Home / ಕವನ / ಕವಿತೆ / ದಿಂಬು

ದಿಂಬು

ನಿದ್ದೆ ಬರುವುದುಂಟೆ ದಿಂಬಿಲ್ಲದೇ
ಮಲಗುವುದಕ್ಕಂತೂ ಇರಲೇ ಬೇಕು ದಿಂಬು
ತಲೆಗೆ ಆರಾಮು ಮನಕೆ ಹಿತ
ಹೆಂಡತಿ ಹಾಕಿದ ಹೂವೊಂದಿದ್ದರೆ
ಗಮ್ಮತ್ತೆ ಬೇರೆ
ಸುಖ ನಿದ್ರೆಯಲಿ
ಕನಸಿನ ಮೇಲೆ ಕನಸುಗಳು

ಶಯನೋತ್ಸವಕೆ ಬೇಕು ಮೋಹಕ ದಿಂಬು
ಅಂಚಿನಲಿ ನಯನ ಮನೋಹರ ಕುಚ್ಚುಗಳು
ಬಣ್ಣ ಬಣ್ಣದಾ ಚಿತ್ತಾರದ ಚಿತ್ತಾಕರ್ಷಕ ದಿಂಬು
ನೂರೆಂಟು ಕನಸುಗಳ ಹೊತ್ತು
ಮದುವೆಯಲಿ
ಬರುವುದು ಗಾದಿ ಜೊತೆಯಲಿ
ಮೆತ್ತನೆಯ ದಿಂಬು

ಎಲ್ಲೆಲ್ಲೂ ದಿಂಬೇ ದಿಂಬು
ಮದುವೆಯಾಗದ
ಕಾಲೇಜು ಕನ್ಯಾಮಣಿಗಳ
ರೂಮಿನಲು ಉಂಟುಂಟು ದಿಂಬು

ಒರಗಲು ಬಗೆ ಬಗೆ ದಿಂಬುಗಳು
ಗುಂಡನೆಯ ಜಾಮೂನಿನಾಕಾರದ
ಅರಳೆ ತುಂಬಿದ ಶ್ವೇತವಸ್ತ್ರದ
ರಾಜಕೀಯ ವೇದಿಕೆ ಏರಿದ
ಸಿಂಹಾಸನದಲಿ
ಅಕ್ಕ ಪಕ್ಕ ಉಂಟು ದಿಂಬು
ಗಾಳಿ ತುಂಬಿದ ರಬ್ಬರ್ ದಿಂಬು

ಬಸ್ಸು ಕಾರುಗಳಲಿ ಸೀಟಿಗೆ ದಿಂಬು
ಜಾತಿ ಧರ್‍ಮ ಬೇಧ ಭಾವವಿಲ್ಲದೇ
ಶುಭ್ರ ಮನಸಿನಲಿ
ಮಾಡುವುದು ವೆಲ್ಕಮ್ಮು

ಮಾನವನ ಹೊರತಾಗಿ
ಅವ ಪ್ರಾಣಿ ದಿಂಬಿಟ್ಟು ಮಲಗಿದ್ದುಂಟು?
ದಿಂಬು ರಹಿತ ನಿದ್ದೆ
ಅದೇ ಅದರ ಆರೋಗ್ಯದಾಗುಟ್ಟು
ದಿಂಬು ರಹಿತ ನಿದ್ದೆ ಮಾಡೆಂದು
ಮಾಡುವನು ಸಲಹೆ ನರತಜ್ಞ
ಇಲ್ಲದಿದ್ದರೆ ಬರುವುದುಂಟು
ಕುತ್ತಿಗೆಗೆ ಬೆಲ್ಟು

ವೃದ್ಧರಿಗೆ ಮಕ್ಕಳಿಗೆ ನೀಡುವುದು
ನಿಸ್ಪೃಹ ಸೇವೆ
ಇದರ ಪರೋಪಕಾರವ ಮರೆಯುವವರಾರು?
ಸೇವೆ ಮುಗಿದ ಬಳಿಕ
ಬೇಡ ಇದರ ಪಾಡು
ಬಗಿದ ಹಿರಣ್ಯಾಕ್ಷನ ಹೊಟ್ಟೆಯಂತೆ
ರೂಪತಾಳಿ ಸೇರಲು ತಿಪ್ಪೆ
ಏರುವುದು ಮುನಿಸಿಪ್ಯಾಲಿಟಿ ಲಾರಿ
ಸಿಗುವುದಾಗ ಮೋಕ್ಷ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...