Home / ಕವನ / ಕವಿತೆ / ಎಂದೆಂದೂ ಮುಗಿಯದ ಕತೆ

ಎಂದೆಂದೂ ಮುಗಿಯದ ಕತೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೊಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಯಾರಿಗೂ ತೆರೆಯದ ಮಾಂತ್ರಿಕ ಕೋಟೆ
ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ

ಇಟ್ಟರೆ ಅದರೊಳಗೆ ಚಿನ್ನದ ಮೂಟೆ
ಮಾಡುವರು ಯಾರು ಆ ಚಿನ್ನದ ಬೇಟೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಏಳು ಸಮುದ್ರಗಳಾಚೆಗೆ ದ್ವೀಪ
ಅಲ್ಲೊಂದು ಜೀವಕ್ಕೆ ಮುಗಿಯದ ಶಾಪ

ಇದ್ದರೆ ಜೀವಕ್ಕೆ ಮುಗಿಯದ ಶಾಪ
ಏನದು ಎಸಗಿದ ಮುಗಿಯದ ಪಾಪ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಪ್ಪು ಕೊಳದೊಳಗೊಂದು ಕೋಮಳೆ ಹೂವು
ಆದನು ಕಿತ್ತವರಿಗೆ ಖಂಡಿತ ಸಾವು

ಅದನು ಕಿತ್ತವರಿಗೆ ಬಂದರೆ ಸಾವು
ಎಲ್ಲವನು ನೋಡುವುದು ಹತ್ತಿರದ ಮಾವು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಆಲದ ಮರದಲ್ಲಿ ನೂರೊಂದು ಕೊಂಬೆ
ಒಂದೊಂದು ಕೊಂಬೆಯಲು ತೂಗುವ ಗೊಂಬೆ

ಒಂದೊಂದು ಕೊಂಬೆಯಲು ತೂಗಿದರೆ ಗೊಂಬೆ
ನೀನೆಂದೂ ನಿನ್ನ ಕಣ್ಣುಗಳ ನಂಬೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಮಾಂತ್ರಿಕ ಕೊಟ್ಟಂತ ಮಂತ್ರದ ಕೋಲು
ಅದರಿಂದ ಮುಟ್ಚಿದುದೆಲ್ಲವು ಕಲ್ಲು

ಮುಟ್ಟಿದುದೆಲ್ಲವು ಆದರೆ ಕಲ್ಲು
ಅಡಗುವುದು ಮತ್ತೆ ನಮ್ಮೆಲ್ಲರ ಸೊಲ್ಲು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಬಲು ದೊಡ್ಡ ಅರಮನೆಯ ಏಳನೆ ಮಹಡಿ
ಅದರೊಳಗೆ ಯಾರಿಗೂ ಗೊತ್ತಿರದ ಕೊಠಡಿ

ಇದ್ದರೆ ಯಾರಿಗೂ ಗೊತ್ತಿರದ ಕೊಠಡಿ
ಹತ್ತಿರ ಸುಳಿದವರ ಹಿಡಿಯುವುದು ಕರಡಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಲ್ಲಿಗೂ ತೆರೆಯದ ಕಿರಿದಾದ ಬೀದಿ
ಅಲ್ಲಿರುವನೊಬ್ಬ ಭೀಕರ ಮಂತ್ರವಾದಿ

ಇದ್ದರಲ್ಲೊಬ್ಬ ಭೀಕರ ಮಂತ್ರವಾದಿ
ಕಣ್ಣಿಗೆ ಎರಚುವನು ಮಂಕುಬೂದಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಗೋಡೆಯ ಮೇಲೊಂದು ಕಂಚಿನ ಡೇಗೆ
ಅದರ ಬಾಯೊಳಗೊಂದು ಕಬ್ಬಿಣದ ಕಾಗೆ

ಬಾಯೊಳೆಗಿದ್ದರೆ ಕಬ್ಬಿಣದ ಕಾಗೆ
ತೆಂಗಿನ ಮರದಿಂದ ಬೀಳುವುದು ಸೋಗೆ


ತರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಡಲ ತೀರದಲೊಬ್ಬ ಚೆಲುವಿನ ಯುವತಿ
ಕಂಡರೆ ಸೆರೆ ಹಿಡಿವಳೆಂಬುದು ಖ್ಯಾತಿ

ಕಂಡರೆ ಸೆರೆ ಹಿಡಿವಳಾದರೆ ಯುವತಿ
ಇರಲೇಬೇಕವಳೊಬ್ಬ ಮಾಟಗಾತಿ

೧೦
ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಂದೆಂದು ಮುಗಿಯದ ಕತೆ ಬೇಕು ನನಗೆ
ಸುಂದರಿಯೊಬ್ಬಳು ಇರಲದರ ಒಳಗೆ

ಸುಂದರಿಯೊಬ್ಬಾಕೆ ಇದ್ದರೆ ಒಳಗೆ
ಎಂದೆಂದು ಮುಗಿಯದ ಕತೆಯೇಕೆ ನಿನಗೆ
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...