Home / ಕವನ / ಕವಿತೆ / ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ….
ನಿನ್ನ ಬಾದಾಮಿ ಕಣ್ಣುಗಳ
ಪರಿಚಯ ನನಗಿರಲಿಲ್ಲ.
ನಿನ್ನ ಬೆವರಿನ ಪರಿಮಳಕ್ಕೆ
ನನ್ನ ಮೂಗು ಅರಳುತ್ತದೆಯೆಂದು
ನನಗೆ ಗೊತ್ತಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಬೆಚ್ಚನೆಯ ಎದೆಯಲ್ಲಿ
ಮರೆತ ಸಂಗತಿಗಳಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
ನನ್ನ ಪ್ರೀತಿವಂಚಿತ ಕವಿತೆಗೆ
ನೀನು ಬಣ್ಣದ ಅಂಗಿ ತೊಡಿಸುತ್ತಿ
ಎಂದು ತಿಳಿದಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಭಾರವಾದ ಹೆಜ್ಜೆಗಳು
ನನ್ನ ದಣಿಸುತ್ತವೆ
ಎಂದು ತಿಳಿದಿರಲಿಲ್ಲ.
ನಿನ್ನ ಬಡಿದ ಕೆನ್ನೆಗಳು
ನನ್ನನ್ನು ಕಂಗೆಡಿಸುತ್ತವೆ
ಎಂದುಕೊಂಡಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ತುಟಿಯಲ್ಲಿ ವಸಂತನ
ನಗುವನ್ನು ಕಂಡು
ಓಡಿಬಂದಿದ್ದೆನಾದರೂ
ಇದೀಗ ಮಂಜಿನಲ್ಲಿ ಇಡಿಯಾಗಿ
ಹೂತುಹೋಗಿದ್ದೇನೆ.

ಈ ಒಂದು ಕ್ಷಣದ ಹಿಂದೆ….
ಬೆಳಗಿನ ಸೂರ್ಯನನ್ನು
ಭೇಟಿಯಾಗೋಣ ಎಂದು
ಕರೆದದ್ದು ನೀನೆ.
ಇದೀಗ ಮುಸ್ಸಂಜೆ
ಹೊರಡೋಣ ಅನ್ನುತ್ತಿದ್ದೀಯಾ….
… ಎಂತಹ ಕೊನೆ??


Tagged:

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...