Home / ಕಥೆ / ಸಣ್ಣ ಕಥೆ / ಸರ್ವಾಧಿಕಾರಿ ನಂಜರಾಜಯ್ಯ

ಸರ್ವಾಧಿಕಾರಿ ನಂಜರಾಜಯ್ಯ

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ.

ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ ಕನ್ನಂಬಾಡಿ ವೆಂಕಟಪತಯ್ಯನೆಂಬಾತನನ್ನು ಸೇರಿಸಿಕೊಂಡು ಆಡಳಿತವನ್ನು ಮೊದಲಿಟ್ಟರು. ಮೂವರೂ ಸೇರಿ ಅರಮನೆಯ ಆದಾಯದಲ್ಲಿ ಸಾಧ್ಯವಾದಷ್ಟು ಹಣವನ್ನು ತಾವೇ ಸ್ವಂತ ವೆಚ್ಚಕ್ಕಾಗಿ ಉಪಯೋಗಿಸಿಕೊಂಡುದಲ್ಲದೆ ತನ್ನ ಊಳಿಗದವರು ಲಂಚ ತಿಂದು ಶಿಫಾರಸುಮಾಡಿದವರಿಗೆ ಕೆಲಸಗಳನ್ನು ಮಾಡಿಸುತ್ತಲಿದ್ದರು. ಅಯೋಗ್ಯರಾದವರು ಅಧಿಕಾರಿಗಳಾದುದಲ್ಲದೆ ರಾಜ್ಯದ ಆದಾಯವು ಈ ಮೂವರ ಮತ್ತು ಅವರ ಅನುಚರರ ಪಾಲಾಗುತ್ತಿತ್ತು.

ಹೀಗೆ ೫-೬ ವರ್ಷಗಳು ನಡೆದವು. ವಂಚನೆಯಿಂದ ಮೂವರೂ ಹಣವನ್ನು ಸಂಪಾದಿಸಿದ ನಂಜರಾಜಯ್ಯನೂ ಐಶ್ವರ್ಯವನ್ನು ಸೇಕರಿಸಿಕೊಂಡಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅಂತ್ಯಕಾಲವು ಸಮೀಪವಾಯಿತು. ಆಗ ನಂಜರಾಜಯ್ಯನು ತಾನು ಮಾಡಿದ ನೀಚಕಾರ್ಯಕ್ಕೆ ಮನಸ್ಸಿನಲ್ಲಿ ನೊಂದುಕೊಂಡನು. ತಾನು ಗಳಿಸಿಟ್ಟ ದ್ರವ್ಯವು ರಾಜರದೇ ಆಗಿದ್ದುದರಿಂದ ತನ್ನ ಕುಟುಂಬ ಚಂದಾಯಮ್ಮಣ್ಣಿಯ ಜೀವನಕ್ಕೆ ಮಾತ್ರ ಸ್ವಲ್ಪ ಉಳಿಸಿಕೊಂಡು ಉಳಿದ ೨ ಲಕ್ಷ ವರಹಗಳಷ್ಟು ಧನವನ್ನು ದೊರೆಗಳಿಗೆ ತಂದೊಪ್ಪಿಸಿದನು. ಮಾತುಶ್ರೀಯವರನ್ನು ಕಂಡು ಯಥಾರ್ಥವನ್ನು ತಿಳಿಸಿ ದುಷ್ಟರ ವಿಷಯವಾಗಿ ಎಚ್ಚರಿಕೆ ಕೊಟ್ಟು ಪಶ್ಚಾತ್ತಾಪಡುತ್ತ ಈತನು ೧೭೩೯ರಲ್ಲಿ ಶ್ರೀರಂಗಪಟ್ಟಣದಲ್ಲಿಯೇ ಕಾಲವಾದನು. ಸಾಯುವ ಕಾಲದಲ್ಲಿ “ನನ್ನ ತರುವಾಯು ನನ್ನ ಪದವಿಗೆ ದಳವಾಯಿ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜನು ಬಂದರೆ ತೊಂದರೆಯೇ ಸಂಭವಿಸುವುದು” ಎಂದು ಎಚ್ಚರಿಸಿದ್ದನು. ಆದರೂ ಸರ್ವಾಧಿಕಾರಿತನವು ಆ ಕರಾಚರಿ ನಂಜರಾಜಯ್ಯನಿಗೇ ಪ್ರಾಪ್ತವಾಯಿತು.
*****
[ವಂಶರತ್ನಾಕರ ಪುಟ ೧೬೫ ; ವಂಶಾವಳಿ-ಪುಟ ೧೭೫-೧೭೬; ಮತ್ತು ವಿಲ್ಕ್ಸ್, ಮುಂದಿನ ಕಥೆಗಳಲ್ಲಿ ವಿಲ್ಕ್ಸ್ ಗ್ರಂಥವನ್ನೇ ಹೆಚ್ಚಾಗಿ ಅವಲಂಬಿಸಿದೆ]

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...