Home / ಕವನ / ಕವಿತೆ / ಅಲ್ಲಮನೆಂದರೆ

ಅಲ್ಲಮನೆಂದರೆ

ಮನಸ್ಸಿನಾಳಕೆ ಇಳಿದ ನಿಮ್ಮ ಘನ
ವೇದ್ಯ, ಪಾಪ ಪುಣ್ಯ ಸುಖ ದುಃಖ
ಎಲ್ಲವ ದಾಟಿ ಮರಣವನು ಜನನವಾಗಿಸಿ,
ಕಾಲ ಸರಿದ ಮಹಿಮೆ ಅವನ ನಿಜ ಒಲವು.

ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ
ನಿಜದ ನೆರಳ ಸವರಿ ಸುಖಕ್ಕೆ ಆರೋಚಕವಿಲ್ಲ.
ಶರಣನಿಗೆ ಭಯವಿಲ್ಲ ಬಂಧನವಿಲ್ಲ. ಮತ್ತೆ
ಪುರುಷಕ್ಕೆ ಬೆಲೆ ಬಂದಿತು ಅಂಗದ ಲಿಂಗದಿಂದ.

ಹಗಲಲಿ ಇರುಳಲಿ ಅಲ್ಲಿಂದ ಇಲ್ಲಿಂದ ಒಡಲ
ಕಾವಿಗೆ ತಳಮಳಿಸಿದ ಜೀವ ನೆತ್ತಿಯ ಒಳಗಿನ,
ಮೃತ್ಯು ನೆರಳು ಕಾಣದೇ ಸುಳ್ಳು ಬೆಳದಿಂಗಳ,
ಬಯಲ ನೋಡಿ, ಹಿಂದಣ ಹೆಜ್ಜೆಗಳು ನೆಲಗೊಳ್ಳದು.

ದಾರಿಗುಂಟ ನಡೆದವರಿಲ್ಲ ಎಲ್ಲ ಲೆಕ್ಕಾಚಾರಗಳ
ಬದಲಿಸಿ ಜಾರಿ ಬಿದ್ದವರು, ನೆಲವ ಬಿಟ್ಟು
ಆಕಾಶದಲಿ ನಿಂತು, ಮುಗಿಲೊಳು ಮಿಂಚದೇ,
ಸಾಮಾನ್ಯದ ಅರಿವಿನ ಘಮ ಕಳೆದು ಹೋಗುವುದು.

ಕಂಗಳ ಮುಂದಿನ ಕತ್ತಲೆ, ಮನದ ಮುಂದೆ
ಬಟ್ಟೆ, ಹೊರಗಡೆಯ ಶೃಂಗಾರ ಮರೆತು
ಒಳಗೆ ನೋಡಿದವರ ಬೆಳಕಿನ ಸೂರ್ಯನ ಕಿರಣಗಳು,
ಅಂಬರದೊಳಗೆ ಒಂದು ಹಸಿರು ಬಯಲು ಹುಟ್ಟುವುದು.
ಅಲ್ಲಮನೆಂದರೆ ಘನ ರೂಪದ ಚಿತ್ರ ಬರೆಯಬಹುದು.
ಆದರೆ ಪ್ರಾಣವ ಹಿಡಿಯಲು ಬಾರದು.

ಅಲ್ಲಮನೆಂದರೆ ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲದ ಬಯಲು.
ಅಂತಃ ಶೂನ್ಯಂ, ಬಹಿಃ ಶೂನ್ಯಂ ಶೂನ್ಯಂ ಸರ್ವ ಶೂನ್ಯಂ.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...