Home / ಕವನ / ಕವಿತೆ / ಇವರೇ ನನ್ನವರು

ಇವರೇ ನನ್ನವರು

ಇದು ಬುರ್ಖಾ.
ಶತಮಾನಗಳಿಂದ
ಹಲವಾರು
ನಾನು ಮರುಮಾತಿಲ್ಲದೆ
ಮೌನವಾಗಿ
ಹೊತ್ತು ಬಂದ ಬುರ್ಖಾ.
ಅಂದು ಹಿಂದೂಮ್ಮೆ
ಇದರ ಒಳಗೆಯೇ ನಾನು
ಸಿಡಿಮಿಡಿಕೊಂಡು
ಮೌನವಾಗಿ ಮಿಡಿಕಿದ್ದೆ.
ಬಿಕ್ಕಳಿಸಿ ಅತ್ತಿದ್ದೆ.
ಬಿಡುಗಡೆಗಾಗಿ ಹಲುಬಿದ್ದ.

ಬಾಲ್ಯದ ಆ ನೆನಪು
ಈಗಲೂ ಮಾಸಿಲ್ಲ
ನನಗಿನ್ನೂ ನೆನಪಿದೆ
ಅಂದು ಗೆಳೆಯರ ಮಧ್ಯ.

ಆನಂದದಿಂದ ನಲಿಯುತ್ತಿದ್ದೆ.
ಹರ್ಷದಿಂದ ನಲಿಯುತ್ತಿದ್ದೆ.
ಹದಿಮೂರರಲ್ಲೊಮ್ಮೆ
ಏನಾಯಿತೋ ಕಾಣೆ.
ನೀನೀಗ ಹೆಂಗುಸಾದೆ
ಎಂದರು ನನ್ನವರು.

ಮೂಲಿಯಲಿ ಕೂಡಿಸಿ
ಮರೆಮಾಡಿ ತಿನ್ನಿಸಿ
ಮುದ್ದೆಯಾಗಿ ಬೆಳೆಸಿದರು ನನ್ನ
ಸೂರ್ಯನನೇ ಕಾಣದ ದೇಹ
ಕ್ಷಯದ ಆಗರವಾಗಿ
ಹಳದಿಯಾಗಲು ಕೊನೆಗೆ
ಸೌಂದರ್ಯ ಹೆಚ್ಚಿದೆಯೆಂದು
ಗೌರವದೀ ಕಂಡರು ನನ್ನ.

ಶಾಸ್ರೋಕ್ತವಾದ ದಾಸ್ಯತ್ವ ವಹಿಸಿ,
ದೊಡ್ಡವಳಾದುದಕ್ಕೆ ಲೈಸನ್ಸ್
ಕೊಡಿಸಿದರು ನನ್ನ.
ಬೆಳೆಯಲಿರುವ ಚಿಗುರಿಗೆ
ಮೂಲದಲ್ಲೇ ಚಿವುಟಿ
ಮುಳ್ಳಿನಾ ಬೇಲಿಯಿಟ್ಟು
ವ್ಯಕ್ತಿತ್ವಕ್ಕೆ ಕೊಳ್ಳಿಯಿಟ್ಟು
ಆಕ್ರಮಣ ಮಾಡಿದರು ಇವರು
ಇವರೇ ನನ್ನವರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...