Home / ಕವನ / ಕವಿತೆ / ಹೀಗಿರಲು

ಹೀಗಿರಲು

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ

ಪ್ರಾಕೃತದ ಸ್ಮೃತಿಯಂತೆ
ಹೋದಲ್ಲಿ ಬರುವ ತಾಳೆ ಮರವೇ
ದಾರಿಯುದ್ದಕ್ಕೂ
ಜತೆಗಾರ

ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ
ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ
ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ
ಕೇವಲ ಗೆರೆಗಳು ಮಾತ್ರ ಕಾಣಿಸುತ್ತಿವೆ ಯಾಕೆ
ಬಳಕೆಯಲ್ಲಿರದ ದಾರಿಗಳ ಹಾಗೆ
ಹುಲ್ಲು ಕಡ್ಡಿ ನಾಚಿಕೆ ಮುಳ್ಳು ಹಬ್ಬಿ

ಹಾಗೂ ಅವನು ಹೋಗದ ಜಾಗಗಳೇ ಇಲ್ಲ
ಉಗಿಬಂಡಿಯಲ್ಲೂ ಅವನ ಜತೆ ಬಸ್ಸಿನಲ್ಲೂ
ಹೊಸ ಪೇಟೆಯಲ್ಲಿ ಅವನು ಸುತ್ತಾಡಿದಾಗಲೂ
ಜನ ನಿಬಿಡತೆಯಲ್ಲಿ ಮತ್ತು ಜನ ಶೂನ್ಯತೆಯಲ್ಲಿ
ಪಂಪನ ಓದಿದಾಗಲೂ ಶೇಕ್ಸ್‌ಪಿಯರನ ಅನುವಾದಿಸಿದಾಗಲೂ
ನಾಡಿನಲ್ಲೂ ಪರದೇಶದಲ್ಲೂ
ಎಲ್ಲೆಡೆಯಲ್ಲೂ ಮಗುವಿನಂತೆ ಛಲಹಿಡಿದು

ಅದರ ಗಲಗಲ ಸದ್ದು ಇತರೆಲ್ಲ
ಸದ್ದುಗಳಿಗಿಂತ ಅವನಿಗಿಷ್ಟ ಅರ್ಥವಿಲ್ಲದೆ ಅದು ಮಾತಾಡುವ ಕ್ರಮಕ್ಕೆ
ಮನಸೋತ
ಮನುಷ್ಯ ಕಾಣದ್ದನ್ನು ಅದು ಕಾಣುವುದು ಬೆಟ್ಟದಾಚೆಗಿರುವುದನ್ನೂ ನೋಡುವುದು

ಅಷ್ಟೊಂದು ಎತ್ತರ ಅದರ ಶಿರ
ಹವಾಮಾನದ ಸಕಲ ಶಕುನಗಳನ್ನೂ ಮೊದಲು ಹಿಡಿಯುವುದು ಅದು
ಆದರೂ ಎಷ್ಟೊಂದು ಒಂಟಿ

ಕೆಲವು ಸಲ ಅದರಂತೆ ಆಗುವ ವಾಂಛೆ
ನೀಳ ಕಾಯ ಮತ್ತು ಸೂರ್ಯ ಪ್ರಭೆ
ಜಗದ ಹಂಗಿಲ್ಲದೆ ಒಬ್ಬನಾಗುವ ಇಚ್ಛೆ
ಕಾಲದ ಗಣನೆ ಮೈಮನದ ಸುಳಿಯಲ್ಲಿ
ಅಮೃತತ್ವ ಆದರ ಹಣ್ಣಿನಲ್ಲಿ

ಸುದೀರ್ಘ ನೆರಳು ಬಯಲಲ್ಲಿ ಬೆಳೆಯಲ್ಲಿ
ಬಿದ್ದು ತೇಲುವುದು ಅದರಲ್ಲಿ
ಹುಲ್ಲು ಮಲಗುವುದು
ಹಕ್ಕಿಗಳು ಹಾಯುವುವು
ಇಂದು ನಾಳೆಗಳ ಹಿಂದು ಮುಂದಾಗಿ

ಹೀಗಿರಲು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...