Home / ಕವನ / ಕವಿತೆ / ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು)

ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ
ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ||

ಪುಣ್ಯಭೂಮಿ ನೀ ಗಣ್ಯಭೂಮಿ ಎಂದೇನೇನೋ ನಿನ ಹೊಗಳಿದರು
ದಿವ್ಯ ಭವ್ಯ ಭಾರತ ಅಂತಂದು ಬಾಯ್ತುಂಬ ಸುಳ್ಳೇ ಹಾಡಿದರು ||೧||

ಕೀರುತಿವಂತೆ ಖ್ಯಾತಿವಂತೆ ದಿಕ್ಕಿಲ್ಲದಂಥ ದುರ್ಗತಿ
ಯಾರಿಗಾಗಿ ನೀ ಬಾಳುವಿಯೇನೋ ಬದುಕಿದ್ದೂ ನೀ ಸತ್ತಿ ||೨||

ಲಂಡ ಭಂಡ ಪುಂಡಾಟದ ಕಂತ್ರಾಟ ರಾಜಕಾರಣಂದೋ ಯಾಪಾರ
ಹಾಡ ಹಗಲೆ ನಿನ್ನ ಲೂಟಿ ಮಾಡ್ಯಾರ ಮಂತ್ರಿ ಶಾಸಕರು ಕೈಯಾರ ||೩||

ವೋಟಿಗೆ ನೋಟನು ತೂರಿದ ಮಂತ್ರಿಗೆ ನಿನ್ನೆನಪ್ಹ್ಯಾಂಗ ಬರತೈತಿ
ಒಂದಕ್ಕ ನೂರ್ರಷ್ಟು ಬಳಕೊಳ್ಳಾಕ ಹಗಲಿಳ್ಳು ಸಾಲದು ಬಂದೈತೆ ||೪||

ಸಾವುಕಾರನಿಗೊ ಸಾವಿರ ಕೆಲಸ ಆಸ್ತಿ ಪಾಸ್ತಿ ಅಂತ ಬೆಳೆಸೋದೆ
ಬಡವರ ಬೆನ್ ಮ್ಯಾಲೆ ಸವ್ವಾರಿ ಮಾಡತಾ ದೇಶಾನ್ನ ನರಕಕೆ ಕಳಸೋದೆ ||೫||

ವ್ಯಾಪಾರಿ ತೂಗತಾನೆ ಅನ್ಯಾಯ ತಕ್ಕಡಿ ರೊಕ್ಕಾನೇ ಅವ್ಗೆ ಮನೆದೇವ್ರು
ಗಂಟು ಬಡ್ಡಿಗಳ ಹಣದ ಮೂಟೆಗಳು ದೇಶನ್ಯಾಕೆ ನೆನಸ್ತಾರೆ ಅಂಥಾವ್ರು ||೬||

ತಲೆಗಳ ಬೋಳಿಸಿ ಕೂಡಿಟ್ಟ ಭಂಡವಾಳ ಭಂಡತನವನ್ನೇ ಕಲಿಸ್ಯೈತಿ
ದೊಡ್ಡ ದೊಡ್ಡ ಬಿಜಿನೆಸು ದೊಡ್ಡದಾಗಿ ಬೆಳದಾವೆ ತಾಯಿಯ ಒಡಲೋ ಬರಿದೈತೆ ||೭||

ಲಂಚ ಲಂಚ ಅಂತ ನಾಲಿಗೆ ಚಾಚುತ ರೈತನ್ನ ರಗುತ ಹೀರುತ್ತ
ಉಬ್ಬುವ ಕೊಬ್ಬುವ ಅಧಿಕಾರಿಗಳಿಗೆ ದೇಶದ ಮಾತೇ ಅತ್ತತ್ತ ||೮||

ಸಂಬಳ ಸಾಲದು ಭಡತೀ ಸಾಲದು ಗಿಂಬಳಕಾಗೀ ಪೈಪೋಟಿ
ಸಾವಿರ ಲಕ್ಷದ ನೌಕರಿದಾರರು ತಾಯಿಗೆ ಸುಖವು ಯಾಪಾಟಿ ||೯||

