ಕರು

ಕರುವಿನ ಜೋಡಿಗೆ ಹುಲ್ಲನು ಮೆಂದಿತು
ಆಕಳು ಗುಡ್ಡದ ಓರೆಯಲಿ

ಬಂದಿತು ಕೂಗುತ ಗವಿಯೊಳಗಿಂದ
ಮೇಯುವ ಎರಡೇ ಪಶುಗಳ ಕಂಡ
ಹದಿನಾರ್‌ ಮೆಟ್ಟಿನ ಪಟ್ಟೆಹುಲಿ!

ಹುಲಿಯಬ್ಬರವನು ಕೇಳಿದ ಆಕಳು
ಓಡಿತು ಕರುವನು ಕರೆಯುತ್ತಾ
ಓಡುವುದಾಗದೆ ಕೂಗುವ ಕರುವನು
ಮಾಡಿತು ಪಟ್ಟಿಯಹುಲಿ ತುತ್ತ

ಹುಲಿ ಬಾಯಿಗೆ ಕರು ಬಿದ್ದಿತುಯೆಂದು
ಆಕಳು ಮನದಲಿ ಬಹಳೇ ನೊಂದು
ಅತ್ತಿತು ಕೆಲದಿನ ಹಗಲಿರುಳೂ
ಆದರೆ ಆಕಳ ಗಂಡನು ಬಂದು
ಅಂದಿತು ಹೆಂಡತಿ ಅಳುವುದೆ ಕಂಡು
“ಸತ್ತವರಿಗೆ ಅಳುವದು ಮರುಳು”
* * *
ಹೀಗೇ ದಿನಗಳು ಕಳೆಯಲು ಆಕಳು
ಹೆತ್ತಿತು ಕರುವನು ಮತ್ತೊಂದ
ಕೆಲವು ತಿಂಗಳಲಿ ತಾಯಿಯ ಜತೆಗೆ
ಮೇಯಲು ಹೊರಟಿತು ಎಳೆಕಂದ

ಕರುವಿನ ಜೋಡಿಗೆ ಹುಲ್ಲನು ಮೆಂದಿತು
ಆಕಳು ಗುಡ್ಡದ ಓರೆಯಲಿ

ಬಂದಿತು ಕೂಗುತ ಗವಿಯೊಳಗಿಂದ
ಮೇಯುವ ಎರಡೇ ಪಶುಗಳ ಕಂಡ
ಹದಿನಾರ್ ಮೆಟ್ಟಿನ ಪಟ್ಟೆ ಹುಲಿ!

ಈ ಸಲ ಆಕಳನೇ ಮುರಿಯಿತು ಹುಲಿ
ಬದುಕಿತು ಕರು ಹಿಂಡಿನ ಮರೆಗೆ
ಆದರೆ ಅಂಬೇ ಅಂಬೇ ಎಂದು
ಹುಲಿಯು ಹೋದರೂ ಅಲ್ಲೇನಿಂದು
ಕೂಗಿತು ಕರು ಸಾಯುವವರೆಗೆ.
* * *

ಅಲ್ಲಿಗೆ ಆಕಳ ಗಂಡನು ಬಂದು
ಆಂದಿತು ಹೆಂಡತಿ ಹೆಣವನು ಕಂಡು
“ಅಯ್ಯೋ ಕತ್ತರಿಸಿತು ಕರುಳು”
******

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...