Home / ಲೇಖನ / ವಿಜ್ಞಾನ / ಅಂಗೈ ಆಳತೆಯೆ ವಿಮಾನಗಳು!

ಅಂಗೈ ಆಳತೆಯೆ ವಿಮಾನಗಳು!

ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ “ಕಿರುವಾಯು ವಾಹನಗಳು” ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ ವಿಮಾನಗಳಲ್ಲಿ ಯಾವ ಯಂತ್ರದ ಬಿಡಿಭಾಗಗಳು ಸಮುಚ್ಚಯಗೊಂಡಿರುತ್ತದೆಯೋ ಅದೆಲ್ಲಾ ಸಣ್ಣದಾಗಿ ಈ ಮೈಕ್ರೋ ವಿಮಾನದಲ್ಲಿದೆ. ಅಂಥದ್ದೇ ಯಂತ್ರ. ಪುಟಾಣಿ ವಿಡಿಯೋ ಕ್ಯಾಮರಾಗಳು ಎಲ್ಲವೂ ಇವುಗಳಲ್ಲಿ ಇರುತ್ತದೆ. ಕೇವಲ ೬ ಅಂಗುಲಗಳಷ್ಟು ಗಾತ್ರದ ಈ ವಾಯು ವಾಹನಗಳು ಅಗ್ಗವಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬರುತ್ತವೆ.

ಒಬ್ಬ ಸೈನಿಕನು ಇದನ್ನು ತನ್ನ ಹೆಗಲ ಚೀಲದ ಹಾಗೆ ಸಾಗಿಸಿಕೊಂಡು ಹೋಗಬಹುದು ಅದನ್ನು ಹೂರ ತೆಗೆದು ಹಾರಿಬಿಟ್ಟು ದೂರ ನಿಯಂತ್ರಣದಿಂದ ಇದನ್ನು ಗಮನಿಸಿಬಹುದು. ಗುಡ್ಡಬೆಟ್ಟಗಳಲ್ಲಿಯ ದುರ್ಗಮ ವಾತಾವರಣವನ್ನು, ಭೂಮಿಯಲ್ಲಿ ಅಡಗಿದ ಬಾಂಬುಗಳನ್ನು ಈ ಪುಟ್ಟ ವಿಮಾನ ಪತ್ತೆ ಹಚ್ಚುತ್ತದೆ. ರಾಸಾಯನಿಕ ಇಲ್ಲವೆ, ಜೈವಿಕ ಅಸ್ತ್ರಗಳ ಅಡಗು ಸ್ಥಾನಗಳನ್ನು ಸಹ ಇದು ಗುರುತಿಸುತ್ತದೆ.

ನಾಗರಿಕ ವಿಮಾನಯಾನಕ್ಕಾಗಿ ಇವುಗಳನ್ನು ಬಳಸಿದರೆ ಗಾಳಿಯ ಮಾಲಿನ್ಯವನ್ನು ಪರೀಕ್ಷಿಸಬಹುದು. ಬೆಂಕಿ ಹತ್ತಿದ ಕಟ್ಟಡಗಳನ್ನು ಪ್ರವೇಶಿಸಿ ಅಪಾಯಕ್ಕೊಳಗಾದವರನ್ನು ಗುರುತು ಹಚ್ಚಬಹುದು. ನಿರ್ಗಾವಣೆಗಾಗಿಯೂ ಇಂಥವುಗಳನ್ನು ಬಳಸಬಹುದು.

ಇವುಗಳ ವಿನ್ಯಾಸಗಳಲ್ಲಿ ಅನೇಕ ತೊಡಕುಗಳಿವೆ ಎಂದು ವಿನ್ಯಾಸಕರು ಹೇಳುತ್ತಾರೆ. ಸಾಮಾನ್ಯವಾಗಿ ಮಾಮೂಲ ವಿಮೂನಗಳ ರೆಕ್ಕೆಗಳು ಹಾರಾಟದಲ್ಲಿ ಒಂದೇ ಆಕಾರದಲ್ಲಿರುತ್ತವೆ. ಅದರ ಕಿರು ವಿಮಾನಗಳ ರೆಕ್ಕೆಗಳ ಆಕಾರವು ವೇಗಕ್ಕೆ ಬದಲಾಗುತ್ತವೆ. ಇಂಥಹ ಕಿರು ವಿಮಾನಗಳು ವಿಶ್ವದಲ್ಲೆಡೆ ಉಪಯೋಗಗೊಂಡರೆ ಅಸಂಖ್ಯಾತ ದುರಂತಗಳನ್ನು ತಡೆಯಬಹುದು. ಜೈ ಪುಟಾಣಿ ವಿಮಾನ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...