Home / ಕವನ / ಕವಿತೆ / ಎಂದೆಂದೂ ಮುಗಿಯದ ಕತೆ

ಎಂದೆಂದೂ ಮುಗಿಯದ ಕತೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೊಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಯಾರಿಗೂ ತೆರೆಯದ ಮಾಂತ್ರಿಕ ಕೋಟೆ
ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ

ಇಟ್ಟರೆ ಅದರೊಳಗೆ ಚಿನ್ನದ ಮೂಟೆ
ಮಾಡುವರು ಯಾರು ಆ ಚಿನ್ನದ ಬೇಟೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಏಳು ಸಮುದ್ರಗಳಾಚೆಗೆ ದ್ವೀಪ
ಅಲ್ಲೊಂದು ಜೀವಕ್ಕೆ ಮುಗಿಯದ ಶಾಪ

ಇದ್ದರೆ ಜೀವಕ್ಕೆ ಮುಗಿಯದ ಶಾಪ
ಏನದು ಎಸಗಿದ ಮುಗಿಯದ ಪಾಪ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಪ್ಪು ಕೊಳದೊಳಗೊಂದು ಕೋಮಳೆ ಹೂವು
ಆದನು ಕಿತ್ತವರಿಗೆ ಖಂಡಿತ ಸಾವು

ಅದನು ಕಿತ್ತವರಿಗೆ ಬಂದರೆ ಸಾವು
ಎಲ್ಲವನು ನೋಡುವುದು ಹತ್ತಿರದ ಮಾವು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಆಲದ ಮರದಲ್ಲಿ ನೂರೊಂದು ಕೊಂಬೆ
ಒಂದೊಂದು ಕೊಂಬೆಯಲು ತೂಗುವ ಗೊಂಬೆ

ಒಂದೊಂದು ಕೊಂಬೆಯಲು ತೂಗಿದರೆ ಗೊಂಬೆ
ನೀನೆಂದೂ ನಿನ್ನ ಕಣ್ಣುಗಳ ನಂಬೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಮಾಂತ್ರಿಕ ಕೊಟ್ಟಂತ ಮಂತ್ರದ ಕೋಲು
ಅದರಿಂದ ಮುಟ್ಚಿದುದೆಲ್ಲವು ಕಲ್ಲು

ಮುಟ್ಟಿದುದೆಲ್ಲವು ಆದರೆ ಕಲ್ಲು
ಅಡಗುವುದು ಮತ್ತೆ ನಮ್ಮೆಲ್ಲರ ಸೊಲ್ಲು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಬಲು ದೊಡ್ಡ ಅರಮನೆಯ ಏಳನೆ ಮಹಡಿ
ಅದರೊಳಗೆ ಯಾರಿಗೂ ಗೊತ್ತಿರದ ಕೊಠಡಿ

ಇದ್ದರೆ ಯಾರಿಗೂ ಗೊತ್ತಿರದ ಕೊಠಡಿ
ಹತ್ತಿರ ಸುಳಿದವರ ಹಿಡಿಯುವುದು ಕರಡಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಲ್ಲಿಗೂ ತೆರೆಯದ ಕಿರಿದಾದ ಬೀದಿ
ಅಲ್ಲಿರುವನೊಬ್ಬ ಭೀಕರ ಮಂತ್ರವಾದಿ

ಇದ್ದರಲ್ಲೊಬ್ಬ ಭೀಕರ ಮಂತ್ರವಾದಿ
ಕಣ್ಣಿಗೆ ಎರಚುವನು ಮಂಕುಬೂದಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಗೋಡೆಯ ಮೇಲೊಂದು ಕಂಚಿನ ಡೇಗೆ
ಅದರ ಬಾಯೊಳಗೊಂದು ಕಬ್ಬಿಣದ ಕಾಗೆ

ಬಾಯೊಳೆಗಿದ್ದರೆ ಕಬ್ಬಿಣದ ಕಾಗೆ
ತೆಂಗಿನ ಮರದಿಂದ ಬೀಳುವುದು ಸೋಗೆ


ತರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಡಲ ತೀರದಲೊಬ್ಬ ಚೆಲುವಿನ ಯುವತಿ
ಕಂಡರೆ ಸೆರೆ ಹಿಡಿವಳೆಂಬುದು ಖ್ಯಾತಿ

ಕಂಡರೆ ಸೆರೆ ಹಿಡಿವಳಾದರೆ ಯುವತಿ
ಇರಲೇಬೇಕವಳೊಬ್ಬ ಮಾಟಗಾತಿ

೧೦
ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಂದೆಂದು ಮುಗಿಯದ ಕತೆ ಬೇಕು ನನಗೆ
ಸುಂದರಿಯೊಬ್ಬಳು ಇರಲದರ ಒಳಗೆ

ಸುಂದರಿಯೊಬ್ಬಾಕೆ ಇದ್ದರೆ ಒಳಗೆ
ಎಂದೆಂದು ಮುಗಿಯದ ಕತೆಯೇಕೆ ನಿನಗೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...