Home / ಕವನ / ಕವಿತೆ / ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ

ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ

ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ
ಪಂಚಗುರುಗಳ ಗಾನ ಗುರುಸ೦ಗಮಾ
ಗಗನ ಸಾಲದು ಗುರುವೆ ಕಡಲು ಸಾಲದು ಗುರುವೆ
ಪರಮ ಪ೦ಚಾಚಾರ್ಯ ಶಿವಸಂಗಮಾ ।।

ಕಮಲ ಮಲ್ಲಿಗೆ ನೀವೆ ವಿಮಲ ಸಂಪಿಗೆ ನೀವೆ
ಹೂವಿಗಿಂತಲು ಹೂವು ನಿಮ್ಮಮಿಲನ
ಲಿಂಗದೊಲವೇ ಒಲವು ಲಿಂಗ ಬಲವೇ ಬಲವು
ವಿಶ್ವವೊಂದೇ ಕುಲವು ಜ್ಞಾನ ಮಿಲನ

ಓಂ ನಮೋ ಓಂ ನಮೋ ಓಂ ನಮೋ ಶಿವಮಂತ್ರ
ಪಂಚ ಪಂಚಾಕ್ಷರಿಯ ಮಂತ್ರಪುರುಷ
ಮುಕ್ಕೋಟಿ ಶಿವಮಂತ್ರ ನೂರ್ಕೋಟಿ ಮಾಮಂತ್ರ
ಪ್ರತ್ಯಕ್ಷ ಪ್ರತ್ಯಕ್ಷ ಪರಮಹರುಷ

ತೆಂಗು ಬಾಳೆಯು ನೀವೆ ಮಾವು ಮಲ್ಲಿಗೆ ನೀವೆ
ಗುರುಲಿಂಗ ಜಂಗಮದ ತೋಟ ಕಂಡೆ
ಗೌರಿ ಹುಣ್ಣಿಮೆ ನೀವೆ ಶೀಗಿ ಹುಣ್ಣಿಮೆ ನೀವೆ
ಶಿವರಾತ್ರಿ ಕಾರ್ತಿಕದ ಪೂಜೆ ಕಂಡೆ
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...