರೋದನವುಯೆಲ್ಲಾ |||
ಸೋತುಕಾಲ್ತೆಗೆಯುವದು ನಗೆ ನಿನ್ನ ಮೊಗದಲ್ಲಿ |
ಓತು ಹೊರಹೊಮ್ಮುವುದು ಕೇಳು ಗೀತಮ್ಮಾ || ೩ ||

ಗೀತಮ್ಮ ವೇಳೆರಡು ವರುಷಗತಿಸಲು ನೀನು |
ಕೋತುಳ್ಳ ಕುಡುವೆಣ್ಣು ನೀನಾಗುವೀ ||
ನೀತಿವಂತನ ನಾನು ತರುವೆ ವರನಿನಗಾಗಿ |
ಪ್ರೀತಿಯಿಂದಲಿ ಧಾರೆಯೇರೆವೆನಮ್ಮಾ || ೪ ||

ನೀತಿವಂತನ ಪತಿಯ ದೇವನನು ಭಾವಿಸುತೆ |
ಪ್ರೀತಿಯಿ೦ದಲಿ ಯವನ ಸೇವೆಮಾಡಮ್ಮಾ ||
ನೀತಿವಂತರ ಮಗಳು ನೀನೆಂದು ಮರೆಯದಿರು |
ಕೀರ್ತಿಯನು ತಾರಮ್ಮ ನೀನೆನ್ನ ಕುಲಕೇ || ೫ ||

ಗೀತೆಕೇಳತ್ತೆ ಮೂವರನೀನು ಸಂತತದಿ |
ಪ್ರೀತಿಯಿಂದಲಿಯವರ ಶಿಶ್ರೂಷೆಮಾಡಮ್ಮಾ ||
ಕೋತಿಯೆಂದದಿ ನಡೆಯೆ ಘಾತಗೊಳುವುದುನಿನ್ಸ
ಪ್ರೀತಿಯ ಸಂಸಾರವೀ ಜಗದೊಳೂ || ೬ ||

ನೀತಿಬಿಡುತಲಿ ಗಂಡ ಕೋತಿಯಂದದಿ ನಡೆಯೆ |
ಮಾತುಬೆಳೆಸದೆ ನೀನು ನೀತಿ ತೋರಮ್ಮಾ |
ಆತನ ತಂಗಿಯರ ತಮ್ಮಗಳ ಜೋತೆನೀನು |
ಪ್ರೀತಿಯ ಕೆಳತನದಿ ಕಾಣಮ್ಮಾ ನೀನು || ೭ ||

ದಾಸದಾಸಿಯರನ್ನು ಓತುಪಡೆದಿಹ ಸುತರ |
ನಾತೆಯಿಂದಲಿ ದಯವ ನೀತೋರಿಸಮ್ಮಾ ||
ಮಾತನನ್ನಿವುಗಳನು ನಡಿಸೆ ನೀ ಪಡೆದಪೆಯೆ |
ಖ್ಯಾತಿಯನು ಜಗದೊಳಗೆ ಶ್ರೇಷ್ಠಸತಿಯೆಂದೂ || ೮ ||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...