Home / ಕವನ / ಕವಿತೆ / ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು
ಬೆಳ್ಳಿಯ ಕೋಲ್ ಮಿಂಚು
ಬೆಳ್ಳಿ ಕುದುರೆ ಏರಿ ಬಂದಾನೆ
ನನ್ನ ಸರದಾರ||ಽಽಽಽ

ಮನಸು ಲಲ್ಲೆಯಾಡಕೊಂಡ್ಯಾವೆ
ಅವನ ನೋಡಿ||ಽಽಽಽ
ಅಂಬರದ ಹೊಂಬೆಳಕಲ್ಲಿ
ಇಬ್ಬನಿಯ ತಂಪಲ್ಲಿ ಜೊತೆಗೂಡಿ
ಆಡಿದ ಆಟದಾಗ
ನಾಚಿ ಮೊಗ್ಗಾದೆನೆ||ಽಽಽಽ

ಗಂಡು: ತಾಸು ಹೊತ್ತಿನ ಚೋರಿ
ಕಣ್ಣ ಮುಚ್ಚಾಲೆ ಆಡಿ
ಕಣ್ಣ್‌ಸನ್ನೆ ನೋಟವ ಬೀರಿ
ಕರೆದಾಳೆ ನನ್ನ ಗೆಳತಿ
ಸುಂಕದ ಕೋಯ್ಲ ಬೆಡಗಿ
ನನ್ನವಳೇಽಽಽಽ ನನ್ನ ಗೆಳತಿ||

ಹೆಣ್ಣು: ತೊಟ್ಟ ಜರಿಯ ಪೇಟ
ಉಟ್ಟ ಪಂಚೆ ರೇಶಿಮೆ
ಕೆಂಪಾನೆ ಹಣೆಯ ತಿಲಕವನಿರಿಸಿ
ಚಿಗುರ ಮೀಸೆ ತಿರುವಿದಾಗ ನನ್ನ ಸರದಾರ
ರಾಜಠೀವಿ ದುಂಡು ಮೊಗದಾಗಽಽಽಽ
ಬಳಿಗೆ ಬಂದಾನೆ ನನ್ನ ಸೆಳೆದಾನೆ
ಮಲ್ಲಿಗೆ ದಂಡೆಯ ಮುಡಿಸ್ಯಾನೆ
ನನ್ನ ನಲ್ಲಾಽಽಽಽ
ಮೆಲ್ಲನೆ ಕೈಯ ಹಿಡಿದ್ಯಾನೆಽಽಽಽ

ಗಂಡು: ಪಚ್ಚೆ ಹಸಿರ ಹಾಸಿಗೆ
ಹೆಜ್ಜೆ ಹೆಜ್ಜೆಯಂದವ ಕೂಡಿ
ಲಜ್ಜೆಯಿಂದಲಿ ಬಳುಕುವ ಪೋರಿ
ಮುದ್ದು ಮೊಗ್ಗ ಅರಳಿ ಲತೆಯಂತೆ
ಮೈದೋರಿಽಽಽಽ
ಮುಂಗುರುಳ ನಗೆ ಬೀರಿ ಸೆಳೆದಾಳೆ
ಸಗ್ಗದ ಸಿರಿಯ ತೋರ್‍ಯಾಳೆ
ಕಾಲ್‌ಗೆಜ್ಜೆ ಹಿಗ್ಗನ್ನು ತಂದು ಮೆರೆಸ್ಯಾಳೇಽಽಽಽ

ಹೆಣ್ಣು: ಸುಗ್ಗಿಯ ಸಿರಿದೋರಿ
ನಡು ಕಟ್ಟೆ ನಗೆ ಬೀರಿ
ರಾಶಿ ರಾಶಿ ಭಾಗ್ಯವ ತಂದಾನೆ
ಮುತ್ತಿನ ಹಾರ ತೊಡಿಸ್ಯಾನೆ
ಸಿರಿದೇವಿವೆ||ಽಽಽಽ
ನನ್ನ ಮನವ ತಣಿಸ್ಯಾನೆ
ತಂದಾನಾನಿ ತಾನಿ ಕುಣಿಸ್ಯಾನೆ

ಗಂಡು: ನಡು ಗೆಜ್ಜೆಡಾಬಿನ ಬಿಂಕದ ಗೆಳತಿ ಬಿನ್ನಾಣಗಿತ್ತಿ
ಸಾಕು ಸಾಕೆಲೆ ಮಾಟಗಾತಿ ಅಂದಗಾತಿ
ಸಂಕರಮಣ ಚಪ್ಪರದಾಗೆ ಮದುವಣಗಿತ್ತಿ
ಹಸನಾದ ಹಸೆ ಮೇಲೆ ನಿಂದವಳೆ
ಹಸಿರಾದ ಬಾಳಿಗೆ ಉಸಿರಾಗು ನನ್ನವಳೆ
ತುಂಬಿದ ಬಾಳಿಗೆ ಹೊನ್ನ ಕಳಶವ ಇಟ್ಟವಳೆಽಽಽಽ

ಹೆಣ್ಣು: ನಿನ್ನ ಮಾತಿಗೆ ಮನ ಸೋತು ನಿಂದೆನೋ
ಹಸೆ ಮಣೆಯ ಏರಿ ಹೊಸತನದ ಬಾಳ್ವೆಗೆ
ಉಷೆಯಾಗಿ ಶಶಿ ನಿನ್ನಲ್ಲಿ ನಾ ಒಂದಾಗಿ ಬರುವೆನೋ
ಬೆಳ್ಳಿ ಕುದರಿ ಏರಿ ಚೈತ್ರದಾ ಹೊನಲಿಗೆ
ನಾ ಮಿಂದು ಬರುವೆನೋಽಽಽಽ
ಭೂ ತಾಯ ಮಡಿಲ ಹೂವಾಗಿ ನಲಿಯುವೆನೋಽಽಽಽ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...