Home / ಕವನ / ಕವಿತೆ / ಕ್ಷಿತಿಜಯಕ್ಷ

ಕ್ಷಿತಿಜಯಕ್ಷ

ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು
ಮನದ ಮನೆಯಲಿ ಭೀತಿ ನಡುಗುತಿಹುದು
ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ
ತುಳಿದರೆದು ಬಾನೆದೆಯ ಸೀಳಿರುವುದು

ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ
ನೂರು ನಾಲಗೆ ಚಾಚಿ ಒದರುತಿಹುದು
-‘ಗುಡ್ಡಗಳ ಚಲಿಸುವೆನ್ಮು ಕಡಲನ್ನು ಕಡೆಯುವೆನು
ಸ್ವರ್ಗಸಿಂಹಾಸನವ ನಡುಗಿಸುವೆನು’

ಕಡಲತೆರೆ ಹುಚ್ಚೆದ್ದು ಹಾವಿನೊಲು ಹೆಡೆಗಳನು
ಅಪ್ಪಳಸಿ ಅಬ್ಬರಿಸಿ ಮುತ್ತುತಿಹವು
ಮರಣ ಜಿವ್ಹೆಯ ಹಾಗೆ ತುತ್ತಲಿಕೆ ಸುತ್ತಿಹವು
ತಮ್ಮ ಬಲೆಯನು ಹರಡಿ, ಎಳೆಯುತಿಹವು.

ನನ್ನ ಈ ಕಿರಿ ನಾವೆ ಹಿರಿಗಡಲ ಮಡಿಲಲ್ಲಿ
ಏಳುತ್ತ ಮುಳುಗುತ್ತ ತೇಲುತಿಹುದು
ನೀರಗೋರಿಯ ಕಂಡ ನೂರು ನಾವೆಯಕಂಡು
ತತ್ತರಿಸಿ ಒಳಗೊಳಗೆ ಕುಸಿಯುತಿಹುದು.

ತೆರೆಗೆ ತುತ್ತಾಗುವುದೊ? ದೈವರಕ್ಷಿತವಾಗಿ
ದಂಡೆಯಲಿ ಬಂದರವ ಸೇರಬಹುದೊ?
-ದಿಗ್ಭ್ರಾಂತ ನಿರೆಯಿಂತು ಆಕಾಶದಂಚಿನಲಿ
ಹೊನ್ನ ಹೊಳೆಯೊಲು ಕಾಂತಿ ಹೊಮ್ಮುತಿಹುದು

ಬಾನ್ನೀರ ಚುಂಬನದ ಚೆಲುವು ನೈದಿಲೆಯಲ್ಲಿ
ಕಿರಣ ಪಿಚ್ಛವ ಹರಡಿ ಕುಳಿತಿರುವನು
ದೇವನೋ ಯಕ್ಷನೋ, ಸ್ವಪ್ನ ಮಂದಿರ ರಚಿಸಿ
ಸಾಹಸಕೆ ಕರೆಯುತಿಹ ಶಿಲ್ಪಿವರನು.

ಅದುವೆನಗೆ ನಿತ್ಯವೂ ಧೈರ್ಯ, ಜೀವನ ಸ್ಫುರಣ,
ಆಸೆಗಳ ಚಿರವಾದ ಸುಮಬಂಧನ.
ಅದ ನೋಡಿದೀ ನಾವೆ ಪಕ್ಕಗಳ ಹರಡುವುದು
ನೀರ್ವಕ್ಕಿಯೊಲು ನೆಗೆದು ಮುನ್ನಡೆವುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...