Home / ಕವನ / ಕವಿತೆ / ಇವರೇ ನನ್ನವರು

ಇವರೇ ನನ್ನವರು

ಇದು ಬುರ್ಖಾ.
ಶತಮಾನಗಳಿಂದ
ಹಲವಾರು
ನಾನು ಮರುಮಾತಿಲ್ಲದೆ
ಮೌನವಾಗಿ
ಹೊತ್ತು ಬಂದ ಬುರ್ಖಾ.
ಅಂದು ಹಿಂದೂಮ್ಮೆ
ಇದರ ಒಳಗೆಯೇ ನಾನು
ಸಿಡಿಮಿಡಿಕೊಂಡು
ಮೌನವಾಗಿ ಮಿಡಿಕಿದ್ದೆ.
ಬಿಕ್ಕಳಿಸಿ ಅತ್ತಿದ್ದೆ.
ಬಿಡುಗಡೆಗಾಗಿ ಹಲುಬಿದ್ದ.

ಬಾಲ್ಯದ ಆ ನೆನಪು
ಈಗಲೂ ಮಾಸಿಲ್ಲ
ನನಗಿನ್ನೂ ನೆನಪಿದೆ
ಅಂದು ಗೆಳೆಯರ ಮಧ್ಯ.

ಆನಂದದಿಂದ ನಲಿಯುತ್ತಿದ್ದೆ.
ಹರ್ಷದಿಂದ ನಲಿಯುತ್ತಿದ್ದೆ.
ಹದಿಮೂರರಲ್ಲೊಮ್ಮೆ
ಏನಾಯಿತೋ ಕಾಣೆ.
ನೀನೀಗ ಹೆಂಗುಸಾದೆ
ಎಂದರು ನನ್ನವರು.

ಮೂಲಿಯಲಿ ಕೂಡಿಸಿ
ಮರೆಮಾಡಿ ತಿನ್ನಿಸಿ
ಮುದ್ದೆಯಾಗಿ ಬೆಳೆಸಿದರು ನನ್ನ
ಸೂರ್ಯನನೇ ಕಾಣದ ದೇಹ
ಕ್ಷಯದ ಆಗರವಾಗಿ
ಹಳದಿಯಾಗಲು ಕೊನೆಗೆ
ಸೌಂದರ್ಯ ಹೆಚ್ಚಿದೆಯೆಂದು
ಗೌರವದೀ ಕಂಡರು ನನ್ನ.

ಶಾಸ್ರೋಕ್ತವಾದ ದಾಸ್ಯತ್ವ ವಹಿಸಿ,
ದೊಡ್ಡವಳಾದುದಕ್ಕೆ ಲೈಸನ್ಸ್
ಕೊಡಿಸಿದರು ನನ್ನ.
ಬೆಳೆಯಲಿರುವ ಚಿಗುರಿಗೆ
ಮೂಲದಲ್ಲೇ ಚಿವುಟಿ
ಮುಳ್ಳಿನಾ ಬೇಲಿಯಿಟ್ಟು
ವ್ಯಕ್ತಿತ್ವಕ್ಕೆ ಕೊಳ್ಳಿಯಿಟ್ಟು
ಆಕ್ರಮಣ ಮಾಡಿದರು ಇವರು
ಇವರೇ ನನ್ನವರು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...