Home / ಕವನ / ಕವಿತೆ / ಜಯ೦ತಿ

ಜಯ೦ತಿ

ಭೂಮಿಯೊಡನೆ ಕಾಲ ಕೂಡ
ತಿರುಗಿ ಮರುಳಿ ಬರುತಿದೆ.
ನಿನ್ನ ಧರ್ಮ ನಿನ್ನ ಮರ್ಮ
ತಿಳಿಯುವುದೇ ಮರೆತಿದೆ.

ಪರಸ್ಪರರ ತಪ್ಪು ಕಂಡು
ಒಪ್ಪ ಹಾರಿ ಹೋಗಿದೆ.
ಬಾ ಜಯಂತಿ, ಹೋ ಜಯಂತಿ
ಹಳೆಯ ಲೆಕ್ಕ ಸಾಗಿದೆ.

ಪಕ್ಷ ಭೇದ ನೀತಿಯಿಂದ
ಜನ ಅತಂತ್ರವಾಗಿದೆ.
ಆದರ್ಶದ ವಾದವೆಲ್ಲ
ಗಾಳಿ ಮಂತ್ರವಾಗಿದೆ.

ನಿನ್ನ ತೂಕ ನಿನ್ನ ತಾಳ್ಮೆ
ನಿನ್ನೆಚ್ಚರ ಯಾರಿಗೆ ?
ಗುತಿಕೆಯಿಂದ ಎಳೆಯುತಿಹರು
ಹೊಸ ಹೊಸ ಹೊಸ ದಾರಿಗೆ.

ಸತ್ಯವನ್ನು ಎಲ್ಲೊ ಬಿಟ್ಟು
ಆಗ್ರಹವನೆ ಹಿಡಿದಿದೆ.
ಎಡವಿದಲ್ಲೆ ಮತ್ತೆಡಹುತ
ಪ್ರಗತಿ ಎತ್ತೊ ನಡೆದಿದೆ.

ಸತ್ಯ-ಕರ್ಮ-ಚಂದ್ರ-ಗಂಧ
ತ೦ದೆ ನೀನು ಜಗದಲಿ.
ಪ್ರೇಮದ ನವಪುತ್ತಳಿಯನೆ
ನೀ ತಾಯೀ ಯುಗದಲಿ.

ಭಾರತೀಯ ಕಂದ ನೀನು
ಪಾರತಂತ್ರ್ಯದುರಿಯಲಿ.
ಉದಯವಾದೆ ಸದ್ದಿಲ್ಲದೆ
ಆ ಸುದಾಮ ಪುರಿಯಲಿ.

ರಾಣಿ ರಾಜ್ಯ ಮನೋ ರಾಜ್ಯ
ಮಟಾಮಾಯವಾಗಿರೆ.
ಸ್ವಾತಂತ್ರ್ಯದ ಘೋಷದಲ್ಲಿ
ದಿಗ್ ಬಂಧನ ಸಾಗಿರೆ.

ಖಂಡ ಖಂಡಗಳಲಿ ಬಲಿಯೆ
ಪುಂಡತನವ ನಡೆಸಿದೆ.
ಖಂಡಿತದಲಿ ಕಂಡ ಸತ್ಯ
ನಿನ್ನ ಹುಚ್ಚ ಬಿಡಿಸಿದೆ.

ಅಬಲರನ್ನೆ ಪ್ರಬಲರೆದುರ-
-ಹಿಂಸೆಯಿಂದ ನಿಲಿಸಿದೆ.
ಮತ್ತೆ ಮತ್ತೆ ಸತ್ಯ ನುಡಿದು
ಮತ್ತರ ಮನ ಒಲಿಸಿದೆ.

ಭ್ರಾಂತರಲ್ಲಿ ಶ್ರಾಂತರಲ್ಲಿ
ಕ್ರಾಂತಿ ತಂದೆ ಮೋಹನಾ.
ಸೇವೆಗೊಂದು ಕಾಂತಿ ತಂದೆ
ಅದಕೆ ಆದೆ ವಾಹನಾ.

ನಡೆಯ ನುಡಿಯ ಮಾಟದಿಂದ
ಚರಿತೆಗೆ ಅಚ್ಚಿರಿಸಿದೆ.
ಶರಣರಿಗೋ ಮರಣವಿಲ್ಲ
ಜನರನು ಎಚ್ಚರಿಸಿದೆ.

ಪ್ರತಿ ಜಯಂತಿ ವೈಜಯಂತಿ
ನವಮಾನವನುದಯಕೆ
ಆಹ್ವಾನವು ದಾನವಿಸಿದೆ
ಮಾನವ ಸದುಹೃದಯಕೆ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...