Home / ಕವನ / ಕವಿತೆ / ಭಂಡಾರ

ಭಂಡಾರ

ಅರಳಿ ದಳದಳ ಸುರಿಯೆ ರಜಕಣ-ಹರಿಯೆ ಮಧುರಸ ಮೆರೆಯೆ ದುಂಬಿಯು
ತಿರುಳ ಭಾವಕೆ ಹರಿಯೆ ವೀರ್ಯವು ಗೂಢ ತೆರದೊಳಗೆ
ಹೊರಗಣಾರ್ಥಿಕ ಸರದಿ ಕಳೆಯಲು- ಇರದು ಮಧುರಸವಿರದು ಶುಭರಜ
ವಿರದು ರಂಗಿನಪೆಂಪದಾವದು ಬಲಿಯೆ ಬಂಡಾರ.
* * *

ಹೊರಳಿ ಧ್ವಜಪಠ ಸುಳಿದು ಹೊಂಬೊಗೆ
ಹರಿದು ಹೊಗಳಿಕೆ ಮೊರೆಯೆ ಕವಿಗಳು
ಭರತಭುವಿಯಲಿ ವೀರ್ಯ ಹರಿಯಿತು ತಿರುಳಿನಂತರಕೆ
ಹೊರಗಣಾರ್ಥಿಕ ಸರದಿ ಕಳೆಯಿತು!
ಇರದೆ ಹೊಂಬೊಗೆಯಿರದೆ ಹೊಗಳಿಕೆ!
ಸುರಳಿ ಧ್ವಜಪಠ ಸುರಟಿ ಭವಸುಖ ಬಲಿತು ಭಂಡಾರ!
ನಾಡಹೃದಯವು ಸೊರಗಿ ಸುರುಟಿದೆ-ಆಡುವಾಕಳಿಯಿಲ್ಲ ಮೊಗದಲಿ
ನೋಡೆನೆಂಬೊಡೆ ನೆಳಲ ಕಾಣೆನು ಪೂರ್ವ ಶುಭಯುಗದ!
ನಾಡು ಬಲಿತಿಹ ಬೀಜಕೋಶವು-ಬೀಡು ಪೂರ್‍ವದ ಬೀಜ ಭಾಗ್ಯಕೆ!
ನಾಡು ಸೊರಗಿದ ನಾಡು ನಮ್ಮದು! ಬಿರಿವ ಭಂಡಾರ!
ವ್ಯಾಸನಾವಾಲ್ಮೀಕಿ ಮೊದಲಾ- ದೇಸು ಕವಿಗಳು ವಕ್ಕಿ ತೂರುತ
ಭಾಸುರಾತ್ಮಕ ಭಾವವೆಲ್ಲವ ಕಾವ್ಯ ಕಣಜದಲಿ
ಏಸನಿಟ್ಟರೋ! ಯೋಗಮರ್ಮದೊ-ಳಾಸುಯೋಗದ ಸುಗ್ಗಿ ಕಳೆಯಿತು!
ಈಸುಕಾವ್ಯಗಳೆಲ್ಲ ಕೇಳಿರಿ ರತುನ ಭಂಡಾರ!
ಜಂಬುದ್ವೀಪವು ಬಿರಿವಬೊಕ್ಕಸ! ನಂಬಿನಂಬಿರಿ! ನಿಮ್ಮ ಹೃದಯಗ
ಳೆಂಬ ವೋಟೆಗಳೆಲ್ಲ ಬಿರಿವವು ನಾಳೆ ಶುಭಯುಗಕೆ!
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...