Home / ಕಥೆ / ಸಣ್ಣ ಕಥೆ / ಸರ್ವಾಧಿಕಾರಿ ನಂಜರಾಜಯ್ಯ

ಸರ್ವಾಧಿಕಾರಿ ನಂಜರಾಜಯ್ಯ

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ.

ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ ಕನ್ನಂಬಾಡಿ ವೆಂಕಟಪತಯ್ಯನೆಂಬಾತನನ್ನು ಸೇರಿಸಿಕೊಂಡು ಆಡಳಿತವನ್ನು ಮೊದಲಿಟ್ಟರು. ಮೂವರೂ ಸೇರಿ ಅರಮನೆಯ ಆದಾಯದಲ್ಲಿ ಸಾಧ್ಯವಾದಷ್ಟು ಹಣವನ್ನು ತಾವೇ ಸ್ವಂತ ವೆಚ್ಚಕ್ಕಾಗಿ ಉಪಯೋಗಿಸಿಕೊಂಡುದಲ್ಲದೆ ತನ್ನ ಊಳಿಗದವರು ಲಂಚ ತಿಂದು ಶಿಫಾರಸುಮಾಡಿದವರಿಗೆ ಕೆಲಸಗಳನ್ನು ಮಾಡಿಸುತ್ತಲಿದ್ದರು. ಅಯೋಗ್ಯರಾದವರು ಅಧಿಕಾರಿಗಳಾದುದಲ್ಲದೆ ರಾಜ್ಯದ ಆದಾಯವು ಈ ಮೂವರ ಮತ್ತು ಅವರ ಅನುಚರರ ಪಾಲಾಗುತ್ತಿತ್ತು.

ಹೀಗೆ ೫-೬ ವರ್ಷಗಳು ನಡೆದವು. ವಂಚನೆಯಿಂದ ಮೂವರೂ ಹಣವನ್ನು ಸಂಪಾದಿಸಿದ ನಂಜರಾಜಯ್ಯನೂ ಐಶ್ವರ್ಯವನ್ನು ಸೇಕರಿಸಿಕೊಂಡಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅಂತ್ಯಕಾಲವು ಸಮೀಪವಾಯಿತು. ಆಗ ನಂಜರಾಜಯ್ಯನು ತಾನು ಮಾಡಿದ ನೀಚಕಾರ್ಯಕ್ಕೆ ಮನಸ್ಸಿನಲ್ಲಿ ನೊಂದುಕೊಂಡನು. ತಾನು ಗಳಿಸಿಟ್ಟ ದ್ರವ್ಯವು ರಾಜರದೇ ಆಗಿದ್ದುದರಿಂದ ತನ್ನ ಕುಟುಂಬ ಚಂದಾಯಮ್ಮಣ್ಣಿಯ ಜೀವನಕ್ಕೆ ಮಾತ್ರ ಸ್ವಲ್ಪ ಉಳಿಸಿಕೊಂಡು ಉಳಿದ ೨ ಲಕ್ಷ ವರಹಗಳಷ್ಟು ಧನವನ್ನು ದೊರೆಗಳಿಗೆ ತಂದೊಪ್ಪಿಸಿದನು. ಮಾತುಶ್ರೀಯವರನ್ನು ಕಂಡು ಯಥಾರ್ಥವನ್ನು ತಿಳಿಸಿ ದುಷ್ಟರ ವಿಷಯವಾಗಿ ಎಚ್ಚರಿಕೆ ಕೊಟ್ಟು ಪಶ್ಚಾತ್ತಾಪಡುತ್ತ ಈತನು ೧೭೩೯ರಲ್ಲಿ ಶ್ರೀರಂಗಪಟ್ಟಣದಲ್ಲಿಯೇ ಕಾಲವಾದನು. ಸಾಯುವ ಕಾಲದಲ್ಲಿ “ನನ್ನ ತರುವಾಯು ನನ್ನ ಪದವಿಗೆ ದಳವಾಯಿ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜನು ಬಂದರೆ ತೊಂದರೆಯೇ ಸಂಭವಿಸುವುದು” ಎಂದು ಎಚ್ಚರಿಸಿದ್ದನು. ಆದರೂ ಸರ್ವಾಧಿಕಾರಿತನವು ಆ ಕರಾಚರಿ ನಂಜರಾಜಯ್ಯನಿಗೇ ಪ್ರಾಪ್ತವಾಯಿತು.
*****
[ವಂಶರತ್ನಾಕರ ಪುಟ ೧೬೫ ; ವಂಶಾವಳಿ-ಪುಟ ೧೭೫-೧೭೬; ಮತ್ತು ವಿಲ್ಕ್ಸ್, ಮುಂದಿನ ಕಥೆಗಳಲ್ಲಿ ವಿಲ್ಕ್ಸ್ ಗ್ರಂಥವನ್ನೇ ಹೆಚ್ಚಾಗಿ ಅವಲಂಬಿಸಿದೆ]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...