Home / ಕವನ / ಕವಿತೆ / ತಿಳಿನುಡಿಗಳು

ತಿಳಿನುಡಿಗಳು

ಅಲ್ಲ ಅಂಗಡ್ಯಾಗ, ಬೆಲ್ಲ ಬಾಜರದಾಗ
ಎಲ್ಲರ ಮಾತ ಮನದಾಗ | ಇಟಗೊಂಡು
ಬೆಲ್ಲದ್ಹೇರಾಗಿ ಬರುವೀನೆ ||

ಬೇವಿನ ಆ ಗಿಡಕ, ಬೆಬ್ಬದ ಕಟ್ಟೆ ಕಟ್ಟಿ
ಜೇನ ತುಪ್ಪದಲಿ ಹೊಯ್ನೀರ | ಹಣಿಸಿದರ
ಬೇವು ತನ್ನಿಸವ ಬಿಡಲಿಲ್ಲ ||

ಜೀವಕ ಬಂದರ, ತಾಯಾರ ತಂದ್ಯಾರ
ಮೈದೂನರ್ಯಾರ ಮಗನ್ಯಾರ | ಸಾವಾಗ
ಕೈಹಿಡಿದರಾಯ ಕಡೆಗಾದ ||

ಮಾತಿಗೆ ಮಲಕಿಲ್ಲ, ನೀತಿಗೆ ತೊಡಕಿಲ್ಲ
ಸಾಸಿಕಾಳಿಗೆ ಹುಳಕಿಲ್ಲ | ಅತ್ತಿಮನಿ
ಸೋಸಿ ನಡದರು ಅರಿಕಿಲ್ಲ ||

ಸತ್ತು ಹುಟ್ಟುದೊಲ್ಲೆ, ಸಾವಗಂಡನ್ನೊಲ್ಲೆ
ಸತ್ತಿಕರ ಮಗಳ ಗೌವರವ್ವ | ನಿನ್ನಂತ
ಮುತ್ತೋದಿತನವ ಇಡು ನಮಗ ||

ಹಿರಿಯರಿಗೆ ಹಿರಿಯನ್ನು, ಕಿರಿಯರಿಗೆ ಕಿರಿಯನ್ನು
ನೆರೆಗಡ್ಡದವರ ಮುದುಕರ | ಕಂಡರ
ತಲೆಬಾಗಿ ನಡಿಯೊ ನನ ಮನವ ||

ಕಾಣದ ಮಾತಿಗೆ, ಖಂಡಗಂದರೇನ
ಬಂಡಮಾಡವರ ಗೊಡವೇನ | ತುಂಬಿದ
ಬಂಡಿ ನಡೆದ್ಹಂಗ ನಡೆದೇನ ||

ಕೊಟ್ಟು ಕುದಿಯಲು ಬೇಡ, ಇಟ್ಟು ಹಂಗಿಸಬೇಡ
ಇಷ್ಟುಂಡರೆಂದು ಅನಬೇಡ | ಈ ಮೂರು
ಮುಟ್ಟ್ಯಾವ ಶಿವನ ಸದರಿಗೆ ||

ಸಂಗಮಾಡೇನವ್ವ, ಲಿಂಗವಂತರ ಕೂಡ
ಬಂಗಾರಕಿಂತ ಬಲು ಹೆಚ್ಚು | ಇದ್ದವರ
ಸಂಗಮಾಡಿನಿ ಅನುಗಾಲ ||

ಕಾಚುಕಾಡಿಗೆ ಹೀನ, ಊಚ ನಾಲಗೆ ಹೀನ
ಆಚಾರಹೀನ ಗರತಿಽಯ | ಮನಿ ಮುಂದ
ಮೀಸಿ ಬಂದಣನ ನಗೆಹೀನ ||

ತನ್ನಂತೆ ನೋಡಿದರೆ, ಭಿನ್ನ ಭೇದವನಿಲ್ಲ
ತನ್ನ ಹೊಟ್ಟೆಽಯ ಸಿಸುವಂತೆ | ನೋಡಿದರ
ಕಣ್ಣ ಮುಂದೈತೆ ಕೈಲಾಸ |
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...