Home / ಕವನ / ಕವಿತೆ / ಬೆಳಗು

ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ
ಕತ್ತಲೆ ಚಾಪೆಯ ಸುತ್ತುತಿದೆ
ಬಾನಿನ ಕಣ್ಣುಗಳು ಮಂಕಾಗುತಿವೆ
ಭೂಮಿಯ ಕಣ್ಣುಗಳು ತೆರೆಯುತಿವೆ
ಹಕ್ಕಿಗಳು ಕಲರವ ಎಬ್ಬಿಸಿವೆ
ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ.

ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ
ಮೊಳಗುತಿವೆ ಶುಭ ಸೂಚಕ ಘಂಟೆಗಳು
ಮೊರೆಯುತಿವೆ ಸುಶ್ರಾವ್ಯ ‘ಎದ್ದೇಳು…’ ಗೀತೆಗಳು
ಸ್ಪುರಿಸಿವೆ ಭಕ್ತಿಯ ಮನಗಳಲಿ
ಸುಟ್ಟುಕೊಂಡು ಸುಗಂಧ ಬೀರುವ
ದೀಪ, ದೂಪದ ಬತ್ತಿಗಳು ಸೇರಿ.

ಬಾಳುವ ಮನೆಗಳ ಅಂಗಳಗಳಲಿ
ಕಾರಣೆ ನಡೆದಿದೆ
ಅರಳುತಿವೆ ವಿಧ, ವಿಧ ರಂಗೋಲಿ ಹೂವುಗಳು
ಶಿಶುಗಳ ಮುಕ್ತ ನಗೆಯಂತೆ
ಸ್ವಚ್ಛತೆ, ಶೃಂಗಾರ ಮೊದಲೆಂಬಂತೆ

ನಿಧಾನವಾಗಿ ಮನೆಯೊಳ ಹೊರಗೆ ಹೆಜ್ಜೆಯ ಹಾಕುತ
ಎಲ್ಲದನು, ಎಲ್ಲರನು ಗಮನಿಸುತ
ಮಾಡಿದ ಕೆಲಸವ ಒರಗೆ ಹಚ್ಚುತ

ಮಾಡಬೇಕಾದುದೆಲ್ಲವನು ವಿವರಿಸುತ, ತಾಕೀತು ಮಾಡುತ್ತ
ಬೆಳಕಿನ ಕೋಲನು ಚಮಕಾಯಿಸುತ್ತ
ಹಿರಿಯರು ನಡೆಸಿಹರು
ಬಾಳಿನ ಬೆಳಗು ಅಧಿವೇಶನವ.

ದುಡಿಮೆಯೇ ದೇವರು ನಡೆ, ನುಡಿಯ
ಅನ್ನದಾತರು, ಶ್ರಮಿಕರ ಕುಟೀರಗಳಲಿ
ಸಿದ್ಧ ಮಾಡುತಿಹರು
ಬಾಳಿನ ಕಣ್ಣುಗಳು, ಸಹನೆ, ಸಮನ್ವಯ ಸಾಧಕ ನಾರಿಯರು
ದುಡಿಯುವ ಕಣಗಳು, ಹೊಲ ಗದ್ದೆಗೆ ತೆರಳುವ
ಮನೆ ಮಂದಿಗೆ ಬುತ್ತಿ.

ಮೊದಲಿಗೆ ಎದ್ದ ಮೊದಲ ಗುರುಗಳ ಸಂಕುಲದವರು
ಬದಲಾಯಿಸುವರು
ಅಸಹಿಸಿಕೊಳ್ಳದೆ ಒದ್ದೆ ಮಾಡಿದ ಹಾಸಿಗೆ, ಹೊದಿಕೆ;
ಬೈಯ್ಯುತ ಎಳೆಯರ ಪ್ರೇಮದಲಿ
ಹಾಗೇ ಮೆಲ್ಲಗೆ ತಟ್ಟಿ ಮತ್ತೆ ಮಲಗಿಸುತಲಿ.

ಹಗಲು, ರಾತ್ರಿ ಸತ್ತಿಹ ಪೇಟೆ, ಪಟ್ಟಣಗಳಲಿ
ನೋಡಸಿಗುವರು…
ಆರೋಗ್ಯ ಪ್ರಿಯ ಅನುಕೂಲ, ಅವಕಾಶ ಹೊಂದಿದವರು,
ಹಿರಿಯರು,
ಪ್ರಶಸ್ತತೆ ಸವಿಯುವ, ಹುರಿಗೊಳ್ಳುವ ಭಾವದಲಿ
ದಟ್ಟಣೆ ವಿರಳ ವನ, ರಸ್ತೆಗಳಲಿ
ಕುಕ್ಕುಲೋಟ, ಆರಾಮದ ನಡೆಯಲಿ
ಸಹ ವಿಹಾರಿ ಸಂಗಾತಿ, ಮಿತ್ರರ ಜೊತೆಯಲಿ
ವಿದ್ಯಮಾನಗಳ ಲಘು ಪರಾಮರ್ಶೆಯ ನಡೆಸುವರು:

ಹದಿ ಹರೆಯದವರು, ನಾನಾ ಗುರಿ, ಕನಸಿಗರು
ಗರಡಿ, ಮೈದಾನ, ಮಂದಿರಗಳಲಿ
ಬೆಳಗಿನ ಗಾಳಿಗೆ ತುಸು ತುಸು ತಂಪು, ಬಿಸಿ ಬೆರೆಸುವರು.

ಬಾಳಿನ ಅವಶ್ಯ
ನಿಸರ್ಗ ದೇವಿಯ ನಿಯಮ, ನಿರ್ಲಿಪ್ತತೆ ಪ್ರತಿಪಾದಕನು
ನಿತ್ಯನು, ದಿನಕರನು ಅವತರಿಸುವನು
ಮೂಡಣ ದಿಗಂತದಂಚಿನಿಂದ
ಪೂರ್ಣತೆಯಾಕಾರದಲಿ;
ಕಡು ಕಿತ್ತಳೆ ಬಣ್ಣದ ಓಕುಳಿಯೆಲ್ಲೆಡೆ ಎರಚಾಡುವನು
ಜೀವ ಸಮಯದ ವಿವಿಧ ಮಜಲುಗಳ ನಿರೂಪಕನು
ಹೂ ಬಿಸಿಲಿನ ಕಾರಂಜಿಯಾಗಿ
ಕಣ್ಮನ ಶಕ್ತಿಯ ಪೂರಕನಾಗಿ
ಬೆಳಗಿನ ಸಂಪೂರ್ಣತೆ ರೂಪನಾಗಿ.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...