Home / ಕವನ / ಕವಿತೆ / ಉಡಿತುಂಬುವ ಹಾಡು

ಉಡಿತುಂಬುವ ಹಾಡು

ಬಾಳಿಽಯ ಬನ ಚೆಲುವಽ|
ಬಾಳಿಽಯ ಗೊನೊ ಚೆಲುವಽ|
ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ||
ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ
ಬಾಗಲಽ ಮಾಟ ಕರಚೆಲುವ| ಸೋ… ||೧||

ನಿಂಬೀಯ ಬನ ಚೆಲುವಾಽ|
ನಿಂಬೀಯ ಗೊನಿ ಚೆಲುವಾಽ|
ನಿಂಬ್ಯಾಗ ಇರುವ ಗಿಣಿಽ ಚೆಲುವ| ಸೋ…
ನಿಂಬಿಯಾಗಽ ಇರುವ ಗಿಣಿ ಚೆಲುವ ತಮ್ಮನ
ಕಂಬಽದ ಮಾಟ ಕರಚೆಲುವ| ಸೋ ||೨||

ನಿಂಬೀಯ ಬನದಾಗ ಚಂದರನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅಪ್ಪದವರಲ್ಲ ಪರಮಂದೆ| ಸೋ… ||೩||

ಬಾಳೀಯ ಬನದಾಗ ಭಾವನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅವ್ವದವರಲ್ಲ ಪರಮಂದೆ| ಸೋ ||೪||

ಅತ್ತಿಕಾಯೀ ತಂದು ಅತ್ತೆ ಉಡಿಯಲಿ ತುಂಬಿ|
ಅತ್ತ್ಯೆದ್ದು ಹರಕಿ ಕುಡತಾಳಽ| ಸೋ…
ಅತ್ತೆಽಯೆದ್ದು ಹರಕಿ ಕುಡತಾಳ ತಂಗೆವಗ
ಹತ್ತು ಮಕ್ಕಽಳ ಹಡೆಯೆಂದು| ಸೋ ||೫||

ಮಾವಿನ ಕಾಯಿ ತಂದು ಮಾವ ಉಡಿಯಲಿ ತುಂಬಿ|
ಮಾಯಽದ ಮಕ್ಕಳ ಹಡೆಯೆಂದು| ಸೋ…
ಮಾಯಽದ ಮಕ್ಕಳ ಹಡೆಯೆಂದು ತಂಗೆವಗ|
ಮಾವ ಬಂದ್ಹರಕಿ ಕೊಡೆತಾನ| ಸೋ ||೬||

ಬಾಳಿಕಾಯೀ ತಂದು ಭಾವ ಉಡಿಯಲಿ ತುಂಬಿ|
ಭಾವ ಎದ್ದು ಹೆರಕಿ ಕೊಡೆತಾನ| ಸೋ…
ಭಾವ ಎದ್ದು ಹರಕಿ ಕೊಡೆತಾನ ತಂಗೆವ್ವಾ|
ಭಾಳ ಮಕ್ಕಽಳ ಹಡೆಯವ್ವಾ| ಸೋ ||೭||

ಅತ್ತಿಂದ ಬಂದಾವ ಮುತ್ತಿನೆರಡಾರೂತಿ|
ಉಪ್ಪರಗಿ ಗಗನ ತುಳುಕೂತ। ಸೋ…
ಉಪ್ಪುವರಗಿಽ ಗಗನ ತುಳುಕೂತ ತಂಗೆವ್ವನ|
ಆತ್ತೆಯಾರೂತಿ ಬೆಳಗ್ಯಾಳ| ಸೋ ||೮||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...