Home / ಕವನ / ಕವಿತೆ / ಅದರ ಪಾಡಿಗೆ

ಅದರ ಪಾಡಿಗೆ

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ
ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ
ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ
ಕಾರ್ಯವ ಹುಡುಕುವುದು ಕಾರಣ

ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ
ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ
ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲು
ಬದಲಿಸಿದ ಉದ್ಧತ ಪ್ರಜ್ಞೆ

ಕದವಿಕ್ಕಿ ಬೀಗದ ಕೈ ಬಿಸಾಕಿದ ಪದಗಳ
ನಡುವೆ ಅಂತರ ಬಹಳ ದಾಟಿದವನೂ
ನಾನೆ ಕುಸಿದವನೂ ನಾನೆ
ದಿಡ್ಡಿ ಬಾಗಿಲ ಹತ್ತಿರ

ಆಲಸಿಗ ಕೈಗೊಂಡ ಸುದೀರ್ಘ
ಯಾನ ಯಾವುದೇ ಪೂರ್ವಸಿದ್ಧತೆ ವಿನಾ
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಲ್ಲಿ
ರುವೆನೆಂಬುದನೆ ಮರೆತವನ

ಕೆಲವರು ನದಿ ದಾಟಿ ಹೋದರು
ಕೆಲವರು ಸೂರ್ಯಾಸ್ತ ನೋಡುತ್ತ
ನಿಂತರು ಕೆಲವರು ಗ್ರಾಮಾಂತರಗಳಲ್ಲಿ
ಕರಗಿದರು ಕೆಲವರು ಎದ್ದು ಹೋದರೂ

ಇದ್ದಲ್ಲಿ ಇದ್ದರು ಎಲ್ಲ ವೈರುಧ್ಯಗಳೂ
ಸರಿಗಮ ಒಂದೇ ಸಾಲಿನಲ್ಲಿ ಬೆಂಕಿ ಮತ್ತು
ಹಿಮ ಕಾಡಿನಲ್ಲಿ ವ್ಯಾಘ್ರ ಬಯಲಲ್ಲಿ ದನ
ಮಧ್ಯಾಹ್ನ ಟಾರಿನ ಪರಿಮಳ ಸಂಜೆ ಮಲ್ಲಿಗೆಯ

ಘಮಘಮ ಇರುಳೆಲ್ಲಾ ಎಚ್ಚರವಿದ್ದ
ಗೂಬೆ ಹಗಲು ತೂಗುವುದು ನಿದ್ದೆ
ಮಳೆಗೆ ಕಾಯುವ ಅಣಬೆಯ ಅತಿಸೂಕ್ಷ್ಮ ಬಿತ್ತು
ಬೇಸಿಗೆಯೆಲ್ಲಾ ಬಣಬೆಯೊಳಗಿತ್ತು

ಮನೆಯನೊಂದ ಕಟ್ಟಿಸಲೇನು ಮೋಡದ
ಕೆಳಗೆ ಮಳೆನೀರು ಯಾವ ಲೆಕ್ಕ ಬೇಸಿಗೆಯ
ಸೆಕೆ ಯಾವ ಲೆಕ್ಕ ಮೋಡವದರ ನಾಡಿಗೆ
ಮನೆ ಅದರ ಪಾಡಿಗೆ-ಎನ್ನುವುದೊಂದು
ಹಳೇ ಪದ್ಯ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...