Home / ಲೇಖನ / ಇತರೆ / ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ಅಯ್ಯಾ
ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ
ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ

[ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,]

ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು ವಿಧಿಯೇ’ ಎಂದೇನಾದರೂ ಇದ್ದಿದ್ದರೆ ಅರ್ಥದ ತೊಡಕು ಏನೂ ಉಂಟಾಗುತ್ತಿರಲಿಲ್ಲ. ಅಥವಾ ನಾನು ನೋಡಿದ ಪುಸ್ತಕದಲ್ಲಿ ಅಚ್ಚಿನ ದೋಷವಿದೆಯೋ ಗೊತ್ತಿಲ್ಲ. ಆದರೆ ಹೀಗಿರುವುದರಿಂದ ಮಾತ್ರ ಈ ವಚನ ಹಲವು ಪ್ರಶ್ನೆಗಳನ್ನು ಎತ್ತುವಂತೆ ತೋರುತ್ತದೆ. ನನ್ನ ಮೊರೆಯನ್ನು ಕೇಳಬೇಕೆನಿಸಿದರೆ ಕೇಳು, ಇಲ್ಲದಿದ್ದರೆ ಬಿಡು; ನೀನು ನನ್ನನ್ನು ನೋಡಬೇಕೆನಿಸಿದರೆ ನೋಡು, ಇಲ್ಲದಿದ್ದರೆ ಬಿಡು. ಹೀಗಿರುವುದು ನಿನ್ನ ವಿಧಿಯೋ? ನೀನು ನನ್ನ ಒಲಿಯದಿದ್ದರೆ ನಾನು ನಿನ್ನನ್ನು ಒಲಿಸುವ ಪರಿ ಹೇಗೆ ಎಂದು ಅಕ್ಕ ಕೇಳುತ್ತಾಳೆ.

ದೇವರು ನಿರ್ಗುಣ ಅನ್ನುತ್ತಾರಲ್ಲವೆ, ಹಾಗಿರಬೇಕಾದದ್ದು ಅವನ ಹಣೆಯಬರಹ. ದೇವರು ಯಾರನ್ನೂ ದ್ವೇಷಿಸಲೂ ಆರ, ಪ್ರೀತಿಸಲೂ ಆರ. ಹೀಗಿರುವುದು ಅವನ ವಿಧಿಯೇ ಆದರೆ ತಾನು ದೇವರನ್ನು ಎಷ್ಟು ಪ್ರೀತಿಸಿದರೆ ಏನು ಬಂದ ಹಾಗಾಯಿತು? ಅವನಲ್ಲಿ ನನ್ನ ಬಗ್ಗೆ ಪ್ರೀತಿ ಹುಟ್ಟದಿದ್ದರೆ ಏನು ತಾನೇ ಮಾಡಬಲ್ಲೆ ಎಂಬ ದಿಕ್ಕುಗಾಣದ ಕಳವಳ ಈ ವಚನದಲ್ಲಿರುವಂತಿದೆ.

ಇದೇ ಸ್ವರೂಪದ ಇನ್ನೊಂದು ದೀರ್ಘವಾದ ವಚನವೂ ಇದೆ. ಅದರಲ್ಲಿ ನೀನು ಏನು ಮಾಡಿದರೂ ನಾನು ಮಾತ್ರ ನಿನ್ನನ್ನು ಪ್ರೀತಿಸದೆ ಇರಲಾರೆ ಅನ್ನುವ ನಿಲುವು ಕಾಣುತ್ತದೆ. ಮನೋಭಾವಗಳ ಸೂಕ್ಷ್ಮವನ್ನು ಅಕ್ಕನ ಹಾಗೆ ಮಾತಿನಲ್ಲಿ ಹಿಡಿದಿಟ್ಟವರು ಕಡಮೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...