ಎಲ್ಲಕ್ಕೂ ತಂದೆಯೇ ಕಾರಣ

ಎಲ್ಲಕ್ಕೂ ತಂದೆಯೇ ಕಾರಣ

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ಹೆಣ್ಣು ಸಂತಾನವು ಒಂದೇ ಇರಲೆಂಬ ಹಂಬಲ ನಮ್ಮ ಮೂರ್ಖ ಜನಕ್ಕಿದೆ. ಹೆಣ್ಣು ಹೆಚ್ಚಾದರೆ ಒಂದು ಗಂಡು ಮಗುವನ್ನು ಹೆತ್ತುಕೋಡದ ಗಯ್ಯಾಳಿ, ಎಂದು ಹೆಣ್ಣಿಗೆ ಶಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಇಂದು ಗೌರವ ಪ್ರತಿಷ್ಟೇ ವಂಶದ ವಾಹಿನಿಗೆ ಹೆಣ್ಣೇ ಬಹುತೇಕ ಕಡೆ ಸಾಬೀತಾಗುತ್ತಿದ್ದಾಳೆ ಮತ್ತು ತಂದೆ ತಾಯಿಯರನ್ನು ಸಲಹುತ್ತಾಳೆ, ಸಂತೈಸುತ್ತಾಳೆ. ಗಂಡುಮಕ್ಕಳಲ್ಲಿ ಬಹುತೇಕ ಜನ ಪೋಲಿ ಪುಂಡರಾಗಿ ಹಿಂಸೆಯಲ್ಲಿ ತೊಡಗಿ ಮರ್ಯಾದೆಯನ್ನು ಹರಾಜು ಹಾಕುವುದು ನಮ್ಮ ಜನಕ್ಕೆ ಕಾಣುವುದೇ ಇಲ್ಲ. ಇದೇನೇ ಇರಲಿ, ಇಲ್ಲಿ ಇದು ಮುಖ್ಯ ಪ್ರಶ್ನೆ ಅಲ್ಲವೇ ಅಲ್ಲ. ಈಗ ವೈಜ್ಞಾನಿಕವಾಗಿ ಚಿಂತಿಸೋಣ. ಯಾವುದೇ ಮಗುವಿನಲಿಂಗ ನಿರ್ಧಾರವಾಗುವುದು ತಂದೆಯಿಂದ ಮಾತ್ರವೆಂದು ವಿಜ್ಞಾನಿಗಳು ಹೇಳುತ್ತಾರೆ. ತಂದೆಯಾದವನು X ಕ್ರೋಮೊಜೋಮ್, ನೀಡಿದರೆ ತಾಯಿಯ x ಜತೆಗೂಡಿ XX ಆಗಿ ಹೆಣ್ಣಾಗುತ್ತದೆ. y ಕ್ರೋಮೋಜೋಮ್ ನೀಡಿದರೆ ತಾಯಿಯ x ಕ್ರೋಮೋಜೋಮ್ ಜೊತೆ ಸೇರಿ xy ಗಂಡಾಗುತ್ತದೆ. ಆದ್ದರಿಂದ ಗಂಡಿಗೆ ತಂದೆ ನೀಡುವ ಕ್ರೋಮೋಜೋಮ್ ಹೆಣ್ಣು ಅಥವಾ ಗಂಡನ್ನು ರೂಪಿಸುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಹೆಂಡತಿಯಾದವಳು ಹೆಣ್ಣು ಹೆತ್ತರೆ ಗಂಡುಮಗುವಿಗಾಗಿ ಹಂಬಲಿಸಿ ಮತ್ತೆ ಮತ್ತೇ ಗರ್ಭಿಣಿಯಾಗುತ್ತಾಳೆ. ಇದೇ ರೀತಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವಿಲ್ಲದೇ ಗರ್ಭೀಣಿಯಾದವಳು ದೈಹಿಕವಾಗಿ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾಳೆ.

ತಿನ್ನುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರವನ್ನು ಮನೆಯ ಯಜಮಾನನಿಗೆ ಅಂದರೆ ಗಂಡನಿಗೆ ಸಲ್ಲುವುದರಿಂದ ತಾಯಿ ತಿನ್ನುವ ಆಹಾರ ಪೌಷ್ಟಿಕವಾಗಿರುವುದಿಲ್ಲ. ಹೀಗೆ ದಿನಗಳೆದಂತೆ ಕೆಲವೊಮ್ಮೆ ಹೆರುವ ಮಗು ಅಪೌಷ್ಠಿಕತೆಯಿಂದ ಇದು ಸರಿಯಾದ ರೀತಿಯಲಿ ಬೆಳವಣಿಗೆಯಾಗದೇ ಹುಟ್ಟುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಯಾವುದೇ ಹೆಣ್ಣು ಅಥವಾ ಗಂಡು ಮಗುವಾಗಬೇಕಾದರೆ ಗಂಡಿನ x-ಅಥವಾ y ಕ್ರೋಮೊಜೋಮ್‌ಗಳೇ ಕಾರಣವಾಗಿರುತ್ತವೆ ಎಂಬ ಸತ್ಯವನ್ನು ಹೆಣ್ಣಿಗೆ ತೆಗಳುವವರು ಅರಿತುಕೊಳ್ಳಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರದ ಹಾಡು
Next post ಸಾಲುಗಳ ಬೊಂಬೆ ಕೇಳೆ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…