Home / ಲೇಖನ / ವಿಜ್ಞಾನ / ಸೊಳ್ಳೆಬತ್ತಿ ಉರಿಯುವಿಕೆಯಿಂದ ಕ್ಯಾನ್ಸರ್ ಬರಬಹುದು

ಸೊಳ್ಳೆಬತ್ತಿ ಉರಿಯುವಿಕೆಯಿಂದ ಕ್ಯಾನ್ಸರ್ ಬರಬಹುದು

ಶುದ್ಧವಿಲ್ಲದ ಪರಿಸರ ಎಲ್ಲೆಲ್ಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಮನೆಗಳಿಗೂ ಸೊಳ್ಳೆಗಳು ಲಗ್ಗೆ ಇಡುತ್ತವೆ. ಸೊಳ್ಳೆಗಳನ್ನು ಸಾಯಿಸಲು ಅನೇಕ ಕಂಪನಿಗಳು ಕಾಯಿಲ್‌(ಚಾಪ್) ಗಳನ್ನು ಉತ್ಪತ್ತಿ ಮಾಡಿ ಬಳಕೆಗೆ ಬಿಡುಗಡೆ ಮಾಡುತ್ತಿವೆ. ಎಲ್ಲರ ಮನೆಗಳಲ್ಲಿ ಸೊಳ್ಳೆಯ ಚಾಪಗಳನ್ನು ಹೊತ್ತಿಸಿ ಹಾಯಾಗಿ ನಿದ್ರೆ ಮಾಡಬಹುದು. ಸೊಳ್ಳೆ ಕಡಿತದಿಂದ ಉಂಟಾಗುವ ಕಾಯಿಲೆಯನ್ನು ದೂರವಿಡಲು ಹೋಗಿ ನಾವೇ ಮಹಾಮಾರಿಯನ್ನು ಬರಮಾಡಿ ಕೊಳ್ಳುತ್ತಿದ್ದೇವೆ, ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಮಾಸ್ಕಿಟೊ ಕಾಯಿಲ್‌ಗಳ ಉರಿವಿಕೆಯಿಂದ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳು ಬರಬಹುದೆಂದು ಎಚ್ಚರಿಸಿದ್ದಾರೆ.

ಇಂದು ಏಷಿಯಾದ ವಿವಿಧ ಭಾಗಗಳಲ್ಲಿ ಸೊಳ್ಳೆ ಚಾಪ್‌ಗಳು ಸೊಳ್ಳೆ ನಿವಾರಕ ಮ್ಯಾಟಗಳನ್ನು ವ್ಯಾಪಕವಾಗಿ ಬಳೆಸುತಿದ್ದು ವಾರ್ಷಿಕವಾಗಿ ಹತಾರು ಸಾವಿರ ಕಾಯಿಲ್‌ಗಳು ಮಾರಾಟವಾಗುತ್ತವೆ. “ಎನ್ವರಾನ್‌ಮೆಂಟಲ್‌ ಹೆಲ್ತ್‌ಏರ್ಸಿಡೆರೈವ್ಸ್” ಪತ್ರಿಕೆಯ ಸಂಚಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಏಕಮೇವ ಮಾಸ್ಕಿಟೋ ಕಾಯಿಲ್ ಏಕ ಕಾಲಕ್ಕೆ ೭೫ ಸಿಗರೇಟು ಸೇದಿ ವಿಸರ್ಜಿಸಿದಷ್ಟು ವಿಷದ ಘಟಕಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳಲ್ಲಿರುವ ಘನಾಂಶಗಳು ಹಾಗೂ ಹೊಗೆಯಲ್ಲಿರುವ ರಾಸಾಯನಿಕಗಳು ಕಣ್ಣು ಮತ್ತು ಶ್ವಾಸಕೋಶಗಳಿಗೆ ಹಾನಿಮಾಡುವುದರ ಜೊತೆಗೆ ‘ಕ್ಯಾನ್ಸರ್‌ಕಾರಕ’ ಆಗಿ ಪರಿಣಮಿಸುತ್ತದೆಂದು ಎಚ್ಚರಿಸಿದೆ.

