Home / ಕವನ / ಕವಿತೆ / ಬೆಳೆದು ಬಂದ ಬಯಕೆ

ಬೆಳೆದು ಬಂದ ಬಯಕೆ

ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ
ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ
ಹಗಲು ಇರುಳು ನೆನವೆ ಬುತ್ತಿ
ಹೃದಯದೊರತೆಯಲ್ಲ ಬತ್ತಿ
ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ.
ಜೀವ ಮೌನ ತಾಳಿದೆ.
ಇಂದು ನಗುವೆ ಇಲ್ಲವಾಯ್ತು
ಮೌನ ಭಾರದಿಂದ ಸೋತು
ದೇಹ ಭೂಮಿಗಿಳಿದಿದೆ
ಧೂಳಿಯಲ್ಲಿ ನರಳಿದೆ;
ನನ್ನ ಸುತ್ತು ಮುತ್ತಲೇನು
ಮುಖವನೆತ್ತಿ ನೋಡಲೇನು
ಚಣ ಚಣಕೂ ಕರುಳ ಕೆಣಕಿ ಕಣ್ಣಿರಿಯುವ ಕತ್ತಲೆ
ಅದರ ಕುಣಿತ ಬತ್ತಲೆ!
ದುಃಖ ಅತಿಥಿಯಂತೆ ಬಂದು
ಮನೆಯ ಹೊಸ್ತಿಲಾಚೆ ನಿಂದು
ನನ್ನ ಕೂಗಿ ಕರೆದರೆ
ಬಾಗಿಲನ್ನು ಬಡಿದರೆ
ಕರುಣೆ ಇಲ್ಲದವರ ತೆರದಿ ಅದಕೆ ಬೇಡವೆನ್ನಲೆ?
ನನ್ನತನವ ಮರೆಯಲೆ?
ತಾಳ್ಮೆ ಬಾನ ಬಿತ್ತರ
ಹಿಮಾಲಯಕು ಎತ್ತರ
ಅದರ ಪೂರ್ವ ಪುಣ್ಯವೇನೊ
ಸೌಭಾಗ್ಯದ ಚಿಹ್ನೆಯೇನೊ
ಹೃದಯದಾಳದಲ್ಲಿ ಮೌನ ಗರ್ಭಧರಿಸಿದಂತಿದೆ.
ಬೆಳಕಿಗಾಗಿ ತಪಿಸಿದೆ.
ನನ್ನ ಎದೆಯ ಮೂಡಲಲ್ಲಿ
ಕನಸು ಮನಸು ಕೂಡುವಲ್ಲಿ
ಇಂದು ಇಲ್ಲವಾದರೂ
ಮುಂದೆ ಒಮ್ಮೆಯಾದರೂ
ಹಾಲು ಹಣ್ಣು ಹೂವು ಜೇನು ಹೊತ್ತು ಬರನೆ ಚಂದಿರ
ಕಣ್-ಮನಕೂ ಸುಂದರ!
ಪೂರ್ಣಕಲಾ ಪುಣ್ಯಮಾಯಿ
ಬೆಳುದಿಂಗಳ ಹಾಲ ತಾಯಿ
ಇರುಳ ಜೋಗುಳನ್ನು ಹಾಡಿ
ಕಣ್ಣು ತುಂಬುವಂತೆ ನೋಡಿ
ಈ ಚಂದ್ರಮ ಈ ಸಂಭ್ರಮ-ನಿನಗೆ ಇರಲಿ ಎನ್ನಳೆ?
ಉಡಿಯ ತೆರೆದ ಕರೆಯಳೆ!
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...