Home / ಕವನ / ಕೋಲಾಟ / ಕೋಲಾಟದ ತುಂಡು ಪದಗಳು (೧)

ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ )

ಹೂಂಗಾ ತರೋ ಮಲ್ಲಿಗೀರಣ್ಣಾ
ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲನ್ನ || ೧ ||

ಸಂಪುಗೆ ಸಂಪುಗೆ ಯಾವೂರ ಸಂಪುಗೇ?
ದ್ಯೇವರಿಗೆ ಹೋಗ್ ಸಂಪಿಗೇ
ದ್ಯೇವರಿಗೆ ಹೋಗ್ ಮಿಂದಾ ಮಕ್ಳ
ತುರ್‍ವ ನೋಡ್ ಸಂಪಿಗೇ
ಕ್ಯೇದುಗೇ ಕ್ಯೇದುಗೇ ಯಾತರ ಕ್ಯಾದುಗೇ
ದೇವರಿಗೆ ಹೋಗ್ವ ಕ್ಯಾದುಗೇ || ೨ ||

ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದೇವರಿಗೆ ಹೋಗ್ ಮಿಂದಾ ಮಕ್ಳ
ತುರವ ನೋಡ್ ಮಲ್ಲುಗೇ
ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದ್ಯೇವರಿಗೆ ಹೋಗ್ವ ಮಲ್ಲುಗೇ
ದೇವರಿಗೆ ಹೋಗ್ವ ಮಲ್ಲುಗೇ || ೩ ||

ಅಳ್ಳದ ಹೂಗು ಬೆಳ್ಳಗಾದ್ರೆ ಮಲ್ಲಿಗೇನ ಮಾಡ್ವದೂ
ಚೆಲ್ವಿ ಗಂಡ ಚೆಲ್ವಿನಾದ್ರೆ ಜಾನಕೇನ್ ಸಲ್ವರೋ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೪ ||

ರೋಟ್ಟಿಯ ತಿಂದೆ ನೋಡೂ ತುಪ್ಪದಿಂದಾ
ನಾನ ಸೋಳಪ್ಪುದೂ ನಾನ್ ರೊಕ್ಕದಿಂದಾ
ಬಚುವನಾ ಬಚುವನ್ನಿರೇ ಬಚವನಾ
ಪಾದಕೆ ಚರಣೆನ್ನಿರೇ || ೫ ||

ಮೇನೆ ಮುತ್ತಿನ ಚತುಗೇ ಆದ ನನ್ನ
ಕಲ್ಲಾ ಪಾಂಡೋರ ಬಚುವೇ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೬ ||

ಕಾರಿಕಾಯು ಕಡಜಲಕಾಯು ಹೊಡೆದಾಟ
ವಳ್ಳೆ ಗಂಡಗೆ ಹೋಗು ಪುಂಡಿಗ್ಯೆಲ್ಲ ಹೊಡೆದಾಟ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೭ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...