Home / ಕವನ / ಕವಿತೆ / ದ್ರೌಪದಿಯ ಹಾಡು

ದ್ರೌಪದಿಯ ಹಾಡು

ಕರಿಯಪೂರ ನಗರದಲ್ಲಿ |
ಕಽವರವರು ಪಾಂಡವ್ರವರು |
ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧||

ಪರಮಪಾಪಿ ಶಕುನಿ ತಾನು|
ಫಾಶಾದೊಳಗ ಫಕೀರನಾಗಿ|
ಧರ್ಮರಾಜ ಧರುಣಿ ದೌಽಪತಿನ ಸೋತರ ||೨||

ಸೋತನಂತ ದುರ್ಯೋಧನ|
ಸಂತೋಷದಿಂದ ಕೇಳಿದಾನ|
ದೂತನ್ಹಚ್ಚಿದಾರು ಮಾರು ಬದುಕ ತರಸ್ಯಾರ ||೩||

ನಿಂಬೆಣ್ಹಂತ ಕೊಂಬೆಣ್ಹಂತ|
ಆನಿಹಂತ ನಿನ್ನ ನಡಗಿ|
ಜಾಣಮುತ್ತಿನಂಥ ರಂಬಿ ಬಾರ ದ್ರೌಪತಿ ||೪||

ಹೆಚ್ಚು ಕುಂದ್ಯಾನಾಡದಿಽರು|
ಹೆರವರ್ಹೆಣ್ಣಾ ನೋಡದಿಽರು|
ಹಲ್ಲ ಕಿತ್ತ್ಯಾರೈವರವರು ಬ್ಯಾಡೋ ದುಸುವಾಸಾ ||೫||

ಹೆಣ್ಣ ಬಾಲಿ ಇಽವಳಿಗೆ|
ಹೆಮ್ಮಿಯಾದ ಮಾತನ್ಯಾಕ|
ಕಣ್ಣ ಚಿವುಟಿ ದುರ್ಯೋಧನ ಸೆದರಿಗೊಪ್ಪ್ಯಾನ ||೬||

ಹೀನ ದುಸುವಾಸ ನಿನ್ನ|
ರಗತಿನೊಳೆಗೆ ನಿಲಿಯ ಹಿಂಡಿ|
ಕರಳ ತೆಗೆದು ಮಾಲಿಮಾಡಿ ಧರಿಸೇನಂದಳ ||೭||

ಮುದ್ದೆ ಮುಖದೆ ಮಾನವರಿಗಿ|
ಮುಂದೆ ಮಾಡಿ ತಂಜದೆವೆಂದ|
ಇಂದ ನಿಮಗ ಬಿನ್ನವೆಂದು ಕೈಯ ಮುಗಿದರ ||೮||

ನೀರಬೊಬ್ಬಿ ಇಕ್ಕತಾರ|
ಲಡ್ಡನಾದರು ಕಡವುತಾರ|
ಆಗ ದ್ರೌಽಪತಿಯ ಸೀರಿ ನೆಳೆಯುತಿದರ ||೯||

ಆಗ ಮಾಽಡಿಽದ ಪಾಪ|
ಈಗ ಬಂದು ಒದಗಿತೇನ|
ಕೃಷ್ಣದೇವನ ಪಾದಕ್ಹೋಗಿ ಎರಗಲೇೆನ ||೧೦||

ಹರಿಯ ಹರಿಯ ಅನ್ನುತಾಳ|
ಹರಿಗೆ ಮೊರೆಯನಿಡುವುತಾಳ|
ಧರಿಯ ಮ್ಯಾಲ ಬಿದ್ದು ದ್ರೌಪತ್ಹ್ಯೊರಳತಿದ್ದಳ ||೧೧||

ಆಽಕಾಶ ಬಣ್ಣ ಸೀರಿ|
ಲೋಕದಾಗ ಇಲ್ಲ ಸೀರಿ|
ಸಾಕ್ಷ ಕೊಽಟ್ವಂತ ಸೀರಿ ಸಂವಿಯಲ್ದ್ಹೋದವ ||೧೨||

ಹಾದಿ ಇಂಜಾನ ಕಾಯೊ|
ಗಿಡದ ಮಂಜಾನ ಕಾಯೊ|
ಹಿಂಡ ದೈತ್ಯರುಳುವಂಥ ದೇವ ನೀ ಕುಯೊ ||೧೩||
*****

ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ಅವಳ ಸೀರೆಯನ್ನು ಸೆಳೆದ ಕತೆಯಿದು. ಇದರಲ್ಲಿ ಎಂಟನೆಯ ನುಡಿಯೊಂದನ್ನು ಬಿಟ್ಟರೆ ಉಳಿದೆಲ್ಲ ಹಾಡಿನ ಭಾವವು ಸಹಜವಾಗಿ ಲಕ್ಷ್ಯಕ್ಕೆ ಬರುವಂತಿದೆ. ಆದರೆ ಎಂಟನೆಯ ನುಡಿಯಲ್ಲಿ ಭೀಷ್ಮಾದಿಗಳನ್ನು ಕುರಿತು ದ್ರೌಪದಿಯು ಆಡಿದ ಮಾತು ಹೇಳಲ್ಪಟ್ಟಿದೆಯೋ ಎನೋ. ಹಾಗೆ ತಿಳಿದುಕೊಂಡರೆ ಅರ್ಥವು ಸುಲಭವಾಗುವುದು.

ಛಂದಸ್ಸು :- ಭೋಗಷಟ್ಪದಿ.

ಶಬ್ದ ಪ್ರಯೋಗಗಳು :- ಕರಿಯಪೂರ=ಹಸ್ತಿನಾವತಿ. ಫಾಶ=ಪಗಡಿ ಆಟಡೊಳಗಿನ ಗಾಳುಗಳು. ಫಕೀರ=ಕಾಡುವ ಸನ್ಯಾಸಿ. ದಾರು ಮಾರು ಬದುಕು=ಸ್ಥಾವರಜಂಗಮ ಆಸ್ತಿ. ಕುಂದ್ಯಾನಾಡದಿರು=ಕುಂದಿಡಬೇಡ. ಸದರು=ಮುಖ್ಯ ಸ್ಥಳ. ರಗತ=ರಕ್ತ. ಲಡ್ಡ=ಚಬಕ. ಇಂಜಾನ=ಇಂಧನ. ಮಂಜಾನ=ಮಂಜು(ಮಬ್ಬು).

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...