ಊರೂರಿಗೊಬ್ಬೊಬ್ಬ ಜಗದ್ದ್ ಗುರುವು ಶ್ರೀಮಂತ ಶಿಷ್ಯರ ಒಡನಾಟ
ಭೇದವ ಬೆಳೆಸೀ ಬಡದಾಡಕ್ಹಚ್ಚಿ ಮೆರೆಯೋರ್ ದೇಶಕೆ ಭಂಡಾಟ ||೧೦||

ತಿಮ್ಮಪ್ಪ ಬೊಮ್ಮಪ್ಪ ಎಲ್ಲವ್ವ ಹುಲಿಗೆವ್ವ ನೂರಾರು ದೇವರು ಮನೆಮನೆಗೆ
ಎಲ್ಲಾವು ಜನರನು ಹರಕೊಂಡು ತಿನುವಾಗ ಭಾರತಿ ದೇವಿಗೆ ಏನ್ ಕೊನೆಗೆ ||೧೧||

ಪೂಜಾರಿ ಚಿಂತೆ ಕಾಣಿಕೆ ಕಡೆಗೆ ಭಕ್ತರ ಚಿಂತೆ ಹೊರಗಡೆಗೆ
ಪುರಾಣ ನೀತಿ ಹೇಳುವ ಶಾಸ್ತ್ರಿಗೆ ಸುಂಭಾವನೆಯೇ ಕಡೆ ಗಳಿಗೆ ||೧೨||

ಬರೆಯುವ ಕವಿಗೆ ಸನ್ಮಾನ ಭಾಷಣ ಕೊರೆವಗೆ ಧನಮಾನ
ಭಾರತ ಮಾತೆಯ ಎಲ್ಲರು ಬಳಸಿ ಲಂಪಟತನದಲೆ ದಿನಮಾನ ||೧೩||

ಹರೇದ ಹುಡುಗ್ರಿಗೆ ಬಣ್ಬಣ್ಣ ಹುಡುಕೋದು ಮೀಸೆ ಬಂದಾಗ ದೇಶ ಕಾಣದು
ಹರೇದ ಹುಡುಗ್ಗೆ‍ಗೆ ಬಣ್ಬಣ್ಣ ಮೆರೆಯೋದು ದೇಶ ಅಂತಂದ್ರೆ ಗೊತ್ತಾಗದು ||೧೪||

ಖಾಕೀಯ ಉಡುಪಿಗೆ ಕೇಸೀನ ಬ್ಯಾಟಿ ಖಾದಿ ಉಡುಪಿಗಂತು ದೇಶನೆ ಬ್ಯಾಟಿ
ಕರ್ರನ್ನ ಉಡುಪಿಗೆ ಕೊಲೆಗಡ್ಕುರನುಳುಸೋದು ನ್ಯಾಯಾಲಯ್ದಾಗೆ ನ್ಯಾಯ ಲೂಟಿ ||೧೫||

ದುಡಿಯುವ ರೈತಗೆ ಶ್ರಮ ಜೀವಿಗಳಿಗೆ ಹೊಟ್ಟೇನ ತುಂಬೋದೆ ಕಡುಚಿಂತೆ
ಸುಲಿದು ತಿನ್ನುವಂಥ ಹದ್ದು ಕಾಗೆಗಳ ಕೈಯಾಗೆ ನರಳುವ ಜೀವ ಚಿತೆ ||೧೬||

ನೆಲದ ಮಕ್ಕಳೇ ನಿನ್ನ ಮಕ್ಕಳು ಅವರ ದುಸ್ಥಿತಿಯೆ ನಿನ್ನ ಸ್ಥಿತಿ
ಮಣ್ಣಿನ ಮಕ್ಕಳು ಕಣ್ಣು ಬಿಟ್ಟು ನಿಲ್ಲೋವರೆಗೆ ತಾಯಿ ನಿನಗಂತೂ ಇದೇ ಗತಿ ||೧೭||

೧೩.೬.೮೬
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್