Home / ಲೇಖನ / ಇತರೆ / ಕಲಾಂ ಹೀಗಿದ್ದರು

ಕಲಾಂ ಹೀಗಿದ್ದರು

ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಜೀವಂತವಿದ್ದಾಗಲೇ ದಂತ ಕತೆಯಾದವರು.

ಇವರು ೨೦೦೨ರಲ್ಲಿ ಭವ್ಯ ಭಾರತದ ೧೧ನೆಯ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ದಿನಾಂಕ ೧೪-೦೮-೨೦೦೨ರಲ್ಲಿ ಬೆಳ್ಳಂಬೆಳಗ್ಗೆ ಬಹುದೊಡ್ಡ ಅಧಿಕಾರಿ ಬಹುಶಃ ಸ್ವಜಾತಿಯೆಂಬ ಸಲುಗೆಯಿಂದಲೋ ಏನೋ ಇವರನ್ನು ಕಾಣಲು ಬಂದಿದ್ದರು.

“ಸಾರ್ ನಿಮ್ಮ ಕಚೇರಿಗೆ ಮೇಲಿಂದ ಮೇಲೆ ಬರುತ್ತಿರುವ ಆ ಅಧಿಕಾರಿ ಬಗೆಗೆ ನಿಮಗೆ ತಿಳಿಯದೆಂದು ಅನಿಸುವುದು! ಆತ…?’ ಎಂದು ಇನ್ನು ಏನೇನೋ ಹೇಳಲು ಉತ್ಸಾಹಕನಾಗಿದ್ದನು.

‘ಕಲಾಂಜೀಯವರು ಮಧ್ಯದಲ್ಲೇ ಆ ವ್ಯಕ್ತಿ ನಿನಗೆ ಪರಿಚಿತರೇ?’ ಎಂದು ಬಂದಿದ್ದ ಅಧಿಕಾರಿಯನ್ನು ಕೇಳಿದರು.

‘ಇಲ್ಲ! ನನಗೆ ಪರಿಚಿತರಲ್ಲ. ನಾನು ಬೇರೊಬ್ಬ ಅಧಿಕಾರಿಯಿಂದ ವಿಷಯ ಸಂಗ್ರಹಿಸಿದ್ದೇನೆ. ಅದನ್ನು ನಿಮಗೆ ಹೇಳಿದರೆ ಸುರಕ್ಷಿತವೆಂದು ಭಾವಿಸಿ ಬಂದಿದ್ದೇನೆ’ ಎಂದ.

‘ನಿಮಗೆ ಅವರು ಗೊತ್ತಿಲ್ಲ. ಇನ್ನೊಬ್ಬರ ಮಾತು ಕಟ್ಟಿಕೊಂಡು ನನ್ನಲ್ಲಿಗೆ ಬಂದಿರುವೆ. ಅದು ಸತ್ಯವೆಂದು ನಿನಗೆ ಖಾತರಿ ಇದೆಯೇ?’ ಎಂದು ಕಲಾಂಜೀಯವರು ಮತ್ತೇ ಬಂದಿದ್ದವರನ್ನು ಪ್ರಶ್ನಿಸಿದರು.

‘ನನಗೆ ಹೇಳಿದವರೂ ನಮ್ಮ ಜಾತಿಯವರು. ಬಹಳ ದೊಡ್ಡ ಅಧಿಕಾರಿಯವರು, ಅವರು ಸುಳ್ಳು ಹೇಳಲಾರನೆಂದು ನಂಬಿಕೆ ನನ್ನದು ಅದನ್ನು ನಿಮಗೆ ಹೇಳಿದರೆ ನಿಮ್ಮ ಪದವಿಗೆ ಒಳ್ಳೆಯದೆಂದು ಬಂದಿರುವೆ’ ಎಂದ.

‘ಅವರಿಗೂ ಇವರಿಗೂ ವೃತ್ತಿ ಮತ್ಸರವಿರಬೇಕು. ಜಾತಿ, ಮತ, ಕುಲ, ಧರ್‍ಮ, ವೈಷಮ್ಯವಿರಬೇಕು. ಇದರಿಂದ ನನಗೇನು ಧಕ್ಕೆಯಾಗದು. ನನಗೇ ನನ್ನದೇ ಆದ ಬಹಳಷ್ಟು ಕೆಲಸಗಳಿವೆ. ಇನ್ನೊಬ್ಬರ ಗೊಡವೆ, ವೈಯಕ್ತಿಕ ವಿವರಗಳು, ನನಗೆ ಬೇಕಿಲ್ಲ! ಇದರಿಂದ ದೇಶಕ್ಕೆ, ವಿಶ್ವಕ್ಕೆ ಏನಾದರೂ ಪ್ರಯೋಜನವಿದೆಯೇ? ಹೇಳಿ ನಾನು ಕಾಲವನ್ನು ಮೀಸಲಿಡುತ್ತೇನೆ…’ ಎಂದು ಕಲಾಂಜೀಯವರು ಬಂದಿದ್ದ ಅಧಿಕಾರಿಗೆ ನೇರವಾಗಿ ಅಂದರು.

ಬಂದಿದ್ದ ಅಧಿಕಾರಿಯ ಟೈ-ಕೋಟು-ಕ್ರಾಪು ಎತ್ತತ್ತಲೋ ಹಾರಿತು! ಅದನ್ನು ಸರಿ ಮಾಡಿಕೊಳ್ಳುತ್ತಾ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿತ್ತವರು ಇನ್ನೆಂದೂ ಅವರ ಎದುರಿಗೆ ಓಡಾಡಲಿಲ್ಲ.

ಪ್ರತಿ ಮನೆ, ಸಂಘ, ಸಂಸ್ಥೆ, ನಿಗಮ, ಇಲಾಖೆ, ಗುಂಪು… ಕಚೇರಿಯಲ್ಲಿ ಇಂಥವರು ಇರುವವರಲ್ಲವೇ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...