Home / ಕವನ / ಕವಿತೆ / ಸ್ವಾತಂತ್ರ್ಯ- ಕನಸು ನನಸು

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ
ಮಂದರಿ ಹೊದ್ದು ಬಂದಿದ್ದರು
ತೆವಳುತ್ತ, ಸರ್ಪಸಂತತಿ
ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು.
ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ
ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ,
ಒಡೆದು ಆಳುವ ತಂತ್ರ ಕುತಂತ್ರ
ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು
ಅಪರ ಅನಾಗರಿಕತೆ, ಮತ್ತೆ ಕೆಲವರ
ಕೈಯಲ್ಲಿತ್ತು ಧರ್ಮಗಾಥೆಯ ಹೊತ್ತಿಗೆ
ಬೆಣ್ಣೆಮಾತಿನ ಬುದ್ದಿವಂತರ ಮತ್ತೊಂದು
ಅವತಾರ – ಅವಾಂತರ ಮತಾಂತರ
ಕನಸಾಯಿತು ಸ್ವಾತಂತ್ರ್ಯ
ಹೆಣ್ಣು, ಹೊನ್ನು ಮಣ್ಣುಗಳ ಪರತಂತ್ರ
ಹುಟ್ಟದಿದ್ದರೆ ಹೇಗೆ? ಸೇಡು
ಮನೆ ಮನೆಯಂಗಳದಿ ಒಂದೇ ಕಲರವ
ಹಕ್ಕು-ಸ್ವಾತಂತ್ರ್ಯ, ಅಲ್ಲೊಬ್ಬ ಇಲ್ಲೊಬ್ಬರಲ್ಲ
ಅವರೊಳಗೆಲ್ಲಾ ಒಬ್ಬನೆ-ವೀರ
ಮುತ್ತಿದರು ಅಕ್ಷೋಹಿಣಿ, ಅಕ್ಷೋಹಿಣಿ
ಹಣಾಹಣಿಗೆ, ನೆತ್ತರುಕ್ಕಿಸಿದರು. ಗಲ್ಲು ಗೆದ್ದರು.
ಬೂಟು ಕಾಲಿಗೆ, ತುಪಾಕಿ ಪೀರಂಗಿಗೂ
ಗುಂಡುಗುಂಡಿಗೂ ಗುಂಡಿಗೆಯ ಒಡ್ಡಿದರು.
ಒಂದೇ ಮಂತ್ರಘೋಷ -ಆದ್ಯ ಕನಸು
ತರುಣ ಧಮನಿಗಳಲಿ ಉರಿವ ಶಿಖೆ
ಜಾತಿ ಮತ ಪಂಥಗಳ ನಡುವೆ ಒಂದೇ ಮರ್ಮ
ಸ್ವಾತಂತ್ರ್ಯ ನಮ್ಮ ಧರ್ಮ

ಹುತ್ತ ಬೆಳೆದಿತ್ತು ಬೃಹದಾಕಾರ
ಆದರೆ ಪಕ್ಕದಲ್ಲೊಬ್ಬ ಅರೆನಗ್ನ ಮಂತ್ರವಾದಿ
ನಿಂತಿದ್ದ ಪುಂಗಿ ಹಿಡಿದು, ಹೆಡೆ ಎತ್ತಿದ
ಸರ್ಪಗಳ ಹೆಡೆ ಮುರಿಗೆ ಕಟ್ಟಲು
ಮತ್ತೊಬ್ಬ ಬಿಲ್ಲುಗಾರ ಕೋನೆ ಕೋನೆಗೂ
ಕಣ್ಣು ಮುಚ್ಚಿ ಬಾಣ ಬಿಡತೊಡಗಿದ.
ಇರುವೆ ಕಟ್ಟಿದ ಗೂಡು
ತನ್ನದೆಂದು ಬೀಗುತ್ತಿದ್ದ ಸರ್ಪಗಳು
ಸದ್ದಿಲ್ಲದೇ ಸರಿದು ಹೋದವು
ಹುತ್ತಕ್ಕೆ ಬೆಂಕಿ ಬೀಳತೊಡಗಲು
ನನಸಾಯಿತು ಸ್ವಾತಂತ್ರ್ಯ
ಭಾರತೀಯರ ಎದೆಗೂಡ ಕಹಳೆಯಲ್ಲೀಗ
ಜೈಹಿಂದ ಒಂದೇ ಮಂತ್ರ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...