Home / ಲೇಖನ / ವಿಜ್ಞಾನ / ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ ಕರಗದೇ ಜಲ ಸಂಚಯಕ್ಕೆ ತೊಡಕಾಗುತ್ತಿತ್ತು ಸುಟ್ಟರೂ ಸಹಿತ ಪರಿಸರ ಕಷ್ಮಲಗೊಳ್ಳುವ ಇಂಗಾಲ ಡೈ ಆಕ್ಸೈಡ್ ಉತ್ಪತ್ತಿಯಾಗಿ ಜನರ ಉಸಿರಾಟಕ್ಕೆ ಮಾರಕವಾಗಿತ್ತು. ಇದರ ನಿರ್ನಾಮಕ್ಕೆ ಮದ್ದೇ ಇರಲಿಲ್ಲ ಎಂಬ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪಂಕಜ ಅವಧಿಯು ಅವರ ಈ ಪಾಲಥಿನ್ ಅನ್ನು ಭಕ್ಷಿಸುವ ೪-೫ ಕೀಟಗಳನ್ನು ಶೋಧಿಸಿದ್ದಾರೆ.

ಛತ್ತೀಸಗಡದ ಕೃಷಿ ವಿಜ್ಞಾನಿಯಾದ ಇವರು ಸೊಸೈಟಿ ಫಾರ್ ಪಾರ್ಥೇನಿಯಂ ಮ್ಯಾನೇಜ್‌ಮೆಂಟ್ ಸಂಯೋಜಕರಾಗಿ ತಮ್ಮ ಖಾಸಗಿ ಪ್ರಯೋಗಾಲಯದಲ್ಲಿ ೧೩೫ ವಿವಿಧ ಕೀಟಗಳ ಮೇಲೆ ೨ ವರ್ಷ ಪ್ರಯೋಗ ನಡೆಯಿಸಿದರು. ಕೊನೆಗೆ ೫ ವಿವಿಧ ಕೀಟಗಳು ಪಾಲಿಥಿನ್ ತಿನ್ನುವಂತಹವು ಎಂಬುವುದು ಖಚಿತವಾಯಿತು. ಇದಕ್ಕಾಗಿ ‘ಪ್ಲಾಸ್ಟಿಕ್ ಈಟಿಂಗ್ ಆರ್ಗೆನಿಸಂ ಪರಿಯೋಜನಾ’ ಹುಟ್ಟು ಹಾಕಿದರು. ಈ ಪ್ಲಾಸ್ಬಿಕ್ ತಿನ್ನುವ ಕೀಟಗಳಿಗೆ ‘ಪ್ಲಾಸಿಕ್ ಬಗ್’ ಎಂದು ಹೆಸರಿಸಿದ್ದಾರೆ. ಸದ್ಯಕ್ಕೆ ಈ ಕೀಟದ ಇನ್ನಿತರ ವಿವರಗಳು ಮತ್ತು ಅದರ ವೈಜ್ಞಾನಿಕ ಹೆಸರುಗಳನ್ನು ಅವಧಿಯು ರಹಸ್ಯವಾಗಿ ಇರಿಸಿದ್ದಾರೆ.

೧೯೯೯ ರಲ್ಲಿಯೇ ಈ ಬಗ್ಸ್‌ಗಳನ್ನು ಕಂಡು ಹಿಡಿದರೂ ಇವುಗಳ ಜೀವನ ಚಕ್ರ ಇನ್ನು ವಿಸ್ತಾರವಾದ ಅಧ್ಯಯನಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಸಕ್ರಿಯವಾಗಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆಂದೂ ಹೇಳುತ್ತಾರೆ. ಈ ಕೀಟಗಳು ೮೦ ವಿವಿಧ ಗಿಡಗಳ ಎಲೆಗಳನ್ನು ತಿನ್ನುವುದರ ಜತೆಗೆ ಅಲ್ಲಿನ ಕೆಲವು ಮುಖ್ಯ ಬೆಳೆಗಳಿಗೆ ವೈರಿಯಾಗಿರುವ ಕಳೆಗಿಡಗಳನ್ನು ತಿಂದು ಹಾಕುತ್ತವೆ. ಇನ್ನೂಂದು ವಿಶೇಷವೆಂದರೆ ಕಪ್ಪು ಬಣ್ಣದ ಪಾಲಿಥಿನ್ ತಿನ್ನುವುದು ಇದರಲ್ಲಿ ಒಂದು ಕೀಟಕ್ಕೆ ಬಹು ಇಷ್ಟವೆಂದು ಹೇಳುತ್ತಾರೆ. ಇವು ಹಣ್ಣಾದ ಮಾವಿನ ಎಲೆಯಂಥಹ ೧೦-೧೨ ಪಾಲಿಥಿನ್ ಎಲೆಗಳನ್ನು ೩-೪ ಗಂಟೆಗಳಲಿ ತುಂಬ ರುಚಿವಹಿಸಿ ತಿನ್ನುತ್ತವೆ ಮತ್ತು ಜೀರ್ಣಿಸಿಕೊಳುತ್ತವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...