Home / ಕವನ / ಕವಿತೆ / ಸ್ವಾತಂತ್ರ ಗೀತೆ

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ
ವಿವಿಧ ಹೂಗಳ ಒಂದುಗೂಡಿಸಿ,
ಒಂದು ಹೂದಾನಿ ಅಲಂಕರಿಸಿ,
ಮೇಜಿನ ಮೇಲಿಟ್ಟು
ಜಗತ್ತಿಗೇ ತೋರಿಸಿ ಹೇಳಿದೆ-
ನೋಡಿ ಇಲ್ಲಿ ಕಾಶಿ, ಮಥುರಾ,
ಅಜಮೀರ, ಅಮೃತಸರ್
ಕಾಶ್ಮೀರ್, ಕನ್ಯಾಕುಮಾರಿಯ
ಸುಂದರ ಹೂಗಳಿವೆ-
ಮಂದಿರವೂ ಇಲ್ಲಿದೆ-
ಮಜ್ಜಿದವೂ ಇಲ್ಲಿದೆ ಮತ್ತೇ
ತಾಜಮಹಲಿನ ನೆರಳುಗಳೂ ಇಲ್ಲಿವೆ-
ಪೈಗಂಬರರ ಪರಿಛಾಯೆ-
ರಾಮನ ನಾಮವೂ ಇಲ್ಲಿದೆ
ಹಿಂದು-ಮುಸಲ್ಮಾನರಿಬ್ಬರೂ
ಭಾರತಾಂಬೆಯ ಎರಡು ಕಣ್ಣುಗಳು,
ಅವರ ರಕ್ತದ ಓಕುಳಿ
ಅಶುಭದ ಸಂಕೇತ;

ಉನ್ನತ ಹಿಮಾಲಯದ ಎತ್ತರ
ಜಗತ್ತಿನ ದೃಷ್ಟಿಯಲ್ಲಿ
ಕುಬ್ಜವಾಗಲೆಂದೂ ಬಿಡೆವು ನಾವು.
ಮಾನವೀಯ ಮೌಲ್ಯಗಳು
ನಾಶವಾಗುವದನೆಂದೂ ಸಹಿಸೆವು ನಾವು
ದೇಶದ ಸರಹದ್ದುಗಳಿಗೆ
ಮಮತೆಯಿಂದ ಚುಂಬಿಸಿ,
ಹರಡಿದ ನಮ್ಮ ಕನಸುಗಳನು
ಒಟ್ಟುಗೂಡಿಸುವೆವು ನಾವು.
ಪರದೇಶಿ ಹದ್ದುಗಳ ನೆರಳು
ಪವಿತ್ರ ಭಾರತದ ಮೇಲೆ
ಎಂದಿಗೂ ಸಹಿಸೆವು ನಾವು.

ಸ್ನೇಹದ ಹಸ್ತ ನೀಡದೇ
ಗುಲಾಮಿಯ ಕೋಳ ತೊಡಿಸುವ
ಸಾಮ್ರಾಜ್ಯ ಶಾಹಿಗಳ ನೀತಿಗೆ
ಪಾಠ ಕಲಿಸುವೆವು ನಾವು
ಗುಲಾಮಗಿರಿಯ ಕೊಳವನು,
ಕತ್ತರಿಸುವ ಖಡ್ಗವ ವಾಗುವೆವು ನಾವು.
ಭಾರತದ ಸ್ವತಂತ್ರ ಸೂರ್ಯನ
ಪ್ರಖರ ತೇಜಸ್ಸನ್ನು ಜಗತ್ತಿಗೇ
ತೆಗೆದು ತೋರುವೆವು ನಾವು.
ಸ್ವಾತಂತ್ರ ಗೀತೆಯನು
ಸಂಭ್ರಮದಿಂದ ಹಾಡುವೆವು ನಾವು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...