Home / ಲೇಖನ / ವಿಜ್ಞಾನ / ಅಂಗೈ ಆಳತೆಯೆ ವಿಮಾನಗಳು!

ಅಂಗೈ ಆಳತೆಯೆ ವಿಮಾನಗಳು!

ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ “ಕಿರುವಾಯು ವಾಹನಗಳು” ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ ವಿಮಾನಗಳಲ್ಲಿ ಯಾವ ಯಂತ್ರದ ಬಿಡಿಭಾಗಗಳು ಸಮುಚ್ಚಯಗೊಂಡಿರುತ್ತದೆಯೋ ಅದೆಲ್ಲಾ ಸಣ್ಣದಾಗಿ ಈ ಮೈಕ್ರೋ ವಿಮಾನದಲ್ಲಿದೆ. ಅಂಥದ್ದೇ ಯಂತ್ರ. ಪುಟಾಣಿ ವಿಡಿಯೋ ಕ್ಯಾಮರಾಗಳು ಎಲ್ಲವೂ ಇವುಗಳಲ್ಲಿ ಇರುತ್ತದೆ. ಕೇವಲ ೬ ಅಂಗುಲಗಳಷ್ಟು ಗಾತ್ರದ ಈ ವಾಯು ವಾಹನಗಳು ಅಗ್ಗವಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬರುತ್ತವೆ.

ಒಬ್ಬ ಸೈನಿಕನು ಇದನ್ನು ತನ್ನ ಹೆಗಲ ಚೀಲದ ಹಾಗೆ ಸಾಗಿಸಿಕೊಂಡು ಹೋಗಬಹುದು ಅದನ್ನು ಹೂರ ತೆಗೆದು ಹಾರಿಬಿಟ್ಟು ದೂರ ನಿಯಂತ್ರಣದಿಂದ ಇದನ್ನು ಗಮನಿಸಿಬಹುದು. ಗುಡ್ಡಬೆಟ್ಟಗಳಲ್ಲಿಯ ದುರ್ಗಮ ವಾತಾವರಣವನ್ನು, ಭೂಮಿಯಲ್ಲಿ ಅಡಗಿದ ಬಾಂಬುಗಳನ್ನು ಈ ಪುಟ್ಟ ವಿಮಾನ ಪತ್ತೆ ಹಚ್ಚುತ್ತದೆ. ರಾಸಾಯನಿಕ ಇಲ್ಲವೆ, ಜೈವಿಕ ಅಸ್ತ್ರಗಳ ಅಡಗು ಸ್ಥಾನಗಳನ್ನು ಸಹ ಇದು ಗುರುತಿಸುತ್ತದೆ.

ನಾಗರಿಕ ವಿಮಾನಯಾನಕ್ಕಾಗಿ ಇವುಗಳನ್ನು ಬಳಸಿದರೆ ಗಾಳಿಯ ಮಾಲಿನ್ಯವನ್ನು ಪರೀಕ್ಷಿಸಬಹುದು. ಬೆಂಕಿ ಹತ್ತಿದ ಕಟ್ಟಡಗಳನ್ನು ಪ್ರವೇಶಿಸಿ ಅಪಾಯಕ್ಕೊಳಗಾದವರನ್ನು ಗುರುತು ಹಚ್ಚಬಹುದು. ನಿರ್ಗಾವಣೆಗಾಗಿಯೂ ಇಂಥವುಗಳನ್ನು ಬಳಸಬಹುದು.

ಇವುಗಳ ವಿನ್ಯಾಸಗಳಲ್ಲಿ ಅನೇಕ ತೊಡಕುಗಳಿವೆ ಎಂದು ವಿನ್ಯಾಸಕರು ಹೇಳುತ್ತಾರೆ. ಸಾಮಾನ್ಯವಾಗಿ ಮಾಮೂಲ ವಿಮೂನಗಳ ರೆಕ್ಕೆಗಳು ಹಾರಾಟದಲ್ಲಿ ಒಂದೇ ಆಕಾರದಲ್ಲಿರುತ್ತವೆ. ಅದರ ಕಿರು ವಿಮಾನಗಳ ರೆಕ್ಕೆಗಳ ಆಕಾರವು ವೇಗಕ್ಕೆ ಬದಲಾಗುತ್ತವೆ. ಇಂಥಹ ಕಿರು ವಿಮಾನಗಳು ವಿಶ್ವದಲ್ಲೆಡೆ ಉಪಯೋಗಗೊಂಡರೆ ಅಸಂಖ್ಯಾತ ದುರಂತಗಳನ್ನು ತಡೆಯಬಹುದು. ಜೈ ಪುಟಾಣಿ ವಿಮಾನ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...