Home / ಲೇಖನ / ವಿಜ್ಞಾನ / ಸೊಳ್ಳೆಯ ಕತೆ

ಸೊಳ್ಳೆಯ ಕತೆ

ಸೊಳ್ಳೆ ಒಂದಾದರೂ ಅದರ ಅಡ್ಡ ಪರಿಣಾಮ ಹತ್ತಾರು. ಹೀಗಾದರೆ ಹೇಗೆಂದು ದೇಶ ವಿದೇಶದ ಜನ ತಲೆಗೆ ಕೈಹೊತ್ತು ಕುಳಿತು ಬಿಟ್ಟಿದ್ದಾರೆ.

ಸೊಳ್ಳೆಯಲ್ಲಿ ಹಲವು ಬಗೆ, ಕೆಲವು ವಿಷಕಾರಿ ಸೊಳ್ಳೆಗಳಿವೆಯೆಂದು ಸೊಳ್ಳೆ ಕಡಿತದಿಂದ ಚಿಕೂನ್ ಗುನ್ಯಾ ಡೆಂಗೆಯಂತ ತೀವ್ರತರದ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಕಾಣಿಸಿಕೊಳ್ಳವುದರಿಂದ ಅದನ್ನು ಕೇವಲ ನಿರ್ಲಕ್ಷಿಸುವಂತಿಲ್ಲ ಎಂದು ಲಂಡನ್ ವೈದ್ಯರು ಈಗಾಗಲೇ ದೃಢಪಡಿಸಿರುವರು.

ಸೊಳ್ಳೆ ಕಡಿತದಿಂದ ಕಣ್ಣಿನ ದೃಷ್ಟಿಯೂ ಕಳೆದು ಕೊಳ್ಳುವ ಅಪಾಯವಿದೆಯೊಂದು ಲಂಡನ್‌ಲ್ಲೊಂದು ಇಂತಹ ಪ್ರಕರಣವೊಂದು ಈಗಾಗಲೇ ವರದಿಯಾಗಿ ಇಡೀ ವಿಶ್ವವನ್ನೇ ಗಢಗಢ ನಡುಗಿಸಿರುವುದು.

ಹೌದು! ೬೯ ವರ್ಷದ ಲಂಡನ್ ಮಹಿಳೆಯೊಬ್ಬರು ರಜೆಯ ಪ್ರವಾಸದಲ್ಲಿ ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಳು. ಅಲ್ಲಿ ಸೊಳ್ಳೆ ಕಡಿತದಿಂದ ಚಿಕೂನ್‌ಗುನ್ಯಾಗೆ ತುತ್ತಾಗಿ ಕಣ್ಣನ್ನೇ ಕಳೆದುಕೊಂಡಿದ್ದಾಳೆ!

೨೦೧೪ರಲ್ಲಿ ಕೆರಿಬಿಯನ್ ದ್ವೀಪ ಗ್ರೆನಡಾಗೆ ತೆರಳಿದ್ದ ಮಹಿಳೆಗೆ ಸೊಳ್ಳೆ ಕಡಿದಿವೆ. ಬಳಿಕ ಆಕೆಗೆ ಜ್ವರ, ಮಂಡಿ, ಮಣೆಕಟ್ಟುಗಳ ನೋವು, ಸುಸ್ತು ಕಾಡಲಾರಂಭಿಸಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಬಲಗಣ್ಣಿನಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ.

ಆಗಸ್ಟ್ ೨೦೧೫ ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ನಂತರ ಅವರ ಕಣ್ಣಿಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು! ವೈದ್ಯರ ಬಳಿಗೆ ಹೋದಾಗ ಇದು ಚಿಕೂನ್ ಗೂನ್ಯಾಗೆ ಜ್ವರದಿಂದ ಈ ದೋಷ ಕಾಣಿಸಿಕೊಂಡಿದೆಯೆಂದು ದೃಢಪಟ್ಟಿದೆ. ಚಿಕೂನ್‌ಗುನ್ಯಾಗ್ ತುತ್ತಾದವರು ಜೀವನ ಪರ್ಯಂತ ಕೆಲ ಸಮಸ್ಯೆಗಳಿಗೆ ಖಂಡಿತ ತುತ್ತಾಗುವುದುಂಟು. ಇದರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆಯೆಂದು ವೈದ್ಯರು ದೃಢಪಡಿಸಿರುವರು.

ಅಬ್ಬಾ! ಸೊಳ್ಳೆಗಳೆ… ಇನ್ನು ಬರುಬರುತ್ತಾ ಏನೆಲ್ಲಾ ಅನಾಹುತ ಮಾಡಬಲ್ಲವೆಂಬುದನ್ನು ಈಗಲೇ ಊಹಿಸುವುದು ಕಷ್ಟ ಸಾಧ್ಯವಾದರೂ ಸೊಳ್ಳೆಗಳಿಂದ ಬಲು ಎಚ್ಚರಿಕೆ ವಹಿಸುವುದೂ ಸಣ್ಣಪುಟ್ಟ ಮಕ್ಕಳನ್ನು ರಕ್ಷಿಸುವುದೂ ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದು ಅಲ್ಲವೇ??
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...