Home / ಲೇಖನ / ಇತರೆ / ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ
ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ
ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ

[ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು]

ಅಕ್ಕಮಹಾದೇವಿಯ ವಚನ. ನಾನು ಯಾರು ಎಂದು ನನಗೇ ಗೊತ್ತಾಗುವ ಮೊದಲು ನೀನು ಎಲ್ಲಿದ್ದೆ? ಇದ್ದರೂ ಇದ್ದಿರಬಹುದು, ಬಂಗಾರದೊಳಗೆ ಅಡಗಿರುವ ಬಣ್ಣದ ಹಾಗೆ. ಹಾಗೆ ನನ್ನೊಡನೆ ಬೇರ್ಪಡಿಸಲಾಗದಂತೆ ಇದ್ದೂ ಕೂಡ ಯಾಕೆ ನನಗೆ ಮೈದೋರದೆ ಹೋದೆ? ನನ್ನೊಳಗಿದ್ದೂ ನನ್ನಿಂದ ಬೇರೆಯಾಗಿಯೇ, ಕೈಗೆ ಸಿಗದೆ, ಕಣ್ಣಿಗೆ ಕಾಣದೆ ಇರುವ ಭೇದವನ್ನು ಮಾತ್ರ ಕಂಡೆ ಅನ್ನುತ್ತಾಳೆ. ಇರುವ ಒಂದು ಎರಡಾಗಿ ಮತ್ತೆ ಒಂದೇ ಆಗಲಾರದ ಉಮ್ಮಳವನ್ನು ಈ ವಚನ ಹೇಳುತ್ತದೆ.

ಈ ವಚನದಲ್ಲಿ ಗಮನಕ್ಕೆ ತಕ್ಕ ಎರಡು ಸಂಗತಿಗಳಿವೆ: ಮೊದಲನೆಯದು `ನಾನು’ ಎಂಬ ಅರಿವು ಮೂಡುವವರೆಗೆ `ನೀನು’ ಎಂಬ ಮಾತಿಗೆ ಅರ್ಥವೇ ಇಲ್ಲ. ನಾನು ಮತ್ತು ನೀನು ಅನ್ನುವ ಭೇದ ಸೃಷ್ಟಿಯಾಗದಿದ್ದರೆ `ಅರ್ಥ’ ಅನ್ನುವ ಮಾತಿಗೂ ಅರ್ಥವಿಲ್ಲ. ನಿನ್ನಿಂದ ನಾನು ಬೇರೆ, ನನ್ನಿಂದ ನೀನು ಬೇರೆ ಅನ್ನುವುದರಿಂದಲೇ ಅಲ್ಲವೇ ನಮ್ಮ ನಮ್ಮ `ವ್ಯಕ್ತಿತ್ವ’ ಸ್ಪುಟಗೊಳ್ಳುವುದು! ಹಾಗೆ `ನಾನು’ ಬೇರೆ ಎಂಬ ಅರಿವು ಮೂಡುವವರೆಗೆ ನೀನು ಎಲ್ಲಿದ್ದೆ ಅನ್ನುವ ಪ್ರಶ್ನೆ ಅಕ್ಕನದು.

ಇನ್ನೊಂದು ಸಂಗತಿ ಎಂದರೆ ನೀನು ಹಾಗೆ ಬೇರೆ ಅಲ್ಲವೇ ಅಲ್ಲ, ಬಂಗಾರದಿಂದ ಬಣ್ಣವನ್ನು ಬೇರ್ಪಡಿಸಲು ಆಗದಂತೆ ನೀನು ನನ್ನೊಳಗಿನವನೇ ಅನ್ನುವ ಅರಿವು. ಆದರೆ ತೊಡಕೆಂದರೆ ನನ್ನೊಳಗೆ ಇದ್ದರೂ ಹಾಗೆ ಇರುವಾತ ಬೇರೆಯಾಗಿ ಕಣ್ಣಿಗೆ ಕಾಣಿಸಿಕೊಳ್ಳದಿದ್ದರೆ ಕೂಡುವ ಮಾತೆಲ್ಲಿಂದ ಬಂದಿತು! ಹಾಗೆ ನನ್ನೊಳಗೆ ಇರುವವನನ್ನು ಕಾಣುವುದಕ್ಕೆ `ನಾನು’ ಪ್ರತ್ಯೇಕಗೊಂಡು ಇಲ್ಲವಾಗಬೇಕೋ ಏನೋ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...