Home / ಲೇಖನ / ವಿಜ್ಞಾನ / ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ ಕರಗದೇ ಜಲ ಸಂಚಯಕ್ಕೆ ತೊಡಕಾಗುತ್ತಿತ್ತು ಸುಟ್ಟರೂ ಸಹಿತ ಪರಿಸರ ಕಷ್ಮಲಗೊಳ್ಳುವ ಇಂಗಾಲ ಡೈ ಆಕ್ಸೈಡ್ ಉತ್ಪತ್ತಿಯಾಗಿ ಜನರ ಉಸಿರಾಟಕ್ಕೆ ಮಾರಕವಾಗಿತ್ತು. ಇದರ ನಿರ್ನಾಮಕ್ಕೆ ಮದ್ದೇ ಇರಲಿಲ್ಲ ಎಂಬ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪಂಕಜ ಅವಧಿಯು ಅವರ ಈ ಪಾಲಥಿನ್ ಅನ್ನು ಭಕ್ಷಿಸುವ ೪-೫ ಕೀಟಗಳನ್ನು ಶೋಧಿಸಿದ್ದಾರೆ.

ಛತ್ತೀಸಗಡದ ಕೃಷಿ ವಿಜ್ಞಾನಿಯಾದ ಇವರು ಸೊಸೈಟಿ ಫಾರ್ ಪಾರ್ಥೇನಿಯಂ ಮ್ಯಾನೇಜ್‌ಮೆಂಟ್ ಸಂಯೋಜಕರಾಗಿ ತಮ್ಮ ಖಾಸಗಿ ಪ್ರಯೋಗಾಲಯದಲ್ಲಿ ೧೩೫ ವಿವಿಧ ಕೀಟಗಳ ಮೇಲೆ ೨ ವರ್ಷ ಪ್ರಯೋಗ ನಡೆಯಿಸಿದರು. ಕೊನೆಗೆ ೫ ವಿವಿಧ ಕೀಟಗಳು ಪಾಲಿಥಿನ್ ತಿನ್ನುವಂತಹವು ಎಂಬುವುದು ಖಚಿತವಾಯಿತು. ಇದಕ್ಕಾಗಿ ‘ಪ್ಲಾಸ್ಟಿಕ್ ಈಟಿಂಗ್ ಆರ್ಗೆನಿಸಂ ಪರಿಯೋಜನಾ’ ಹುಟ್ಟು ಹಾಕಿದರು. ಈ ಪ್ಲಾಸ್ಬಿಕ್ ತಿನ್ನುವ ಕೀಟಗಳಿಗೆ ‘ಪ್ಲಾಸಿಕ್ ಬಗ್’ ಎಂದು ಹೆಸರಿಸಿದ್ದಾರೆ. ಸದ್ಯಕ್ಕೆ ಈ ಕೀಟದ ಇನ್ನಿತರ ವಿವರಗಳು ಮತ್ತು ಅದರ ವೈಜ್ಞಾನಿಕ ಹೆಸರುಗಳನ್ನು ಅವಧಿಯು ರಹಸ್ಯವಾಗಿ ಇರಿಸಿದ್ದಾರೆ.

೧೯೯೯ ರಲ್ಲಿಯೇ ಈ ಬಗ್ಸ್‌ಗಳನ್ನು ಕಂಡು ಹಿಡಿದರೂ ಇವುಗಳ ಜೀವನ ಚಕ್ರ ಇನ್ನು ವಿಸ್ತಾರವಾದ ಅಧ್ಯಯನಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಸಕ್ರಿಯವಾಗಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆಂದೂ ಹೇಳುತ್ತಾರೆ. ಈ ಕೀಟಗಳು ೮೦ ವಿವಿಧ ಗಿಡಗಳ ಎಲೆಗಳನ್ನು ತಿನ್ನುವುದರ ಜತೆಗೆ ಅಲ್ಲಿನ ಕೆಲವು ಮುಖ್ಯ ಬೆಳೆಗಳಿಗೆ ವೈರಿಯಾಗಿರುವ ಕಳೆಗಿಡಗಳನ್ನು ತಿಂದು ಹಾಕುತ್ತವೆ. ಇನ್ನೂಂದು ವಿಶೇಷವೆಂದರೆ ಕಪ್ಪು ಬಣ್ಣದ ಪಾಲಿಥಿನ್ ತಿನ್ನುವುದು ಇದರಲ್ಲಿ ಒಂದು ಕೀಟಕ್ಕೆ ಬಹು ಇಷ್ಟವೆಂದು ಹೇಳುತ್ತಾರೆ. ಇವು ಹಣ್ಣಾದ ಮಾವಿನ ಎಲೆಯಂಥಹ ೧೦-೧೨ ಪಾಲಿಥಿನ್ ಎಲೆಗಳನ್ನು ೩-೪ ಗಂಟೆಗಳಲಿ ತುಂಬ ರುಚಿವಹಿಸಿ ತಿನ್ನುತ್ತವೆ ಮತ್ತು ಜೀರ್ಣಿಸಿಕೊಳುತ್ತವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...