Home / ಕವನ / ಕವಿತೆ / ಕ್ಷಿತಿಜಯಕ್ಷ

ಕ್ಷಿತಿಜಯಕ್ಷ

ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು
ಮನದ ಮನೆಯಲಿ ಭೀತಿ ನಡುಗುತಿಹುದು
ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ
ತುಳಿದರೆದು ಬಾನೆದೆಯ ಸೀಳಿರುವುದು

ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ
ನೂರು ನಾಲಗೆ ಚಾಚಿ ಒದರುತಿಹುದು
-‘ಗುಡ್ಡಗಳ ಚಲಿಸುವೆನ್ಮು ಕಡಲನ್ನು ಕಡೆಯುವೆನು
ಸ್ವರ್ಗಸಿಂಹಾಸನವ ನಡುಗಿಸುವೆನು’

ಕಡಲತೆರೆ ಹುಚ್ಚೆದ್ದು ಹಾವಿನೊಲು ಹೆಡೆಗಳನು
ಅಪ್ಪಳಸಿ ಅಬ್ಬರಿಸಿ ಮುತ್ತುತಿಹವು
ಮರಣ ಜಿವ್ಹೆಯ ಹಾಗೆ ತುತ್ತಲಿಕೆ ಸುತ್ತಿಹವು
ತಮ್ಮ ಬಲೆಯನು ಹರಡಿ, ಎಳೆಯುತಿಹವು.

ನನ್ನ ಈ ಕಿರಿ ನಾವೆ ಹಿರಿಗಡಲ ಮಡಿಲಲ್ಲಿ
ಏಳುತ್ತ ಮುಳುಗುತ್ತ ತೇಲುತಿಹುದು
ನೀರಗೋರಿಯ ಕಂಡ ನೂರು ನಾವೆಯಕಂಡು
ತತ್ತರಿಸಿ ಒಳಗೊಳಗೆ ಕುಸಿಯುತಿಹುದು.

ತೆರೆಗೆ ತುತ್ತಾಗುವುದೊ? ದೈವರಕ್ಷಿತವಾಗಿ
ದಂಡೆಯಲಿ ಬಂದರವ ಸೇರಬಹುದೊ?
-ದಿಗ್ಭ್ರಾಂತ ನಿರೆಯಿಂತು ಆಕಾಶದಂಚಿನಲಿ
ಹೊನ್ನ ಹೊಳೆಯೊಲು ಕಾಂತಿ ಹೊಮ್ಮುತಿಹುದು

ಬಾನ್ನೀರ ಚುಂಬನದ ಚೆಲುವು ನೈದಿಲೆಯಲ್ಲಿ
ಕಿರಣ ಪಿಚ್ಛವ ಹರಡಿ ಕುಳಿತಿರುವನು
ದೇವನೋ ಯಕ್ಷನೋ, ಸ್ವಪ್ನ ಮಂದಿರ ರಚಿಸಿ
ಸಾಹಸಕೆ ಕರೆಯುತಿಹ ಶಿಲ್ಪಿವರನು.

ಅದುವೆನಗೆ ನಿತ್ಯವೂ ಧೈರ್ಯ, ಜೀವನ ಸ್ಫುರಣ,
ಆಸೆಗಳ ಚಿರವಾದ ಸುಮಬಂಧನ.
ಅದ ನೋಡಿದೀ ನಾವೆ ಪಕ್ಕಗಳ ಹರಡುವುದು
ನೀರ್ವಕ್ಕಿಯೊಲು ನೆಗೆದು ಮುನ್ನಡೆವುದು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...