Home / ಕವನ / ಕವಿತೆ / ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಓ ನೋಡು ಕೋ ನೋಡು ಹೋ ನೋಡು ಹೈ ನೋಡು
ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ
ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ
ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ

ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ
ಹಕ್ಯಾಗಿ ಹಾರೇನೊ ಬುರ್ರನೆಂದೊ
ಓ ನೋಡು ಶಿವಶಿವಾ ಝಲ್ಲೆಂತೊ ನರನರಾ
ವಿಶ್ವಶಾಂತಿಯ ಭವನ ಝಗ್ಗನೆಂತೊ

ಓ ಕಂಡೆ ಹೋ ಕಂಡೆ ಮುರಳೀಯ ಪಡಕೊಂಡೆ
ಈಶ್ವರನ ಈ ತೇರು ಕಂಡೆ ಕಂಡೆ
ಸತ್ಯಯೋಗದ ಗುಡಿಯ ರಾಜಯೋಗದ ಎಡೆಯ
ಆದಿ ದೇವನ ಸಿರಿಯ ಸಾರಿ ಕಂಡೆ

ಯೋಗ ಯೋಗೇಶ್ವರರು ಕಾಲ ಕಾಲೇಶ್ವರರು
ಸಿದ್ಧ ಸಿದ್ಧರ ಗೆದ್ದ ನವ ಬುದ್ಧರು
ಜಗದ ಸೂರ್ಯರು ಇವರು ಯುಗದ ಸೂರ್ಯರು ಇವರು
ಕುಂಭಕರ್ಣರ ಕೊಂದ ಕಲಿರುದ್ರರು

ಇಲ್ಲಿ ಬಂದ ಮೇಲೆ ಎಲ್ಲಿ ಹೋಗಲು ಬೇಡ
ಗೊಲ್ಲ ಗೂಳಿಯ ಜನುಮ ಜಾರಿಹೋಯ್ತೊ
ಆ ಬುಟ್ಟಿ ಈ ಬುಟ್ಟಿ ಗುಳಬುಟ್ಟಿ ಎಣಿಬುಟ್ಟಿ
ನೂರು ಬುಟ್ಟಿಯ ಪೂಜಿ ತೀರಿಹೋತೊ

ಮುಳ್ಳು ಮಲ್ಲಿಗೆಯಾತು ಕಲ್ಲು ಕೇದಿಗೆಯಾತು
ಓ ಬಂತು ಬಂತೈಯ ಜಾತ್ರಿಕಾಲಾ
ಹುಚ್ಚಯ್ಯನಾ ತೇರು ಕಲಿತೇರು ಹೋತಯ್ಯ
ಬಂತೈ ಬಂತೈಯ ಸತ್ಯಕಾಲಾ

ರೈಲ್ಗಾಡಿ ಹತ್ತೈಯ್ಯ ಭಂವ್ವೆಂದು ಹೋಗಯ್ಯ
ಜೈಯ್ಯೆಂದು ಮುಟ್ಟಯ್ಯ ಮುಕ್ತಿಧಾಮಾ
ಬೈಲ್ಗಾಡಿ ಹತ್ತೈಯ ಬುರ್ರಂತ ಹಾರಯ್ಯ
ಸುರ್ರಂತ ಸಾರಯ್ಯ ಶಾಂತಿಧಾಮಾ

ಅಬ್ಬಯ್ಯ ಪರುವತ = ಆಬೂ ಪರ್ವತ (ರಾಜಸ್ಥಾನ), MT. ABU
ಅಪ್ಪಯ್ಯ = ಸರ್ವ ಆತ್ಮರ ತಂದೆಯಾದ ಪರಮಾತ್ಮ, God.
ಲಕ್ಕೀಕೊಳ್ಳಿ = ನಕ್ಕೀ ಸರೋವರ (Nakki Lake)ಅಬೂ ಪರ್ವತದ ಮೇಲಿನ ಸುಂದರ ಸರೋವರ.
ವಿಶ್ವ ಶಾಂತಿ ಭವನ= Universal Peace Hall. ೩೦೦೦ ಸುಖಾಸನಗಳನ್ನು ಹೊಂದಿದ, ಜಗತ್ತಿನ ಒಂಬತ್ತು ಭಾಷೆಗಳಿಗೆ ಭಾಷಣಗಳನ್ನು
ಭಾಷಾಂತರಿಸಿ ಕೇಳಿಸುವ ಹೇಡ್ ಫೋನ್ ಸೌಕರ್ಯವುಳ್ಳ ಹಾಗೂ ಸ್ಥಳದಲ್ಲಿಯೇ T V, ಪ್ರಸಾರದ ಸೌಲಭ್ಯ ಹೊಂದಿದ ಅತ್ಯಾಧುನಿಕ ಯೋಗದ ಹಾಲ್. ಇದರಲ್ಲಿ ಪ್ರತಿವರ್ಷ World Peace Conference ಜರಗುತ್ತದೆ.
ಅಪ್ಪಯ್ಯನ ರಥ = ಶಿವನ ಸಂದೇಶಕ್ಕೆ ಮಾಧ್ಯಮವಾಗಿರುವ ಶರೀರರಥ. Shiva Baba’s Chariot
ಆದಿದೇವ = ಶಿವನ ಜ್ಞಾನವಾಹನ ಬ್ರಹ್ಮ ಅಥವಾ ಬ್ರಹ್ಮಾ ಬಾಬಾ
ಮುಕ್ತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನಲೆ
ಶಾಂತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನೆಲೆ
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...