Home / ಕವನ / ಕವಿತೆ / ಅವತಾರಿ ಬರುತ್ತಾನೆ

ಅವತಾರಿ ಬರುತ್ತಾನೆ

ಅವನು ಬರುತ್ತಾನೆ
ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು
ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ
ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ
ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ಮುಳುಗಿಸುತ್ತ
ಬಾಯ ಒರಳಲ್ಲಿ ಹಿರಿಯರನರೆದಾಡುತ್ತ

ಹಲ್ಲ ತೀಟೆಯಲ್ಲಿ ಕಿರಿಯರ ಕೊರೆದು ಸಣ್ಣ ಮಾಡುತ್ತ
ಮೂಗಿನ ನೇರಕ್ಕೆ ಜಗವನಳೆದು ಸೀನಿ ಸುರಿಯುತ್ತ
ಬಡಾಯಿ ಬಾಹುಗಳ ಉದ್ದಗಲಗಳಿಗೆ ಚಾಚಿ ತಬ್ಬಿ
ಹೂಟ್ಟೆಯುಬ್ಬರ ತೋರುತ್ತ ತನ್ನಪ್ಪನೊಬ್ಬನೇ ಪರಮ ಪುರುಷ
ತನ್ನವಗವಳೊಬ್ಬಳೇ ಜಗಮೀರಿದ ಗರತಿ ಎನುತ್ತ

ತನ್ನ ವಂಶ ವೃಕ್ಷಕ್ಕೆ ಅನಾದಿ ಬೀಜದ ಪಾವಿತ್ರ್ಯ ತೋರುತ್ತ
ಹಗಲಿನ ಮುಖಕ್ಕೆ ಕೊಳ್ಳಿ ತೋರಿಸುತ್ತ
ವಿಶ್ವಗೂಢತೆಯ ರೋಮರೋಮಗಳಲ್ಲಿ ತುಂಬಿಕೊಂಡು
ತಾನು ಕುಡಿದೊಂದೆರಡು ಬಾವಿಗಳಲ್ಲಿ ಸಾಗರಗಳ ಮುಕ್ಕಳಿಸುತ್ತ
ತನ್ನ ಬಾಯಲ್ಲೀರೇಳು ಲೋಕಗಳ ಬಿಂಬಿಸಿ
ಕೃಪಾಪೋಷಕ ನಗೆಯಿಂದ ಜಗವ ಪಾವನಗೊಳಿಸಿ

ನಮ್ಮನು ಉದ್ಧರಿಸುಲು ಬರುತ್ತಾನೆ
ಬಂದು ನಿಂತು ಜಗದಗಲ ಮುಗಿಲಗಲವಾದ
ತನ್ನುದರದಡಿಯಲ್ಲಿ ನಮಗೆ ಕಾವು ಕೊಡುತ್ತಾನೆ
ಬೆಚ್ಚಗಿದೆಯೆಂದು ನಾವು ಆಶ್ರಯ ಪಡೆದೆವೋ ಸರಿ
ಕಪ್ಪ ನೆರಳಪುಟ್ಟಿ ನಮ್ಮ ಮುಚ್ಚಿ
ಉಸಿರುಕಟ್ಟಿ ನಾವು ಮೂಕರಾಗಿ
ಬಿಳಿಚಿಕೊಂಡು ಬೆಪ್ಪರಾದರೆ ಅವನ ತಪ್ಪೇ?

ನೋಡು ಅವನು ಬಂದೇ ಬರುತ್ತಾನೆ
ಬಿಡಿಸಿಕೊಳ್ಳಲು ನೀನು ಯತ್ನಿಸಿದಂತೆಲ್ಲಾ
ಪರಲೋಕಕೇರುವ ಪರಿಪೂರ್ಣ ಪವಾಡದೇಣಿಯಿಂದಾದರೂ
ನಿನ್ನ ಸೆಳೆದು ತನ್ನ ಸುತ್ತಲೇ ಜೇಡನಂತೆ ತಿರುಗಾಡಿಸುತ್ತಾ
ಕೊನೆಗೆ ನಿನ್ನ ನುಂಗಿ ನೀರು ಕುಡಿಯುತ್ತಾನೆ
ಸೋಹಮ್ಮೆಂದು ನಿನ್ನ ಸೊನ್ನೆಯಾಗಿಸುತ್ತಾನೆ
ನೀನು ನೀನಾಗುಳಿಯಬೇಕೆಂದರೆ ದೂರ ಓಡು
ಅಗೋ ಬಂದ! ಬಂದೇ ಬರುತ್ತಾನೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...