Home / ಲೇಖನ / ಇತರೆ / ಕಲಾಂ ಹೀಗಿದ್ದರು

ಕಲಾಂ ಹೀಗಿದ್ದರು

ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಜೀವಂತವಿದ್ದಾಗಲೇ ದಂತ ಕತೆಯಾದವರು.

ಇವರು ೨೦೦೨ರಲ್ಲಿ ಭವ್ಯ ಭಾರತದ ೧೧ನೆಯ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ದಿನಾಂಕ ೧೪-೦೮-೨೦೦೨ರಲ್ಲಿ ಬೆಳ್ಳಂಬೆಳಗ್ಗೆ ಬಹುದೊಡ್ಡ ಅಧಿಕಾರಿ ಬಹುಶಃ ಸ್ವಜಾತಿಯೆಂಬ ಸಲುಗೆಯಿಂದಲೋ ಏನೋ ಇವರನ್ನು ಕಾಣಲು ಬಂದಿದ್ದರು.

“ಸಾರ್ ನಿಮ್ಮ ಕಚೇರಿಗೆ ಮೇಲಿಂದ ಮೇಲೆ ಬರುತ್ತಿರುವ ಆ ಅಧಿಕಾರಿ ಬಗೆಗೆ ನಿಮಗೆ ತಿಳಿಯದೆಂದು ಅನಿಸುವುದು! ಆತ…?’ ಎಂದು ಇನ್ನು ಏನೇನೋ ಹೇಳಲು ಉತ್ಸಾಹಕನಾಗಿದ್ದನು.

‘ಕಲಾಂಜೀಯವರು ಮಧ್ಯದಲ್ಲೇ ಆ ವ್ಯಕ್ತಿ ನಿನಗೆ ಪರಿಚಿತರೇ?’ ಎಂದು ಬಂದಿದ್ದ ಅಧಿಕಾರಿಯನ್ನು ಕೇಳಿದರು.

‘ಇಲ್ಲ! ನನಗೆ ಪರಿಚಿತರಲ್ಲ. ನಾನು ಬೇರೊಬ್ಬ ಅಧಿಕಾರಿಯಿಂದ ವಿಷಯ ಸಂಗ್ರಹಿಸಿದ್ದೇನೆ. ಅದನ್ನು ನಿಮಗೆ ಹೇಳಿದರೆ ಸುರಕ್ಷಿತವೆಂದು ಭಾವಿಸಿ ಬಂದಿದ್ದೇನೆ’ ಎಂದ.

‘ನಿಮಗೆ ಅವರು ಗೊತ್ತಿಲ್ಲ. ಇನ್ನೊಬ್ಬರ ಮಾತು ಕಟ್ಟಿಕೊಂಡು ನನ್ನಲ್ಲಿಗೆ ಬಂದಿರುವೆ. ಅದು ಸತ್ಯವೆಂದು ನಿನಗೆ ಖಾತರಿ ಇದೆಯೇ?’ ಎಂದು ಕಲಾಂಜೀಯವರು ಮತ್ತೇ ಬಂದಿದ್ದವರನ್ನು ಪ್ರಶ್ನಿಸಿದರು.

‘ನನಗೆ ಹೇಳಿದವರೂ ನಮ್ಮ ಜಾತಿಯವರು. ಬಹಳ ದೊಡ್ಡ ಅಧಿಕಾರಿಯವರು, ಅವರು ಸುಳ್ಳು ಹೇಳಲಾರನೆಂದು ನಂಬಿಕೆ ನನ್ನದು ಅದನ್ನು ನಿಮಗೆ ಹೇಳಿದರೆ ನಿಮ್ಮ ಪದವಿಗೆ ಒಳ್ಳೆಯದೆಂದು ಬಂದಿರುವೆ’ ಎಂದ.

‘ಅವರಿಗೂ ಇವರಿಗೂ ವೃತ್ತಿ ಮತ್ಸರವಿರಬೇಕು. ಜಾತಿ, ಮತ, ಕುಲ, ಧರ್‍ಮ, ವೈಷಮ್ಯವಿರಬೇಕು. ಇದರಿಂದ ನನಗೇನು ಧಕ್ಕೆಯಾಗದು. ನನಗೇ ನನ್ನದೇ ಆದ ಬಹಳಷ್ಟು ಕೆಲಸಗಳಿವೆ. ಇನ್ನೊಬ್ಬರ ಗೊಡವೆ, ವೈಯಕ್ತಿಕ ವಿವರಗಳು, ನನಗೆ ಬೇಕಿಲ್ಲ! ಇದರಿಂದ ದೇಶಕ್ಕೆ, ವಿಶ್ವಕ್ಕೆ ಏನಾದರೂ ಪ್ರಯೋಜನವಿದೆಯೇ? ಹೇಳಿ ನಾನು ಕಾಲವನ್ನು ಮೀಸಲಿಡುತ್ತೇನೆ…’ ಎಂದು ಕಲಾಂಜೀಯವರು ಬಂದಿದ್ದ ಅಧಿಕಾರಿಗೆ ನೇರವಾಗಿ ಅಂದರು.

ಬಂದಿದ್ದ ಅಧಿಕಾರಿಯ ಟೈ-ಕೋಟು-ಕ್ರಾಪು ಎತ್ತತ್ತಲೋ ಹಾರಿತು! ಅದನ್ನು ಸರಿ ಮಾಡಿಕೊಳ್ಳುತ್ತಾ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿತ್ತವರು ಇನ್ನೆಂದೂ ಅವರ ಎದುರಿಗೆ ಓಡಾಡಲಿಲ್ಲ.

ಪ್ರತಿ ಮನೆ, ಸಂಘ, ಸಂಸ್ಥೆ, ನಿಗಮ, ಇಲಾಖೆ, ಗುಂಪು… ಕಚೇರಿಯಲ್ಲಿ ಇಂಥವರು ಇರುವವರಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...