ಸೊಳ್ಳೆ ನಿವಾರಕ ಚಾಪ್‌ಗಳಲ್ಲಿರುವ ಪ್ರಮುಖ ಕಚ್ಚಾ ಅಂಶವು ಪೈರಿ ಥ್ರಾಯಿಡ್ಸಗಳೆಂಬ ಕೀಟನಾಶಕದ ವರ್ಗಕ್ಕೆ ಸೇರಿದೆ. ದೇಶದಲ್ಲಿ ಲಭ್ಯವಿರುವ ಒಂದು ಸಾಮಾನ್ಯ ಮಾಸ್ಕಿಟೊ ಕಾಯಿಲ್‌ ಮರದ ಹೊಟ್ಟು, ಕೊಬ್ಬರಿ, ಪುಡಿ, ಹಾಗೂ ಸ್ಟಾರ್ಚ್‌ಗಳ ಜೊತೆಗೆ ಶೇ. ೦.೧ರಷ್ಟು ಪೈರಿಥ್ರಾಯಿಡ್ ಹಾಗೂ ಡಿ ಆಲೆಥೈನ್ ಅಂಶವನ್ನು ಹೊಂದಿದೆ. ಸ್ಕೌಲ್ಟಿಂಗ್ ಕಾಯಿಲ್ ಮನುಷ್ಯನ ಕೂದಲಿಗಿಂತ ೧೦೦ ರಿಂದ ೧೦೦೦ ಪಟ್ಟು ದಪ್ಪವಾಗಿರುವ ಕಣಗಳನ್ನು ಬಿಡುಗಡೆ ಮಾಡುತ್ತದೆ. ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ದಂತ ವೈದ್ಯಶಾಸ್ತ್ರ ಹಾಗೂ ವೈದ್ಯಶಾಸ್ತ್ರ ವಿಶ್ವವಿದ್ಯಾನಿಲಯದ ವೇಲಿಲ್ಯೂ ಅವರ ಪ್ರಕಾರ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿಂದ ಆವೃತವಾಗಿರುವ ಈ ಘನ ಕಣಗಳು ಶ್ವಾಸಕೋಶದ ಆಳಕ್ಕಿಳಿದು ಶಾಶ್ವತವಾಗಿ ಅಲ್ಲಿ ನೆಲೆನಿಲ್ಲುತ್ತವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬಳಗದ ಸಂಶೋಧನೆಯು ಇನ್ನೊಂದು ಅಪಾಯಕಾರಿ ಸತ್ಯವನ್ನು ಬಯಲು ಮಾಡಿದೆ. ಕೆಲವು ಮ್ಯಾಸ್ಕಿಟೊ ಕಾಯಿಲೆಗಳು ‘ಎಸ್ ೨’ ಎಂಬ ಹೆಸರಿನ ಆಕ್ಟಾಕ್ಲೊರೋಡಿ ಪ್ರೋಪಿಲ್ ಈಧರ್ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಕಾಯಿಲ್‌ಗಳನ್ನು ಉರಿಸಿದಾಗ ೫೨ ರಾಸಾಯನಿಕವು ಬಿಸ್‌ಕ್ಕೊರೋಮಿಧೈಲ್‌ ಈಧರ್ ಎಂಬ (BCME) ಇನ್ನೊಂದು ರಾಸಾಯನಿಕದ ರೂಪ ತಾಳುತ್ತದೆ. ಈ ಬಿ.ಸಿ.ಎಂ.ಇ. ರಸಾಯನಿಕವು ಅತ್ಯಂತ ಹಾನಿಕಾರಕವಾಗಿದ್ದು ಶ್ವಾಸಕೋಶದ ಕ್ಯಾನ್ಸರ್‌ರೋಗ ಉಂಟುಮಾಡಬಲ್ಲಷ್ಟು ಪ್ರಬಲವಾಗಿದೆ. ಕೆಲವರು ರಾತ್ರಿ ನಿದ್ರಿಸುವಾಗ ತಮ್ಮ ಹಾಸಿಗೆಗೆ ಅತ್ಯಂತ ಹತ್ತಿರದಲ್ಲಿ ಕಾಯಿಲ್ ಗಳನ್ನು ಹಚ್ಚಿಟ್ಟು ಮಲಗುತ್ತಾರೆ. ಈ ಕಾಯಿಲ್‌ಗಳಿಂದ ಬರುವ ಹೊಗೆಯನ್ನು ಉಸಿರಾಡುವುದರಿಂದ ಆರೋಗ್ಯದ ಮೇಲೆ ಕೆಲವು ಪರಿಣಾಮಗಳಾಗುತ್ತವೆ. ಇದರಿಂದಾಗಿ ಕಣ್ಣು ಹಾಗೂ ಉಸಿರಾಟದ ತೊಂದರೆಯ ಜೊತೆಗೆ ಆಸ್ತಮಾ ಸಂಬಂಧಿತ ತೊಡಕುಗಳು ಸೇರಿಕೊಂಡು ಆರೋಗ್ಯ ಪರಸ್ಥಿತಿ ಮತ್ತಷ್ಟು ಹದಗೆಡುತ್ತದೆ. ರಾತ್ತಿ ಸೊಳ್ಳೆ ಚಾಪ್‌ಗಳನ್ನು ಬಳೆಸುವಾಗ ಸುರಕ್ಷಾಕ್ರಮಗಳತ್ತ ಆದ್ಯ ಗಮನಹರಿಸಬೇಕಿದೆ. ಇಲ್ಲದಿದ್ದರೆ ಕ್ಯಾನ್ಸರ್ ರೋಗವನ್ನು ನೀವೇ ಕೈಯಾರೆ ಅವ್ಹಾನಿಸಿಕೊಂಡಂತಾಗುತ್ತದೆ. ಈ ವಿಷಯದಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಅವಶ್ಯ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...