Home / ಲೇಖನ / ಇತರೆ / ಸಾಧಕರು

ಸಾಧಕರು

ವಿಶ್ವ ಮಟ್ಟದ ಕೊರಿಯಾದ ಇಂಚಿಯಾನ್‌ಗಳಲ್ಲಿ ಜರುಗಿದ ೨೦೧೪ ರ ಏಷ್ಯನ್ ಗೇಮ್ಸ್‌ನ ರಿಲೆಯಲ್ಲಿ ಬಂಗಾರದ ಸಾಧನೆ ಮಾಡಿರುವ ರಾಜ್ಯದ ಹೆಮ್ಮೆಯ ಓಟಗಾರ್‍ತಿ ಚಿನ್ನದ ಜಿಂಕೆಯೆಂದೇ ಖ್ಯಾತರಾಗಿರುವ ಎಂ.ಆರ್‌. ಪೂವಮ್ಮ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ೨೦೧೪ ರ ಏಷ್ಯನ್ ಗೇಮ್ಸ್‌ನಲ್ಲಿ ಮಿಂಚಿದ ಮಹಾಸಾಧಕಿ ಚಿನ್ನದ ರಾಣಿ ಎಂ.ಆರ್‌. ಪೂವಮ್ಮ ೪೦೦ ಮೀ ಓಟದಲ್ಲಿ ಕಂಚು ಹಾಗೂ ೪೦೦ x ೪ ಮೀ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ ವಿಖ್ಯಾತಿ ಇವರದು!

ಎಂ.ಆರ್. ಪೂವಮ್ಮ ೨೦೧೩ ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿಯೂ ೪೦೦ ಮೀ ಓಟದಲ್ಲಿ ಬೆಳ್ಳಿ ಹಾಗೂ ರಿಲೆಯಲ್ಲಿ ಬಂಗಾರ ಪದಕವನ್ನು ತಮ್ಮ ಸ್ವಂತ ಮಾಡಿಕೊಂಡಿರುವರು.

ಇನ್ನು ತಮ್ಮ ಭುಜದ ಮೇಲೆ ಗಾಯದ ಸಮಸ್ಯೆಯ ಮಧ್ಯೆಯೂ ಏಷ್ಯನ್ ಗೇಮ್ಸ್‌ನಲ್ಲಿ ಹುರುಪಲಿ ಸ್ಪರ್ಧಿಸಿದ್ದ ಪ್ಯಾರಾ ಈಜು ಪಟು ಭವ್ಯ ಭಾರತೀಯ ಎಂಬ ನವ ಇತಿಹಾಸ ಬರೆದ ಬೆಂಗಳೂರಿನ ಶರತ್‌ಗಾಯಕ್ವಾಡ್ ಅವರಿಗೂ ಕನ್ನಡ ನಾಡಿನ ಹೆಮ್ಮೆಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಶ್ರೀಯುತರು- ಈ ಗೇಮ್ಸ್‌ನಲ್ಲಿ ಆರು ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಈ ಹಿಂದೆ ಇದೇ ಗೇಮ್ಸ್‌ನಲ್ಲಿ ಅತ್ಲೀಟ್ ಚಿನ್ನದ ರಾಣಿ ಪಿ.ಟಿ. ಉಷಾ ಅವರು ಗೆದ್ದಿದ್ದ ಐದು ಪದಕಗಳ ದಾಖಲೆಯನ್ನೂ ಇವರು ಮುರಿದು, ಅತ್ಯಾಮೋಘ ಸಾಧನೆ ಮಾಡಿ ಮಹಾಸಾಧಕರ ಪಟ್ಟಿಗೆ ಸೇರ್ಪಡೆಯಾಗಿರುವರು.

ಮುದ್ದು ಪುಟಾಣಿಗಳೆ… ನಾನು ಇಂಜಿನಿಯರ್, ಡಾಕ್ಟರ್, ಐ‌ಎ‌ಎಸ್, ಐಪಿ‌ಎಸ್…. ಆಗುವನೆಂದು ಗುರಿ ಹೊಂದಬೇಡಿ! ನಾನು ಒಳ್ಳೆಯ ಕ್ರೀಡಾ ಪಟುವಾಗುವೆ. ದೇಶಕ್ಕೆ ಕೀರ್ತಿ ತರುವೆ. ವಿಶ್ವಮಟ್ಟದಲ್ಲಿ ಭವ್ಯ ಭಾರತದ ಕೀರ್ತಿಪಾತಕೆಯನ್ನು ಮುಗಿಲಿಗೇರಿಸುವೆ ಎಂಬ ಗುರಿನೂ ಹೊಂದಿರಿ. ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...