Home / ಕವನ / ಕವಿತೆ / ಆತ್ಮಾನುರಾಗ

ಆತ್ಮಾನುರಾಗ

ಓ ಶಿವೆಯೇ !
ಮಲ್ಲಿಗೆ ಹೂ ಬನದ ನಿವಾಸಿಯೇ…
ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ
ಹೂಪಾದ ಮುದ್ರೆಯನೊತ್ತುತ್ತ ಬಾರೆ.

ನಿನ್ನ ದರ್ಶಿಸುವ
ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ
ಯುಗಾದಿ ಹಬ್ಬದ ಚಿಗುರು ಚಿಗುರು
ಮಾವು, ಬೇವು ಹೊಂಗೆ ತರುಗಳ
ಕುಂದದ ಸೊಂಪು, ತಂಪನೆರೆಯ ಬಾರೆ.

ಜಾಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ ತೋಟದಲಿ
ಮಧುವ ಹೀರುತ್ತಾ ಮೈಮರೆವ
ಬಣ್ಣ ಬಣ್ಣದ ಚಿಟ್ಟೆ, ದುಂಬಿಗಳ
ಕೇಳಿ ಕಲರವ ಗೋಷ್ಠಿಯ ರಸಾನಂದ
ವಿಹಾರಕ್ಕೆ ನೇತಾರಳಾಗಿ ಬಾರೆ.

ಸಗ್ಗದಾಘ್ರ್‍ಆಣಕ್ಕೆ ವಶವಾಗಿ
ಎಗ್ಗಿಲ್ಲದೆ ಮಾಡು, ಗೂಡುಗಳ ಮಾಡಿಕೊಂಡು
ಚಿತ್ತಾರದ ವರ್ಣಮಯ ತನುಗಳಲಿ
ರುದ್ರ ಭೀಕರ ಹೊರಳು, ಸುರುಳಿಗಳಲಿ ಮಲೆತಿರುವ
ಸನಿಹ ಸಾರೆ ಪೂತ್ಕರಿಸುವ
ಕ್ಷಣ ಮರೆಯೆ ಯಮ ಸದನಕ್ಕಟ್ಟುವ
ಸರ್ಪ ಬಗೆಗಳ ಮಣಿಸಿ
ಪ್ರೇಮ ಕೇದಿಗೆಯ ಮುಡಿಸ ಬಾರೆ.

ವಿಜ್ಞಾನ, ತಂತ್ರಜ್ಞಾನದ ನೇತ್ಯಾತ್ಮಕ ಪ್ರಭಾವದಲಿ
ಶ್ರಮದ ಸೊಲ್ಲೂ ಕೇಳ ಬಯಸದ
ಭೋಗ ಸಂಸ್ಕೃತಿಯ ಬೆನ್ನು ಬಿದ್ದಿರುವ

ಮಾರಿಗೆ ಸಂಸ್ಕೃತಿ ಅಪ್ಪಿ
ಜನ್ಮಜಾತ ಗುಣ, ನೀತಿಗೆ ತಿಲಾಂಜಲಿಯನಿತ್ತು
ಹಾಡುವುದನ್ನೇ ಮರೆತಿರುವ ಮಾನವ ಕೋಗಿಲೆಗಳ
ಜಾಗೃತಗೊಳಿಸುವ ಚಿತ್ತ ಚೇತನಿಯೆ ಬಾರೆ.

ಶುದ್ಧ ಸಲಿಲದಿ ತುಂಬಿ
ಜುಳು ಜುಳು ನಾದ ಮಾಡುತ್ತಾ
ನರ್ತಕಿಯ ಲಾಸ್ಯದಲಿ ಪ್ರವಹಿಸುವ ಹಿರಿಯ ತರಂಗಿಣಿಯ
ಇಕ್ಕೆಲದಲಿ ಸೊಕ್ಕಿ ಬೆಳೆದು
ವಸಂತನಾಗಮನದಿ ನವ ಜೀವದಾಂಗುಡಿಯ
ಗುಡಿಯಂತಿರುವ
ಮಾಮರಗಳೆದೆಯಲ್ಲಡಗಿ
ಅಮೃತ ಗಾನಧಾರೆಯ ಹರಿಸುವ
ಕೋಗಿಲೆ ಸಂಕುಲದ ಮುಂದಾಳಾಗಿ ಬಾರೆ.

ಭುವನ ಭಾಗ್ಯನು ಮೂಡಿ ಬರುವ ಪ್ರಶಸ್ತ ಕಾಲದಲಿ
ಕೀಟ, ಪಕ್ಷಿ, ಪ್ರಾಣಿಗಳು
ಆನಂದದಲಿ ದನಿಗೆ ದನಿ ಬೆರೆಸಿ
ಹೊಮ್ಮಿಸುವ ದಿವ್ಯಗಾನ ಧಾರೆಯಾಸ್ವಾದನೆಯಲಿ
ಒತ್ತೊತ್ತಿ ಕುಳಿತು
ಹೃದಯದಲಿ ಹೃದಯ ಬೆಸೆಯುವ
ಜೀವ ಸೊಬಗಿನ ದರ್ಶನವ ಮಾಡಿಸುವ
ಸತ್ಯ ಪ್ರೇಮವೇ ಮೈವೆತ್ತ ಮೂರುತಿಯಾಗಿ ಬಾರೆ
ಬಾ! ಬಾರೆ ಶಿವೆ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...