Home / ಕವನ / ಕವಿತೆ / ಸ್ವಾತಂತ್ರ ಗೀತೆ

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ
ವಿವಿಧ ಹೂಗಳ ಒಂದುಗೂಡಿಸಿ,
ಒಂದು ಹೂದಾನಿ ಅಲಂಕರಿಸಿ,
ಮೇಜಿನ ಮೇಲಿಟ್ಟು
ಜಗತ್ತಿಗೇ ತೋರಿಸಿ ಹೇಳಿದೆ-
ನೋಡಿ ಇಲ್ಲಿ ಕಾಶಿ, ಮಥುರಾ,
ಅಜಮೀರ, ಅಮೃತಸರ್
ಕಾಶ್ಮೀರ್, ಕನ್ಯಾಕುಮಾರಿಯ
ಸುಂದರ ಹೂಗಳಿವೆ-
ಮಂದಿರವೂ ಇಲ್ಲಿದೆ-
ಮಜ್ಜಿದವೂ ಇಲ್ಲಿದೆ ಮತ್ತೇ
ತಾಜಮಹಲಿನ ನೆರಳುಗಳೂ ಇಲ್ಲಿವೆ-
ಪೈಗಂಬರರ ಪರಿಛಾಯೆ-
ರಾಮನ ನಾಮವೂ ಇಲ್ಲಿದೆ
ಹಿಂದು-ಮುಸಲ್ಮಾನರಿಬ್ಬರೂ
ಭಾರತಾಂಬೆಯ ಎರಡು ಕಣ್ಣುಗಳು,
ಅವರ ರಕ್ತದ ಓಕುಳಿ
ಅಶುಭದ ಸಂಕೇತ;

ಉನ್ನತ ಹಿಮಾಲಯದ ಎತ್ತರ
ಜಗತ್ತಿನ ದೃಷ್ಟಿಯಲ್ಲಿ
ಕುಬ್ಜವಾಗಲೆಂದೂ ಬಿಡೆವು ನಾವು.
ಮಾನವೀಯ ಮೌಲ್ಯಗಳು
ನಾಶವಾಗುವದನೆಂದೂ ಸಹಿಸೆವು ನಾವು
ದೇಶದ ಸರಹದ್ದುಗಳಿಗೆ
ಮಮತೆಯಿಂದ ಚುಂಬಿಸಿ,
ಹರಡಿದ ನಮ್ಮ ಕನಸುಗಳನು
ಒಟ್ಟುಗೂಡಿಸುವೆವು ನಾವು.
ಪರದೇಶಿ ಹದ್ದುಗಳ ನೆರಳು
ಪವಿತ್ರ ಭಾರತದ ಮೇಲೆ
ಎಂದಿಗೂ ಸಹಿಸೆವು ನಾವು.

ಸ್ನೇಹದ ಹಸ್ತ ನೀಡದೇ
ಗುಲಾಮಿಯ ಕೋಳ ತೊಡಿಸುವ
ಸಾಮ್ರಾಜ್ಯ ಶಾಹಿಗಳ ನೀತಿಗೆ
ಪಾಠ ಕಲಿಸುವೆವು ನಾವು
ಗುಲಾಮಗಿರಿಯ ಕೊಳವನು,
ಕತ್ತರಿಸುವ ಖಡ್ಗವ ವಾಗುವೆವು ನಾವು.
ಭಾರತದ ಸ್ವತಂತ್ರ ಸೂರ್ಯನ
ಪ್ರಖರ ತೇಜಸ್ಸನ್ನು ಜಗತ್ತಿಗೇ
ತೆಗೆದು ತೋರುವೆವು ನಾವು.
ಸ್ವಾತಂತ್ರ ಗೀತೆಯನು
ಸಂಭ್ರಮದಿಂದ ಹಾಡುವೆವು ನಾವು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...