Home / ಲೇಖನ / ವಿಜ್ಞಾನ / ಎಲ್ಲಕ್ಕೂ ತಂದೆಯೇ ಕಾರಣ

ಎಲ್ಲಕ್ಕೂ ತಂದೆಯೇ ಕಾರಣ

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ಹೆಣ್ಣು ಸಂತಾನವು ಒಂದೇ ಇರಲೆಂಬ ಹಂಬಲ ನಮ್ಮ ಮೂರ್ಖ ಜನಕ್ಕಿದೆ. ಹೆಣ್ಣು ಹೆಚ್ಚಾದರೆ ಒಂದು ಗಂಡು ಮಗುವನ್ನು ಹೆತ್ತುಕೋಡದ ಗಯ್ಯಾಳಿ, ಎಂದು ಹೆಣ್ಣಿಗೆ ಶಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಇಂದು ಗೌರವ ಪ್ರತಿಷ್ಟೇ ವಂಶದ ವಾಹಿನಿಗೆ ಹೆಣ್ಣೇ ಬಹುತೇಕ ಕಡೆ ಸಾಬೀತಾಗುತ್ತಿದ್ದಾಳೆ ಮತ್ತು ತಂದೆ ತಾಯಿಯರನ್ನು ಸಲಹುತ್ತಾಳೆ, ಸಂತೈಸುತ್ತಾಳೆ. ಗಂಡುಮಕ್ಕಳಲ್ಲಿ ಬಹುತೇಕ ಜನ ಪೋಲಿ ಪುಂಡರಾಗಿ ಹಿಂಸೆಯಲ್ಲಿ ತೊಡಗಿ ಮರ್ಯಾದೆಯನ್ನು ಹರಾಜು ಹಾಕುವುದು ನಮ್ಮ ಜನಕ್ಕೆ ಕಾಣುವುದೇ ಇಲ್ಲ. ಇದೇನೇ ಇರಲಿ, ಇಲ್ಲಿ ಇದು ಮುಖ್ಯ ಪ್ರಶ್ನೆ ಅಲ್ಲವೇ ಅಲ್ಲ. ಈಗ ವೈಜ್ಞಾನಿಕವಾಗಿ ಚಿಂತಿಸೋಣ. ಯಾವುದೇ ಮಗುವಿನಲಿಂಗ ನಿರ್ಧಾರವಾಗುವುದು ತಂದೆಯಿಂದ ಮಾತ್ರವೆಂದು ವಿಜ್ಞಾನಿಗಳು ಹೇಳುತ್ತಾರೆ. ತಂದೆಯಾದವನು X ಕ್ರೋಮೊಜೋಮ್, ನೀಡಿದರೆ ತಾಯಿಯ x ಜತೆಗೂಡಿ XX ಆಗಿ ಹೆಣ್ಣಾಗುತ್ತದೆ. y ಕ್ರೋಮೋಜೋಮ್ ನೀಡಿದರೆ ತಾಯಿಯ x ಕ್ರೋಮೋಜೋಮ್ ಜೊತೆ ಸೇರಿ xy ಗಂಡಾಗುತ್ತದೆ. ಆದ್ದರಿಂದ ಗಂಡಿಗೆ ತಂದೆ ನೀಡುವ ಕ್ರೋಮೋಜೋಮ್ ಹೆಣ್ಣು ಅಥವಾ ಗಂಡನ್ನು ರೂಪಿಸುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಹೆಂಡತಿಯಾದವಳು ಹೆಣ್ಣು ಹೆತ್ತರೆ ಗಂಡುಮಗುವಿಗಾಗಿ ಹಂಬಲಿಸಿ ಮತ್ತೆ ಮತ್ತೇ ಗರ್ಭಿಣಿಯಾಗುತ್ತಾಳೆ. ಇದೇ ರೀತಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವಿಲ್ಲದೇ ಗರ್ಭೀಣಿಯಾದವಳು ದೈಹಿಕವಾಗಿ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾಳೆ.

ತಿನ್ನುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರವನ್ನು ಮನೆಯ ಯಜಮಾನನಿಗೆ ಅಂದರೆ ಗಂಡನಿಗೆ ಸಲ್ಲುವುದರಿಂದ ತಾಯಿ ತಿನ್ನುವ ಆಹಾರ ಪೌಷ್ಟಿಕವಾಗಿರುವುದಿಲ್ಲ. ಹೀಗೆ ದಿನಗಳೆದಂತೆ ಕೆಲವೊಮ್ಮೆ ಹೆರುವ ಮಗು ಅಪೌಷ್ಠಿಕತೆಯಿಂದ ಇದು ಸರಿಯಾದ ರೀತಿಯಲಿ ಬೆಳವಣಿಗೆಯಾಗದೇ ಹುಟ್ಟುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಯಾವುದೇ ಹೆಣ್ಣು ಅಥವಾ ಗಂಡು ಮಗುವಾಗಬೇಕಾದರೆ ಗಂಡಿನ x-ಅಥವಾ y ಕ್ರೋಮೊಜೋಮ್‌ಗಳೇ ಕಾರಣವಾಗಿರುತ್ತವೆ ಎಂಬ ಸತ್ಯವನ್ನು ಹೆಣ್ಣಿಗೆ ತೆಗಳುವವರು ಅರಿತುಕೊಳ್ಳಬೇಕಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...