Home / ಕವನ / ಕವಿತೆ / ಉಂಟು

ಉಂಟು

ಅ೦ಚೆಯಂತೆ, ಕತ್ತರಿಸಿ ತೆರೆಗಳನ್ನು
ಚಂಚುವಿನ೦ಚಿನಿಂದ
ನಮ್ಮ ನಾವೆಯಿದು ತೆರಳುತಿದೆ ನೋಡಿರೆ!
ಗರಿಗಳನು ಹರಹಿ ರವಿಕಿರಣದಿ ಹೊಳೆಯುತಿರೆ
ರಾಜಹ೦ಸವಿದು ಮರಳುತಿದೆ ನೋಡಿರೆ!

ಮುಗಿಲೆತ್ತರ ಧ್ವಜಸ್ಮ೦ಭವನೆತ್ತಿ,
ತಾರೆಗಳ ಕೆಳಗೆ,
ಪಡಿಮುಗಿಲಂತೆ ದೀಪಮಾಲೆಯ ಹಚ್ಚಿ,
ಚುಕ್ಕಾಣಿಯ ಹಿಡಿಯೆ
ಪ್ರತಿಮಾರುತಿಯು,-ಪಾರ್ಥನ ರಥದಂತೆ,
ಯೋಗೀಶ್ವರನು ನಡೆಯಿಸಿದ ತೇರಂತೆ
ತೋರುತಿದೆ-ಸಾಗುತಿದೆ ನೋಡಿರೆ!

ಹಡಗವಿದರ ಹಿ೦ಬದಿಯ ನೋಡಿದೆ
ಮುಂಬದಿ ನೋಡಿದೆ
ಎಡಬದಿ ಬಲಬದಿಯ ಸುತ್ತಿಬಂದೆ-
ದಣಿದೆನೆಂದೆ.
ನೋಡಿದಲ್ಲೆಲ್ಲ ಕೆಸರಂಥ ಕರಿನೀರೊಳಗಿಂದ
ಮಜ್ಜಿಗೆ ಕಡಿಯುವ ನೀರೆಯ ನೋಡಿರೆ!
ಮೇಘಶ್ಯಾಮನ ಮೈಬಣ್ಣದ ಸಲಿಲದಿ೦ದ
ತನಿವೆಣ್ಣಿಯ ತೆಗೆಯುವ ಗೋಪಿಯ ನೋಡಿರೆ!
ನೋಡದವರೆಂಥ ಪಾಪಿ!

ಕಾಣದ ಹೆಜ್ಜೆಯ ಗುರುತನು
ಕಾಣುವ ನೀರ ಮೇಲೆ ಬಿಟ್ಟವರುಂಟೆ?
ಉಂಟು! ಉಂಟು!
ಇಟ್ಟ ಗುರಿಯನು ಬಿಟ್ಟುಬಿಡದೆ ನಿಟ್ಟಿಸುತ
ಹಿಮ್ಮೆಟ್ಟದೆ ಹುಮ್ಮಸದಿಂದ ನಡೆದವರುಂಟೆ?
ಉಂಟು! ಉಂಟು!
ಹಗಲೆನ್ಸದೆ ರಾತ್ರಿಯೆನ್ನದೆ
ಗೊತ್ತೆನ್ನದೆ ಒತ್ತೆನ್ನದೆ
ಮೂಡಿನಿಂದ ಮುಳುಗಿನ ವರೆಗೆ
ಸಂಧ್ಯೆಯಿಂದ ಸಂಧ್ಯೆಗೆ-
ಅಟ್ಟಂಬಟ್ಟ೦ ಅರಣ್ಯದೊಳಗಿಂದ
ಸಪ್ತಸಮುದ್ರಗಳ ವ್ಯಾಪ್ತಿಯೊಳಗಿಂದ
ವಿಂಧ್ಯಾಚಲದಂತೆ ಗಂಭೀರವಾಗಿ-
ಆದರೆ ಚಲಿಸಿ-
ದಿನದಿನಕ್ಕೆ ಇನನಂತೆ ಹೆಜ್ಜೆಯಿಕ್ಕಿದರುಂಟೆ ?
ಉಂಟು! ಉಂಟು!!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...