Home / ಕವನ / ಕವಿತೆ / ಮುಗಿಯಲಾರದ ದುಃಖಕೆ

ಮುಗಿಯಲಾರದ ದುಃಖಕೆ

ಕಣ್ಣ ಬೆಳಕೇ
ಒಲವಿನ ಉಸಿರೇ
ಜೀವದ ಜೀವವೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ

ಉಸಿರಿಗೆ ಉಸಿರಾದವಳೇ
ಬೆಳಕಿಗೆ ಬೆಳಕಾದವಳೇ
ಕಣ್ಣ ಮುಂದಿನ ಬೆಳಕೆ
ದಾರಿ ಮುಂದಿನ ಕನಸೇ
ನಿನಗಾಗಿ ಬರೆಯುವೆ
ಎಂದೆಂದೂ ಮುಗಿಯದ ಕತೆಯ

ಅಂಗೈ ಬೊಗಸೆಯಲ್ಲಿ ಮುಖವಿಟ್ಟು ಮಳೆ ಸುರಿಸಿದವಳೆ
ಅಂಗೈಯ ಅಳಿಸದ ರೇಖೆಗಳಲ್ಲಿ ನದಿಯಾದವಳೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಕಾವ್ಯವ

ಕಣ್ಣಲ್ಲಿ ಕಣ್ಣಿಟ್ಟು ಬದುಕ ಹೊಸೆದವಳೇ
ಬಂಧವಿರದ ಬಂಧಕೆ ಧ್ವನಿಯಾದವಳೇ
ಮುಗಿಯಲಾರದ ದುಃಖಕೆ
ಸಾಂತ್ವಾನ ಹೇಳಿದವಳೆ

ಕಣ್ಣೀರ ಕತೆಗೆ ಕಣ್ಣೀರ ಬೆಸೆದು
ಜೀವ ಜೀವಕೆ ಉದ್ದೀಪನವಾದವಳೇ
ಒಲವ ಬದುಕ ಪಯಣದಲ್ಲಿ
ಜೊತೆಯಾಗಿ ನಿಂತವಳೇ

ಅವಮಾನಗಳ ಹಾಸಿಹೊದ್ದ
ಬದುಕಲಿ, ಪ್ರೀತಿಯ ಹಠವ ಜೀವಧಾತುವಾಗಿ ಬೆಸೆದವಳೇ
ನಿನಗಾಗಿ ಬರೆಯುವೆ
ಮನುಜ ಬದುಕಿನ ಸೆಣಸಾಟದ ಪತ್ರವ

ಮುಗಿಯದ ಅಳಿಯದ ಬದುಕ
ಅರ್ಥಕೆ ವ್ಯಾಖ್ಯಾನವಾದವಳೇ
ನಿನಗಾಗಿ ಬದುಕಿ ಬರೆಯುವೆ
ಎಂದೆಂದೂ ಅಂತ್ಯವಿಲ್ಲದ
ಒಲವಿನೋಲೆ ಬರೆಯುವೆ

ಭೂಮಿಯ ಎದೆಯೊಳಗಿನೊಲವ ಬಿತ್ತಿ
ಒಲವು ಒಲವ ಸಂತೈಸಿದಂತೆ
ಆಕಾಶದಲ್ಲಿ ಹೂ ಅರಳಿದ ಬಗ್ಗೆ
ಪತ್ರವೊಂದ ಬರೆವೆ ನಿನಗಾಗಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...