Home / ಕವನ / ಕವಿತೆ / ತಿಳಿನುಡಿಗಳು

ತಿಳಿನುಡಿಗಳು

ಅಲ್ಲ ಅಂಗಡ್ಯಾಗ, ಬೆಲ್ಲ ಬಾಜರದಾಗ
ಎಲ್ಲರ ಮಾತ ಮನದಾಗ | ಇಟಗೊಂಡು
ಬೆಲ್ಲದ್ಹೇರಾಗಿ ಬರುವೀನೆ ||

ಬೇವಿನ ಆ ಗಿಡಕ, ಬೆಬ್ಬದ ಕಟ್ಟೆ ಕಟ್ಟಿ
ಜೇನ ತುಪ್ಪದಲಿ ಹೊಯ್ನೀರ | ಹಣಿಸಿದರ
ಬೇವು ತನ್ನಿಸವ ಬಿಡಲಿಲ್ಲ ||

ಜೀವಕ ಬಂದರ, ತಾಯಾರ ತಂದ್ಯಾರ
ಮೈದೂನರ್ಯಾರ ಮಗನ್ಯಾರ | ಸಾವಾಗ
ಕೈಹಿಡಿದರಾಯ ಕಡೆಗಾದ ||

ಮಾತಿಗೆ ಮಲಕಿಲ್ಲ, ನೀತಿಗೆ ತೊಡಕಿಲ್ಲ
ಸಾಸಿಕಾಳಿಗೆ ಹುಳಕಿಲ್ಲ | ಅತ್ತಿಮನಿ
ಸೋಸಿ ನಡದರು ಅರಿಕಿಲ್ಲ ||

ಸತ್ತು ಹುಟ್ಟುದೊಲ್ಲೆ, ಸಾವಗಂಡನ್ನೊಲ್ಲೆ
ಸತ್ತಿಕರ ಮಗಳ ಗೌವರವ್ವ | ನಿನ್ನಂತ
ಮುತ್ತೋದಿತನವ ಇಡು ನಮಗ ||

ಹಿರಿಯರಿಗೆ ಹಿರಿಯನ್ನು, ಕಿರಿಯರಿಗೆ ಕಿರಿಯನ್ನು
ನೆರೆಗಡ್ಡದವರ ಮುದುಕರ | ಕಂಡರ
ತಲೆಬಾಗಿ ನಡಿಯೊ ನನ ಮನವ ||

ಕಾಣದ ಮಾತಿಗೆ, ಖಂಡಗಂದರೇನ
ಬಂಡಮಾಡವರ ಗೊಡವೇನ | ತುಂಬಿದ
ಬಂಡಿ ನಡೆದ್ಹಂಗ ನಡೆದೇನ ||

ಕೊಟ್ಟು ಕುದಿಯಲು ಬೇಡ, ಇಟ್ಟು ಹಂಗಿಸಬೇಡ
ಇಷ್ಟುಂಡರೆಂದು ಅನಬೇಡ | ಈ ಮೂರು
ಮುಟ್ಟ್ಯಾವ ಶಿವನ ಸದರಿಗೆ ||

ಸಂಗಮಾಡೇನವ್ವ, ಲಿಂಗವಂತರ ಕೂಡ
ಬಂಗಾರಕಿಂತ ಬಲು ಹೆಚ್ಚು | ಇದ್ದವರ
ಸಂಗಮಾಡಿನಿ ಅನುಗಾಲ ||

ಕಾಚುಕಾಡಿಗೆ ಹೀನ, ಊಚ ನಾಲಗೆ ಹೀನ
ಆಚಾರಹೀನ ಗರತಿಽಯ | ಮನಿ ಮುಂದ
ಮೀಸಿ ಬಂದಣನ ನಗೆಹೀನ ||

ತನ್ನಂತೆ ನೋಡಿದರೆ, ಭಿನ್ನ ಭೇದವನಿಲ್ಲ
ತನ್ನ ಹೊಟ್ಟೆಽಯ ಸಿಸುವಂತೆ | ನೋಡಿದರ
ಕಣ್ಣ ಮುಂದೈತೆ ಕೈಲಾಸ |
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...